ಮಾರ್ಟಿನ್ ಲೂಥರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
ಡಾ. ಬಿ.ಆರ್.ಅಂಬೇಡ್ಕರ್
 
== ಬೋಧನೆ ಮತ್ತು ಕಾರ್ಯ ==
ಲೂಥರ್ ಬೋಧನೆ ಕೆಥೋಲಿಕರ ಬೋಧನೆಯಂಥಲ್ಲದೆ ಬೇರೆ ರೀತಿಯದ್ದಾಗಿತ್ತು. ಜನರ ಅಮಿತ ಭಕ್ತಿ ಹಾಗೂ ತನ್ನ ಆತ್ಮರಕ್ಷಣೆ ಬಗ್ಗೆ ಚಿಂತನೆ ಮೂಡಿ ದಿನನಿತ್ಯ ನೆರವೇರಿಸಬೇಕಾದ ದಿವ್ಯ ಕರ್ಮಗಳ ಆಚರಣೆಯಲ್ಲಿ ನಿರುತ್ಸಾಹ ಕೋರಿದ. ಕೆಲವು ಕಾಲದ ಅನಂತರ ಅವನ್ನು ಪೂರ್ಣವಾಗಿ ಬಿಟ್ಟುಬಿಟ್ಟ. ವ್ಯಕ್ತಿ ತನ್ನ ಪ್ರೀತಿ ವಿಶ್ವಾಸಗಳಿಂದಲೇ ನೀತಿವಂತನೆಂದು ನಿರ್ಣಯಿಸಲ್ಪಡುವನೇ ವಿನಾ ತನ್ನ ಕಾರ್ಯಗಳಿಂದಲ್ಲ ಎಂಬ ಸಿದ್ಧಾಂತವನ್ನು ಬೋಧಿಸತೊಡಗಿದ. ಇದೇ ಸುವಾರ್ತೆಯ ತಿರುಳು ಎಂದು ಭಾವಿಸಿದ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಗಸ್ಟಿನ್ನರ ಬೋಧನೆಗಳಲ್ಲಿ ಅನೇಕ ನಿದರ್ಶನಗಳು ಕಂಡುಬಂದು ಅವನ್ನೇ ಹಿಡಿದು ಸಾಧಿಸಿ ತನ್ನ ಬೋದನೆಯ ಮೂಲಸಿದ್ಧಾಂತವಾಗಿ ಸ್ಥಾಪಿಸಿದ. ದೇವರಿಗೂ ಮನುಷ್ಯರಿಗೂ ಸಭೆ ಮತ್ತು ಅರ್ಚಕರು ಮಧ್ಯವರ್ತಿಗಳಾಗಿರುತ್ತಾರೆಂಬ ನಂಬಿಕೆಯನ್ನು ಅಲ್ಲಗಳೆದ. ಇದೇವೇಳೆಗೆ ಟಿಡ್‍ಸಲ್ ಎಂಬ ಸಂನ್ಯಾಸಿ ಹತ್ತನೆಯ ಲಿಯೋ ಎಂಬ ಪೋಪನಿಂದ ಇನ್‍ಡಲ್‍ಜನ್ಸ್‍ಸ್ ಎಂಬ ಅಧಿಕಾರ ಪತ್ರಿಕೆಗಳನ್ನು ಮಾರಿ ರೋಮ್ ನಗರದ ಸೇಂಟ್ ಪೀಟರ್ಸ್ ದೇವಸ್ಥಾನದ ದುರಸ್ತಿಗಾಗಿ ಹಣವಸೂಲು ಮಾಡುತ್ತಿರುವುದನ್ನು ಕಂಡು ಅದನ್ನು ಪ್ರತಿಭಟಿಸುವ 95 ನಿಬಂಧಗಳನ್ನು ಬರೆದು ವಿಟನ್‍ಬರ್ಗನ ಮುಖ್ಯ ದೇವಸ್ಥಾನದ ಕದಗಳಿಗೆ ಹಚ್ಚಿಸಿದ. ಈ ಕಾರ್ಯದಿಂದಾಗಿ ಜನರ ಆದರಣೆಗೆ ಪಾತ್ರನಾದ. ಆದರೆ ಇದರಿಂದ ಪಾಷಂಡ ಬೋಧನೆ ಹರಡಿಸುವ ಅಪರಾಧಕ್ಕೆ ರೋಮ್ ಸಭೆಯಲ್ಲಿ ವಿಚಾರಣೆಗೆ ಗುರಿಯಾಗಬೇಕಾಯಿತು. ಪೋಪನ ಅಗ್ರಹದಿಂದ ಸ್ಯಾಕ್ಸ್‍ನಿಯ ಅಧಿಕಾರಿಯಾದ ಮೂರನೆಯ ಫ್ರೆಡರಿಕ್ಕನ ಆಶ್ರಯ ಸೇರಿದ. 1520ರಲ್ಲಿ ಲೂಥರ್ ತನ್ನ ಮೂಲಸಭೆಯನ್ನು ಪೂರ್ತಿಯಾಗಿ ಬಿಟ್ಟುಬಿಟ್ಟ. ಅನಂತರ ಅನೇಕ ಗ್ರಂಥಗಳ ಮೂಲಕ ತನ್ನ ಅನುಯಾಯಿಗಳ ನಂಬಿಕೆಗಳನ್ನು ಬಲಪಡಿಸಿ ಪ್ರತ್ಯೇಕವಾದ ಸಭೆಯನ್ನೇ ಸ್ಥಾಪನೆ ಮಾಡಿದ. ಬೈಬಲಿನ ಹೊಸ ಒಡಂಬಡಿಕೆಯನ್ನು ಗ್ರೀಕ್‍ನಿಂದ ಜರ್ಮನಿಗೆ ಅನುವಾದ ಮಾಡಿದ. ಹಳೆಯ ಒಡಂಬಡಿಕೆಯನ್ನು ಅನುವಾದ ಮಾಡಿದ. ಹಳೆಯ ಒಡಂಬಡಿಕೆಯನ್ನು ಅನುವಾದ ಮಾಡಿದುದೇ ಅಲ್ಲದೆ ಅದಕ್ಕೆ ಅನೇಕ ವ್ಯಾಖ್ಯಾನಗಳನ್ನೂ ಬರೆದ.
"https://kn.wikipedia.org/wiki/ಮಾರ್ಟಿನ್_ಲೂಥರ್" ಇಂದ ಪಡೆಯಲ್ಪಟ್ಟಿದೆ