ತಾಲ್ಲೂಕಿನಲ್ಲಿ ವ್ಯವಸಾಯಕ್ಕೆ ಸಹಾಯಕವಾಗಿ ಏಷ್ಯಾದಲ್ಲಿ ಮೊದಲ ಹನಿ ನೀರವಾರಿ ಪದ್ದತಿ ಮರೋಳ ಏತ ನೀರಾವರಿ ಕೆಲವು ಬಾವಿಗಳಿವೆ. ಇಳಕಲ್ಲು, ಬೂದಿಹಾಳ, ಚಿಕ್ಕಮಗಿ, ಅಮೀನಗಡ ಮುಂತಾದ ಕಡೆ ಜಿನಗು ಕೆರೆಗಳ ಬೇಸಾಯವಿದೆ. ಚಿತ್ತವಾಡಗಿ ಕೆರೆ ಯೋಜನೆಯಿಂದ ಲಾಭಪಡೆಯುವ ತಾಲ್ಲೂಕುಗಳಲ್ಲಿ ಹುನಗುಂದವೂ ಒಂದು. ಜೋಳ, ಸಜ್ಜೆ, ಸೇಂಗಾ, ದ್ವಿದಳ ಧಾನ್ಯಗಳು, ಬತ್ತ, ಗೋದಿ, ಹತ್ತಿ ಮುಂತಾದುವನ್ನು ಬೆಳೆಯುತ್ತಾರೆ. ವಿವಿಧ ತೈಲಬೀಜಗಳಲ್ಲಿ ಹೆಚ್ಚಾಗಿ ರೇಪ್ ಬೀಜವನ್ನು ಬೆಳೆಯುತ್ತಾರೆ. ಪಶುಪಾಲನೆಯಿದ್ದು ಅವುಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ನೆರವಾಗುವ ಪಶುವೈದ್ಯಾಲಯ ಗಳಿವೆ. ಮತ್ಸ್ಯೋದ್ಯಮ ಸಾಧಾರಣವಿದೆ. ಈ ತಾಲ್ಲೂಕಿನಲ್ಲಿ ಹತ್ತಿ ಸಂಸ್ಕರಣ ಕಾರ್ಖಾನೆಗಳಿವೆ. ಕೈಮಗ್ಗದ ಖಣಗಳಿಗೆ, ಸೀರೆಗಳಿಗೆ ಈ ತಾಲ್ಲೂಕು ಪ್ರಸಿದ್ಧ. ಮರಗೆಲಸ, ಬಿದಿರು ವಸ್ತುಗಳ ತಯಾರಿಕೆ ಮುಂತಾದ ಕೈಗಾರಿಕೆಗಳಿವೆ.