ಕಲ್ಯಾಣಸ್ವಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಮಾಹಿತಿ ಸೇರ್ಪಡೆ
೧ ನೇ ಸಾಲು:
 
'''ಕಲ್ಯಾಣಸ್ವಾಮಿ''': ೧೮೩೭ರಲ್ಲಿ [[ಕೊಡಗು|ಕೊಡಗಿನ]] ಸಿಂಹಾಸನಕ್ಕೆ ಉತ್ತರಾಧಿಕಾರಿ ಗಳೆಂದು ಸಾರಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದ ಕಲ್ಯಾಣಪ್ಪ ಅಥವಾ ಕಲ್ಯಾಣಸ್ವಾಮಿ ಎಂಬ ಹೆಸರಿನ, ಒಬ್ಬರ ಅನಂತರ ಇನ್ನೊಬ್ಬರಂತೆ ಬಂದ ಇಬ್ಬರು ವ್ಯಕ್ತಿಗಳು. ಇವರು ಕಲ್ಯಾಣಬಸವ ಮತ್ತು ಪುಟ್ಟಬಸವ ಎಂಬಿಬ್ಬರು ಜಂಗಮರು. ಇಬ್ಬರೂ ೧೮೩೫ರಲ್ಲಿ ಮೊದಲು ತಾನು ಕೊಡಗು ಸಿಂಹಾಸನಕ್ಕೆ ಹಕ್ಕುದಾರನೆಂದು ಘೂೕಷಿಸಿ ಕೊನೆಗೆ ಬ್ರಿಟಿಷರಿಗೆ ಸೆರೆಯಾಳಾದ ಅಪರಂಪಾರನ ಆಪ್ತ ಅನುಯಾಯಿಗಳು. ಅಪರಂಪಾರ ಬ್ರಿಟಿಷರಿಂದ ತಪ್ಪಿಸಿಕೊಂಡು ಕಡಬದಿಂದ ಮಂಜರಾಬಾದಿಗೆ ಹೊರಟಾಗ ಇವರಿಬ್ಬರೂ ವೇಷ ಮರೆಸಿಕೊಂಡು ಕೊಡ್ಲಿಪೇಟೆಗೆ ಹೋದರು.
 
== ಇತಿಹಾಸ ==
ಕ್ರಿ.ಶ. ೧೮೫೭ ರ ಸಿಪಾಯಿ ದಂಗೆಯನ್ನು ನಾವು ಭಾರತೀಯರು ಬ್ರಿಟಿಷರ ವಿರುದ್ಧ ನಡೆಸಿದ ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂದು ಚರಿತ್ರೆಯಲ್ಲಿ ಕಾಣುತ್ತೇವೆ. ಇದಕ್ಕಿಂತ ೨೦ ವರ್ಷಗಳ ಪೂರ್ವದಲ್ಲಿಯೇ ಈ ಹಿಂದಕ್ಕೆ ಕೊಡಗಿನ ಅವಿಭಾಜ್ಯ ಅಂಗವಾಗಿದ್ದ ಸುಳ್ಯದ ಪಕ್ಕದ ಕುಗ್ರಾಮವಾಗಿದ್ದ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಆರಂಭವಾಗಿ ಪೂರ್ತಿ ಮೇಲಿನ ಹಾಗೂ ಕೆಳಗಿನ ಕೊಡಗು ಮತ್ತು ಪೂರ್ತಿ ದಕ್ಷಿಣ ಕನ್ನಡಕ್ಕೆ ಹರಡಿ ಬ್ರಿಟಿಷರಿಗೆ ಸೆಡ್ಡು ಹೊಡೆದ ರೈತಾಪಿ ಸಮೂಹದ ಹೋರಾಟವು ಇಂದು ಅಮರ ಸುಳ್ಯ ಹೋರಾಟ ಎಂದು ದಾಖಲಾಗಿರುತ್ತದೆ.<ref>{{cite web |title=1834-37 ರ ಬ್ರಿಟಿಷರ ವಿರುದ್ಧ ವಿಶಾಲ ಕೊಡಗಿನ ‘ಅಮರಸುಳ್ಯ ಸ್ವಾತಂತ್ರ್ಯ ಸಮರ’ {{!}} News13 |url=https://news13.in/archives/169165 |date=30 October 2020}}</ref>
 
