ವಚನ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 2409:4071:E17:6C84:CDA3:EE24:A8EB:C159 (talk) to last revision by Pavanaja
೧ ನೇ ಸಾಲು:
''' ಸಮಗ್ರ ವಚನ ಸಾಹಿತ್ಯ''' [[ಕನ್ನಡ ಸಾಹಿತ್ಯ|ಕನ್ನಡದ ಸಾಹಿತ್ಯದ]] ಪ್ರಮುಖ ಪ್ರಕಾರಗಳಲ್ಲಿ ಒಂದು. ೧೧ನೇ ಶತಮಾನದ ಉತ್ತರಾರ್ಧದಲ್ಲಿ ಉದಯಿಸಿ ೧೨ನೇ ಶತಮಾನದ ಕಡೆಯವರೆಗೂ ಬಸವಣ್ಣನವರ-ಜನಸಾಮಾನ್ಯರ ಆಂದೋಲನದ ಭಾಗವಾಗಿ ಬೆಳೆದು ಬಂತು. ಇದು ಸಾಹಿತ್ಯ ಪರಿಭಾಷೆಯ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರದ [[ಕಾವ್ಯ]]. ಹಾಡಿದರೆ ಹಾಡಾಗುವ, ಓದಿದರೆ [[ಗದ್ಯ|ಗದ್ಯವಾಗುವ]] ಕನ್ನಡದ ವಿಶೇಷ ಕಾವ್ಯ ಪ್ರಕಾರ. ವಚನ ಸಾಹಿತ್ಯವು ತನ್ನ ಕಾಲದಲ್ಲಿನ ಜನರ ಮನೋಭಿವ್ಯಕ್ತಿಗೆ ಸಂಗಾತಿಯಾಯಿತು.'''ವಚನ''' ಎಂದರೆ 'ಪ್ರಮಾಣ', 'ಕೊಟ್ಟ ಮಾತು' ಎಂದರ್ಥ.
 
== ಇತಿಹಾಸ ==bsdk
*ವಿಸ್ತೃತ ಲೇಖನ:[[ಕನ್ನಡದಲ್ಲಿ ವಚನ ಸಾಹಿತ್ಯ]]
೧೧ನೇ ಶತಮಾನದಲ್ಲಿ ಉದಯಿಸಿದ ಧರ್ಮ ಪ್ರೇರಿತ ಸಾಹಿತ್ಯವಾದ ವಚನವು, ಕನ್ನಡದ [[ಪ್ರಾಚೀನ ಸಾಹಿತ್ಯ|ಪ್ರಾಚೀನ ಸಾಹಿತ್ಯದಡಿಯಲ್ಲಿ]] ವರ್ಗಾಯಿಸಲ್ಪಟ್ಟಿದೆ. ಸ್ವಂತಿಕೆಯಿಂದ ಮೆರೆವ ವಚನಗಳು [[ಕನ್ನಡ ಸಾಹಿತ್ಯ|ಕನ್ನಡ ಸಾಹಿತ್ಯದಲ್ಲಿ]] ಪ್ರಭಾವಶಾಲಿ ಆತ್ಮವಿಮರ್ಶೆಯ ಮಾಧ್ಯಮವಾಗಿ ಸ್ವತಂತ್ರವಾಗಿ ಬೆಳೆದು ವಿಜೃಂಭಿಸಿ ಮುಂದಿನ ಸಾಹಿತ್ಯ ಪರಂಪರೆಗಳ ಮೇಲೆ ಪ್ರಭಾವ ಬೀರಿ [[ವಿಶ್ವಸಾಹಿತ್ಯ|ವಿಶ್ವಸಾಹಿತ್ಯದಲ್ಲೂ]] ಒಂದು ಅವಿಭಾಜ್ಯ ಅಂಗವಾಗಿ ಉಳಿದಿದೆ. ವಚನ ಸಾಹಿತ್ಯವನ್ನು, ವಚನಗುರು ದೇವರ ದಾಸಿಮಯ್ಯ ಮಾದಾರ ಚೆನ್ನಯ್ಯ ನವರ ಆದಿಯಾಗಿ [[ಬಸವಣ್ಣ|ಗುರು ಬಸವಣ್ಣನವರು]] ಮತ್ತು ಅವರ ಸಮಕಾಲೀನ ಶರಣರು ನೀಡಿದರು.
