ಸದಸ್ಯ:Revathikainthaje/ನನ್ನ ಪ್ರಯೋಗಪುಟ೧೪: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಮೂಕ ಪ್ರಾಣಿಗಳ ಸಂರಕ್ಷಕಿ ಎಂದೇ ಹೆಸರುಮಾಡಿರುವ ಶ್ರೀಮತಿ ರಜನಿ ಶೆಟ್ಟಿಯವರಿಗೆ ಪ್ರಾಣಿಗಳ ಬಗ್ಗೆ ಅಪಾರ ಪ್ರೇಮ.ಅದರಲ್ಲೂ ಅಸಹಾಯಕ ಪ್ರಾಣಿಗಳ ಮೇಲೆ ಅತೀವ ಒಲವು. <nowiki>=ಜನನ--ಬಾಲ್ಯ=</nowiki> ಮುಂಬೈಯಲ್ಲಿ ವಾಸವಾಗಿದ್ದ ರಘ...
 
No edit summary
೧ ನೇ ಸಾಲು:
ಮೂಕ ಪ್ರಾಣಿಗಳ ಸಂರಕ್ಷಕಿ ಎಂದೇ ಹೆಸರುಮಾಡಿರುವ ಶ್ರೀಮತಿ ರಜನಿ ಶೆಟ್ಟಿಯವರಿಗೆ ಪ್ರಾಣಿಗಳ ಬಗ್ಗೆ ಅಪಾರ ಪ್ರೇಮ.ಅದರಲ್ಲೂ ಅಸಹಾಯಕ ಪ್ರಾಣಿಗಳ ಮೇಲೆ ಅತೀವ ಒಲವು.
==ಜನನ==
 
<nowiki>=ಜನನ--ಬಾಲ್ಯ=</nowiki>
 
ಮುಂಬೈಯಲ್ಲಿ ವಾಸವಾಗಿದ್ದ ರಘುರಾಮ ಹಾಗೂ ರತ್ನ ಎಂಬ ದಂಪತಿಯರ ಎರಡು ಮಕ್ಕಳಲ್ಲಿ ಹಿರಿಯರಾಗಿ ೧೯೭೯ ರಲ್ಲಿ ರಜನಿಯವರು ಜನಿಸಿದರು. ಹತ್ತನೆಯ ತರಗತಿಯ ತನಕ ಇವರು ವಿದ್ಯಾಭ್ಯಾಸವನ್ನು ಮಾಡಿರುತ್ತಾರೆ. ಬಾಲ್ಯದಲ್ಲಿಯೇ ಪ್ರಾಣಿಗಳೆಂದರೆ ಪ್ರೇಮ. ಶ್ವಾನ- ಬೆಕ್ಕುಗಳಿಗೆ ಬಿಸ್ಕತ್ತು ನೀಡುತ್ತಿದ್ದರು. ೧೯೯೭ ರಲ್ಲಿ ಮಂಗಳೂರಿನ ದಾಮೋದರ ಶೆಟ್ಟಿ ಎಂಬವರನ್ನು ವಿವಾಹವಾದ ಬಳಿಕ ಮಂಗಳೂರಿಗೆ ಬಂದು ನೆಲೆಸಿದರು.
<nowiki>==ಪ್ರಾಣಿ ಪ್ರೇಮ=</nowiki>=
ಮದುವೆಯಾಗಿ ಮಂಗಳೂರಿಗೆ ಬಂದ ನಂತರ ತಾನು ವಾಸಿಸುತ್ತಿದ್ದ ಮನೆಯ ಅಕ್ಕಪಕ್ಕಗಳಲ್ಲಿರುತ್ತಿದ್ದ ಬೀದಿನಾಯಿಗಳತ್ತ ಅವರ ದೃಷ್ಟಿ ಹರಿಯಿತು. ಮನೆಯ ಬಳಿ ಅಡ್ಡಾಡುತ್ತಿದ್ದ ನಾಯಿಗಳಿಗೆ ಆಹಾರ ನೀಡಲಾರಂಭಿಸಿದರು. ನಂತರ ಪಕ್ಕದ ಬೀದಿಗಳಲ್ಲಿರುತ್ತಿದ್ದ ನಾಯಿಗಳಿಗೂ ತಿನಿಸು ಕೊಡಲಾರಂಭಮಾಡಿದರು. ಹೀಗೆಯೇ ದಿನದಿಂದ ದಿನಕ್ಕೆ ಅವರು ಆಹಾರ ನೀಡುವ ಪ್ರಾಣಿಗಳ ಸಂಖ್ಯೆಯೂ, ಕಾರ್ಯಕ್ಷೇತ್ರವೂ ವೃದ್ಧಿಯಾಗತೊಡಗಿತು. ಹೀಗೆ ಆಹಾರ ನೀಡುವುದು ಮಾತ್ರವಲ್ಲದೆ ರಸ್ತೆ ಬದಿಯಲ್ಲಿ ಅನಾಥವಾಗಿ, ಅಪಘಾತದಿಂದಾಗಿಯೋ ಅಥವಾ ಇನ್ನಾವುದೋ ಕಾರಣದಿಂದಾಗಿ ಗಾಯಗೊಂಡ ಅಥವಾ ಅಂಗಾಂಗ ಊನಗೊಂಡ ಪ್ರಾಣಿಗಳನ್ನು ಮನೆಗೆ ತಂದು, ಅವುಗಳಿಗೆ ಚಿಕಿತ್ಸೆ ನೀಡಿ ಸಾಕತೊಡಗಿದರು. ದಿನ ನಿತ್ಯವೂ ಎನ್ನುವಂತೆ ಅವುಗಳಿಗೆ ಚಿಕಿತ್ಸೆ ನೀಡಿ ಚಾಕರಿ ಮಾಡಲಾರಂಭಿಸಿದರು. ಇವರ ಈ ಕೆಲಸ ತಿಳಿಯುತ್ತಿದ್ದಂತೆ ಪ್ರಾಣಿಗಳ ರಕ್ಷಣೆಗಾಗಿ ಬಹಳಷ್ಟು ದೂರವಾಣಿ ಕರೆಗಳು ಆಸುಪಾಸಿನಿಂದಲೂ, ದೂರದೂರುಗಳಿಂದಲೂ ಬರತೊಡಗಿದವು. ದೂರವಾಣಿ ಕರೆಗಳಿಗೆ ಸ್ಪಂದಿಸಿ, ಇವರು ಆಯಾಯ ಪ್ರದೇಶಗಳಿಗೆ ಹೋಗಿ ಅಸಹಾಯಕ ಸ್ಥಿತಿಯಲ್ಲಿರುತ್ತಿದ್ದ ಪ್ರಾಣಿಗಳನ್ನು ತರುವುದು, ಅವುಗಳ ಸೇವೆ ಮಾಡುವುದು ರೂಢಿಯಾಗತೊಡಗಿತು. ಶ್ವಾನಗಳು ಮಾತ್ರವಲ್ಲದೆ ಬೆಕ್ಕುಗಳು, ಹಾವುಗಳು, ಅಳಿಲುಗಳು, ಆಮೆಗಳು ಯಾವುದೇ ಮೂಕ ಪ್ರಾಣಿಗಳನ್ನು ರಕ್ಷಿಸುವುದು-ತಂದು ಸಾಕುವುದು ದಿನನಿತ್ಯದ ಕಾಯಕವಾಯಿತು.
 