1834ರ ಸುಮಾರಿಗೆ ಅತ್ತ ಕೊಡಗಿನಲ್ಲಿ ಆಡಳಿತ ನಡೆಸುತ್ತಿದ್ದ ಚಿಕ್ಕ ವೀರರಾಜೇಂದ್ರನನ್ನು ಬ್ರಿಟಿಷರು ಪಟ್ಟದಿಂದ ಕೆಳಗಿಳಿಸಿ, ಅಲ್ಲಿನ ಸಾಮ್ರಾಜ್ಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಅಲ್ಲದೆ, ಪಂಜ ಸೀಮೆಗೆ ಒಳಪಟ್ಟಿದ್ದ ಪುತ್ತೂರು, ಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿ, [[ದಕ್ಷಿಣ ಕನ್ನಡ]] ಜಿಲ್ಲೆಗೆ ಸೇರಿಸಿದರು. ಕೊಡಗಿನ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದ ಪ್ರದೇಶವನ್ನು ಬ್ರಿಟಿಷರು ವಿಭಜಿಸಿದ್ದಲ್ಲದೆ, ಹೆಚ್ಚುವರಿಯಾಗಿ ಕಂದಾಯವನ್ನು ಹೇರಿದ್ದು ಜನರನ್ನು ರೊಚ್ಚಿಗೆಬ್ಬಿಸಿತ್ತು. ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಮಂಜೇಶ್ವರ, ಕುಂಬಳೆ, ಹೊಸದುರ್ಗ, ಬಂಟ್ವಾಳ, ಉಡುಪಿ, ಫರಂಗಿಪೇಟೆ, [[ಮಂಗಳೂರು]], ಬ್ರಹ್ಮಾವರ, ಕುಂದಾಪುರ ಹೀಗೆ ಇಷ್ಟೂ ಭಾಗವನ್ನು ಸೌತ್ ಕೆನರಾ ಎಂದು ಬ್ರಿಟಿಷರು ಗುರುತಿಸಿದ್ದರು. ಟಿಪ್ಪು ಮರಣಾ ನಂತರ ಈ ಭಾಗದಲ್ಲಿ ಪ್ರಭುತ್ವ ಸ್ಥಾಪಿಸಿದ್ದ ಬ್ರಿಟಿಷರು ಸುಳ್ಯ, ಕೊಡಗನ್ನೂ ಆಕ್ರಮಿಸಿದ್ದರು.<ref>{{cite web |last1=Karnataka |first1=Headline |title=ಬಾವುಟಗುಡ್ಡೆಯಲ್ಲಿ 13 ದಿನ ರಾರಾಜಿಸಿತ್ತು ಸ್ವಾತಂತ್ರ್ಯ ಬಾವುಟ ! ಸುಳ್ಯದ ರೈತರು ಹಚ್ಚಿದ್ದ ಸೇಡಿನ ಕಿಚ್ಚಿಗೆ ಬೆಚ್ಚಿ ಓಡಿದ್ದರು ಬ್ರಿಟಿಷರು ! |url=https://headlinekarnataka.com/news/Article/6592/Independence-day-2021-history-of-Bavutagudde-in-Mangalore-up-went-the-rebel-flag |website=Headline Karanataka |language=English}}</ref><ref>{{cite book |last1=Gaṇapati Rāv Aigaḷ |first1=Em.̣ |title=Dakṣiṇa Kannaḍa Jilleya prācīna itihāsa |publisher=Rāṣṭrakavi Gōvinda Pai Saṃśōdhana Kēndra |location=Uḍupi |isbn=81-86668-47-0.}}</ref>
 
== ಮೊದಲನೆಯ ಕಲ್ಯಾಣಸ್ವಾಮಿ ಕಲ್ಯಾಣಬಸವ ==
"https://kn.wikipedia.org/wiki/ಕಲ್ಯಾಣಸ್ವಾಮಿ" ಇಂದ ಪಡೆಯಲ್ಪಟ್ಟಿದೆ