೧೦ ನೇ ಸಾಲು:
[[ಸಮಾಜ|ಸಮಾಜದ]] ಎಲ್ಲಾ [[ಜಾತಿ|ಜಾತಿಯವರೂ]] ವಚನವನ್ನು ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡು, ತಮ್ಮ ಅನುಭವಗಳನ್ನು ಹೇಳಿಕೊಳ್ಳತೊಡಗಿದ್ದರಿಂದ ವಚನ ಸಾಹಿತ್ಯ ಒಂದು [[ಚಳವಳಿ|ಚಳವಳಿಯೂ]] ಆಯಿತು. [[ಬಂಡಾಯ ಸಾಹಿತ್ಯ|ಬಂಡಾಯ ಸಾಹಿತ್ಯಕ್ಕಿಂತ]] ಮೊದಲು ಕನ್ನಡ ನಾಡಿನಲ್ಲಿ ವಚನ ಒಂದು ಚಳವಳಿಯ.ಮುಖವಾಣಿಯಾಗಿತ್ತೆಂದರೆ ಅದರ ಸಾಮಾಜಿಕ ವ್ಯಾಪಕತೆ ಅಪಾರವಾದುದೆಂಬುದು ಅರಿವಿಗೆ ಬಾರದೆ ಇರದು. ವಚನಗಳು ಅತ್ಯಂತ ಸರಳ ಹಾಗೂ ನೇರವಾಗಿ ದೇಸಿಯ ಸೊಗಡಿನಿಂದ ಕೂಡಿವೆ. ಹಲವಾರು ಕವಿಗಳು, ಮಠಾಧೀಶರು ಲಿಂಗಾಯತ ಸಿದ್ಧಾಂತವನ್ನು ಅಳವಡಿಸಿ ಸಾಹಿತ್ಯ ರಚಿಸಿದ್ದರೂ, ಇಡೀ ಲಿಂಗಾಯತ ಸಾಹಿತ್ಯದಲ್ಲಿ ಮುಖ್ಯ ಮತ್ತು ಅಪರೂಪದ ಅಭಿವ್ಯಕ್ತಿಯೆಂದರೆ ವಚನ ಸಾಹಿತ್ಯ. ಅದು ಸ್ಥಾವರ ಸಮಾಜವನ್ನು ತಿರಸ್ಕರಿಸಿ [[ಜಂಗಮ]] [[ಸಮಾಜ|ಸಮಾಜವನ್ನು]] ನಂಬಿದ ಬಹಳ ದೊಡ್ಡ ಮಾನವೀಯ ಮೌಲ್ಯ. ಕಾಯಕ ಮತ್ತು [[ದಾಸೋಹ|ದಾಸೋಹಗಳ]] ಮೂಲಕ ಸಮಾಜೋತ್ಪನ್ನಗಳ ಸಮಪಾಲು ಸಿದ್ಧಾಂತವನ್ನು ಮಂಡಿಸುವ ಈ ಚಳವಳಿ [[ಭಾರತೀಯ ಸಂಸ್ಕೃತಿ|ಭಾರತೀಯ ಸಂಸ್ಕೃತಿಯಲ್ಲೇ]] ಅತಿ ಪ್ರಮುಖವಾದುದು.
