ಕನ್ನಡ ಚಿತ್ರರಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧೩ ನೇ ಸಾಲು:
 
ಕನ್ನಡ ನೆಲದಲ್ಲಿ ಮೂಕಿ ಚಿತ್ರಗಳು ಯುಗವು ೧೯೨೧ರಿಂದ ಆರಂಭವಾಗಿರುವುದನ್ನು ಚಲನಚಿತ್ರ ಇತಿಹಾಸಕಾರ ಗಂಗಾಧರ ಮೊದಲಿಯಾರ್ ಗುರುತಿಸಿದ್ದಾರೆ. ೧೯೨೧ರಿಂದ ೧೯೩೩ರವರೆಗೆ ಸುಮಾರು ೧೭೫ ಚಿತ್ರಗಳು ತಯಾರಾಗಿರಬಹುದೆಂದು ತರ್ಕಿಸಿ ಲಭ್ಯವಿರುವ ೫೪ ಚಿತ್ರಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ.
 
 
 
ಮೈಸೂರಿನ ಅಂದಿನ ಯುವರಾಜರಾದ ಶ್ರೀ [[ಕಂಠೀರವ ನರಸಿಂಹರಾಜ ಒಡೆಯರ್]] ಅವರು ಅರಮನೆಯಲ್ಲಿ ಪ್ರದರ್ಶನವಾದ [[ಎ.ವಿ. ವರದಾಚಾರ್|ಎ.ವಿ. ವರದಾಚಾರ್ಯ]]ರು ಅಭಿನಯಿಸಿದ್ದ ರತ್ನಾವಳಿ ಥಿಯೇಟ್ರಿಕಲ್ ಕಂಪನಿಯ ನಾಟಕ ನಿರುಪಮಾ (೧೯೨೧)ವನ್ನು ಕೈಯಲ್ಲಿ ಸುತ್ತುವ ಕ್ಯಾಮೆರಾದಿಂದ (ಕ್ರಾಂಕಿಂಗ್ ಮಿಷಿನ್) ಚಿತ್ರೀಕರಿಸಿದ್ದರಂತೆ. ಹಾಗಾಗಿ [[ಎ.ವಿ. ವರದಾಚಾರ್|ಎ.ವಿ. ವರದಾಚಾರ್ಯ]]ರು ಕನ್ನಡ ನೆಲದಲ್ಲಿ ಚಿತ್ರೀಕರಣಗೊಂಡ ಮೂಕಿ ಚಿತ್ರದ ಮೊದಲ ನಾಯಕ. [[ಕಂಠೀರವ ನರಸಿಂಹರಾಜ ಒಡೆಯರ್]] ಮೊದಲ ನಿರ್ಮಾಪಕ.
 
 
 
೧೯೨೫ರಲ್ಲಿ [[ಗುಬ್ಬಿ ಚನ್ನಬಸವೇಶ್ವರ ಕಂಪನಿ]]ಯು ತರೀಕೆರೆಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ [[ಮಹಾತ್ಮ ಕಬೀರ್ (ಚಲನಚಿತ್ರ)|ಮಹಾತ್ಮಾ ಕಬೀರ್]] ಚಿತ್ರವನ್ನು ಚಿತ್ರೀಕರಿಸಿ ಸಿನಿಮಾ ಮಾಡಿತು. ನಾಯಕ ಕಬೀರನ ಪಾತ್ರವನ್ನು ಅಭಿನವ ಶಿರೋಮಣಿ ಸಿ.ಬಿ. ಮಲ್ಲಪ್ಪನವರು ವಹಿಸಿದ್ದರು.
 
 
 
ಮೂಕಿ ಚಿತ್ರಗಳ ತಯಾರಿಕೆಗೆ ಆಗ ಮುಂಬಯಿ ಕೇಂದ್ರವಾಗಿತ್ತು. ಅಲ್ಲಿನ ಶಾರದಾ ಫಿಲಂ ಕಂಪನಿಯ ಪಾಲುದಾರರಲ್ಲೊಬ್ಬರಾದ ಹರಿಭಾಯ್ ಆರ್. ದೇಸಾಯಿ ಅವರು ೧೯೨೮ರಲ್ಲಿ ಬೆಂಗಳೂರಿನ ದಂಡು ಪ್ರದೇಶದಲ್ಲಿ ಸೂರ್ಯ ಫಿಲಂ ಕಂಪನಿ ಸ್ಟುಡಿಯೋಸ್ ಸ್ಥಾಪಿಸಿ ೧೯೩೩ರವರೆಗೆ ಅಂದಾಜು ೪೦ ಚಿತ್ರಗಳನ್ನು ನಿರ್ಮಿಸಿದರೆಂದು ದಾಖಲಾಗಿದೆ.
 
 
 
"https://kn.wikipedia.org/wiki/ಕನ್ನಡ_ಚಿತ್ರರಂಗ" ಇಂದ ಪಡೆಯಲ್ಪಟ್ಟಿದೆ