ಸುಮಾರು ಹತ್ತು- ಹದಿನೈದು ವರ್ಷಗಳಷ್ಟು ಕಾಲ ತಮ್ಮ ಸ್ವಂತ ಹಣವನ್ನಷ್ಟೇ ಬಳಸುತ್ತಿದ್ದರು. ಮಾಧ್ಯಮಗಳಿಂದ-ಪ್ರಚಾರಗಳಿಂದ ದೂರವಿದ್ದರು. ೨೦೧೯ ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ Namma tv- Dance Mummy Dance-4 ರಲ್ಲಿ ಭಾಗವಹಿಸಿ, ನಾಲ್ಕೈದು ಸುತ್ತುಗಳನ್ನು ದಾಟಿ Quarter Final ತನಕ ಬಂದಿದ್ದರು. ಆಗ ಇವರು ಮಾಡುತ್ತಿದ್ದ ಈ ಸೇವೆ ಬೆಳಕಿಗೆ ಬಂದಿತು.ದಾನಿಗಳು ನೆರವು ನೀಡಲು ಮುಂದೆ ಬಂದರು. ಆ ಸಮಯದಲ್ಲಿ ಇವರು ಆಹಾರ ನೀಡುತ್ತಿದ್ದ ಶ್ವಾನಗಳ ಸಂಖ್ಯೆಯೂ ೫೦೦ ರ ಆಸುಪಾಸಿನಲ್ಲಿತ್ತು.
<nowiki>=ಪ್ರಾಣಿ ಪ್ರೇಮ=</nowiki>
 
ಕೊರೋನ ಆರಂಭವಾದ ನಂತರ ಲಾಕ್ ಡೌನ್ ವೇಳೆಯಲ್ಲಿ ತನಗೂ ತನ್ನ ಪತಿಗೂ ಕೆಲಸಕ್ಕೂ ತೊಂದರೆಯಾಗಿತ್ತು. ಜನರ ಓಡಾಟವೂ ಕಮ್ಮಿಯಿರುತ್ತಿದ್ದ ಕಾರಣ ಬೀದಿನಾಯಿಗಳಿಗೆ ಸಾಮಾನ್ಯವಾಗಿ ಸಿಗುತ್ತಿದ್ದ ಆಹಾರವೂ ಸಿಗುತ್ತಿರಲಿಲ್ಲ. ಹಲವರ ಸಹಕಾರವನ್ನು ಯಾಚಿಸಿ, ಆ ಸಮಯದಲ್ಲಿಯೂ ಆಹಾರ ನೀಡಿದ್ದಾರೆ.
ಮದುವೆಯಾಗಿ ಮಂಗಳೂರಿಗೆ ಬಂದ ನಂತರ ತಾನು ವಾಸಿಸುತ್ತಿದ್ದ ಮನೆಯ ಅಕ್ಕಪಕ್ಕಗಳಲ್ಲಿರುತ್ತಿದ್ದ ಬೀದಿನಾಯಿಗಳತ್ತ ಅವರ ದೃಷ್ಟಿ ಹರಿಯಿತು. ಮನೆಯ ಬಳಿ ಅಡ್ಡಾಡುತ್ತಿದ್ದ ನಾಯಿಗಳಿಗೆ ಆಹಾರ ನೀಡಲಾರಂಭಿಸಿದರು.