 
== ಪ್ರಮುಖ ವಚನಕಾರರು ==
ವಚನ ಸಾಹಿತ್ಯದ ಶ್ರೀಮಂತಿಕೆಗೆ ನೂರಾರು ಜನ ಶರಣರು ಶ್ರಮಿಸಿದ್ದಾರೆ. ತಮ್ಮ ವಚನಗಳಲ್ಲಿ ತಮ್ಮದೇ ಆದ [[ಅಂಕಿತನಾಮ|ಅಂಕಿತನಾಮಗಳನ್ನು]] ಬಳಸಿದ್ದಾರೆ. [[ದೇವರ ದಾಸಿಮಯ್ಯ]] 'ರಾಮನಾಥ' ಎಂದು ಬಳಸಿದರೆ, [[ಅಕ್ಕಮಹಾದೇವಿ|ಅಕ್ಕಮಹಾದೇವಿಯು]] 'ಚೆನ್ನಮಲ್ಲಿಕಾರ್ಜುನ' ಹಾಗೂ [[ಬಸವಣ್ಣ|ಬಸವಣ್ಣನವರು]] 'ಕೂಡಲ ಸಂಗಮದೇವ'ಮತ್ತು ಎಂದು ಬಳಸಿದ್ದಾರೆ. ಮತ್ತಿತರ ಸುಪ್ರಸಿದ್ಧ ವಚನಕಾರರೆಂದರೆ: [[ಅಲ್ಲಮ ಪ್ರಭು]], [[ಅಂಬಿಗರ ಚೌಡಯ್ಯ]], [[ಮಾದಾರ ಚೆನ್ನಯ್ಯ]], [[ಸೂಳೆ ಸಂಕವ್ವೆ]], [[ಏಕಾಂತ ರಾಮಯ್ಯ]], [[ಹಡಪದ ಅಪ್ಪಣ್ಣ]], [[ಒಕ್ಕಲು ಮಾದಯ್ಯ]], [[ಮಡಿವಾಳ ಮಾಚಯ್ಯ]],[[ಆಯ್ದಕ್ಕಿ ಲಕ್ಕಮ]], [[ಹೆಂಡದ ಮಾರಯ್ಯ]], [[ಅಂಗಸೋಂಕಿನ ಲಿಂಗತಂದೆ]], [[ಅಂಬಿಗರ ಚೌಡಯ್ಯ]], [[ಅಕ್ಕಮಹಾದೇವಿ]], [[ಅಕ್ಕಮ್ಮ]], [[ಅಖಂಡ ಮಂಡಲೇಶ್ವರ]], [[ಅಗ್ಘವಣಿ ಹಂಪಯ್ಯ]], [[ಅಗ್ಘವಣಿ ಹೊನ್ನಯ್ಯ]], [[ಅಜಗಣ್ಣ ತಂದೆ]], [[ಅರಿವಿನ ಮಾರಿತಂದೆ]], [[ಅನುಗಲೇಶ್ವರ]], [[ಅನಾಮಿಕ ನಾಚಯ್ಯ]], [[ಅಪ್ರಮಾಣ ಗುಹೇಶ್ವರ]], [[ಅಪ್ಪಿದೇವಯ್ಯ]], [[ಅವಸರದ ರೇಕಣ್ಣ]], [[ಅಮರಗುಂಡದ ಮಲ್ಲಿಕಾರ್ಜುನ ತಂದೆ]], [[ಅಮುಗೆ ರಾಯಮ್ಮ]], [[ಅಮುಗಿದೇವಯ್ಯ]], [[ಅಲ್ಲಮಪ್ರಭುದೇವರು]],[[ಅಶ್ವಥರಾಮ]], [[ಆಯ್ದಕ್ಕಿ ಮಾರಯ್ಯ]], [[ಆಯ್ದಕ್ಕಿ ಲಕ್ಕಮ್ಮ]], [[ಆದಯ್ಯ]], [[ಆನಂದ ಸಿದ್ಧೇಶ್ವರ]], [[ಆನಂದಯ್ಯ]], [[ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ]], [[ಈಶ್ವರೀಯ ವರದ ಚೆನ್ನರಾಮ]], [[ಉಗ್ಘಡಿಸುವ ಗಬ್ಬಿದೇವಯ್ಯ]], [[ಉರಿಲಿಂಗದೇವ]], [[ಉರಿಲಿಂಗಪೆದ್ದಿ]], [[ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ]], [[ಉಪ್ಪರಗುಡಿಯ ಸೋಮಿದೇವಯ್ಯ]], [[ಉಳಿಯುಮೇಶ್ವರ ಚಿಕ್ಕಣ್ಣ]], [[ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ]], [[ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ]], [[ಎಲೆಗಾರ ಕಾಮಣ್ಣ]], [[ಏಕಾಂತ ವೀರಸೊಡ್ಡಳ]], [[ಏಕಾಂತರಾಮಿತಂದೆ]], [[ಏಕೋರಾಮೇಶ್ವರ ಲಿಂಗ]], [[ಏಲೇಶ್ವರ ಕೇತಯ್ಯ]], [[ಒಕ್ಕಲಿಗ ಮುದ್ದಣ್ಣ]], [[ಕಂಬದ ಮಾರಿತಂದೆ]], [[ಕರಸ್ಥಲದ ಮಲ್ಲಿಕಾರ್ಜುನೊಡೆಯ]], [[ಕರುಳ ಕೇತಯ್ಯ]], [[ಕದಿರಕಾಯಕದ ಕಾಳವ್ವೆ]], [[ಕದಿರರೆಮ್ಮವ್ವೆ]]
[[ಕನ್ನಡಿಕಾಯಕದ ಅಮ್ಮಿದೇವಯ್ಯ]], [[ಕನ್ನಡಿಕಾಯಕದ ರೇಮಮ್ಮ]], [[ಕನ್ನಡ ಮಾರಿತಂದೆ]], [[ಕಲಕೇತಯ್ಯ]], [[ಕಲ್ಲಯ್ಯದೇವರು]], [[ಕುರಂಗಲಿಂಗ]], [[ಕುರಂಗಲಿಂಗ]], [[ಕುರಂಗೇಶ್ವರಲಿಂಗ]], [[ಕುಷ್ಟಗಿ ಕರಿಬಸವೇಶ್ವರ]], [[ಕೂಗಿನ ಮಾರಯ್ಯ]], [[ಕೂಡಲಸಂಗಮೇಶ್ವರ]], [[ಕಾಟಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವೆ]], [[ಕಾಡಸಿದ್ಧೇಶ್ವರ]], [[ಕಾಮಾಟದ ಭೀಮಣ್ಣ]], [[ಕಾಲಕಣ್ಣಿಯ ಕಾಮಮ್ಮ]], [[ಕೊಂಡೆಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮ]], [[ಕೊಟ್ಟಣದ ಸೋಮಮ್ಮ]], [[ಕೊಟಾರದ ಸೋಮಣ್ಣ]], [[ಕೋಲ ಶಾಂತಯ್ಯ]], [[ಕಿನ್ನರಿ ಬ್ರಹ್ಮಯ್ಯ]], [[ಕೀಲಾರದ ಭೀಮಣ್ಣ]], [[ಗಂಗಾಂಬಿಕೆ]], [[ಗಜೇಶ ಮಸಣಯ್ಯ]], [[ಗಜೇಶಮಸಣಯ್ಯದ ಪುಣ್ಯಸ್ತ್ರೀ]], [[ಗಣದಾಸಿ ವೀರಣ್ಣ]], [[ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ]], [[ಗುರು ವಿಶ್ವೇಶ್ವರಾ]], [[ಗುರುಪುರದ ಮಲ್ಲಯ್ಯ]], [[ಗುರುಬಸವೇಶ್ವರ]], [[ಮೋಳಿಗೆ ಮಾರಯ್ಯ]],
 
== ವಚನಗಳು ==
"https://kn.wikipedia.org/wiki/ವಚನ_ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