ಕೃಷ್ಣದೇವರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Protected "ಕೃಷ್ಣದೇವರಾಯ": ಅತಿಯಾದ ವಿಧ್ವಂಸಕತೆಗೆ ಒಳಪಟ್ಟ ಪುಟ ([ಸಂಪಾದನೆ=ಹೊಸ ಸದಸ್ಯರನ್ನು ಮತ್ತು ನೋಂದಾವಣೆ ಆಗಿಲ್ಲದವರನ್ನು ತಡೆಹಿಡಿ] (ಅನಿರ್ದಿಷ್ಟ) [ಸ್ಥಳಾಂತರ=ಹೊಸ ಸದಸ್ಯರನ್ನು ಮತ್ತು ನೋಂದಾವಣೆ ಆಗಿಲ್ಲದವರನ್ನು ತಡೆಹಿಡಿ] (ಅನಿರ್ದಿಷ್ಟ))
೩೧ ನೇ ಸಾಲು:
==ಹಿನ್ನೆಲೆ==
 
*ಕೃಷ್ಣದೇವರಾಯನ ತಂದೆ ತುಳುವ ನರಸ ನಾಯಕ.<ref>https://books.google.co.in/books?id=740AqMUW8WQC&q=Tulu#v=snippet&q=Tuluva&f=false</ref> ತಾಯಿ ನಾಗಲಾಂಬಿಕೆ . ಸಾಳುವ ನರಸದೇವರಾಯನ ಸೇನೆಯಲ್ಲಿ ಅಧಿಕಾರಿಯಾಗಿದ್ದ ನರಸನಾಯಕನು , ಸಂಪೂರ್ಣ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು ತುಳುವ ಸಾಮ್ರಾಜ್ಯವನ್ನು ಸ್ಥಾಪಿಸಿದನು. ನರಸನಾಯಕನ ನಂತರ [[ಕೃಷ್ಣಜನ್ಮಾಷ್ಟಮಿ]]ಯಂದು ಪಟ್ಟವೇರಿದ ಕೃಷ್ಣದೇವರಾಯನು ರಾಜಧಾನಿಯಾದ [[ವಿಜಯನಗರದ]] ಉಪನಗರವಾಗಿ [[ನಾಗಲಾಪುರ]] ಎಂಬ ಸುಂದರ ನಗರವನ್ನು ಕಟ್ಟಿಸಿದನು.
*ಕೃಷ್ಣದೇವರಾಯನು ತನ್ನ ತಂದೆಯ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದ [[ತಿಮ್ಮರಸು]](ವಿಜಯನಗರದ ಪ್ರಧಾನ ಮಂತ್ರಿಗಳು) ಆತನು ಪಟ್ಟವೇರಲು ಕಾರಣೀಭೂತರಾಗಿದ್ದರಷ್ಟೇ ಅಲ್ಲ, ಅವನ ರಾಜ್ಯಭಾರದ ಕಾಲದಲ್ಲಿ ಮಂತ್ರಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ಮಟ್ಟಸ ಎತ್ತರವಾಗಿದ್ದ ಕೃಷ್ಣದೇವರಾಯನಿಗೆ, ದಿನವೂ ವ್ಯಾಯಾಮ, ತಾಲೀಮು ಮಾಡಿದ್ದರ ಪರಿಣಾಮವಾಗಿ ಕಲ್ಲಿನಂತಹ ದೇಹಧಾರ್ಡ್ಯವಿತ್ತು. ಹಸನ್ಮುಖಿಯಾದರೂ, ಶೀಘ್ರಕೋಪಿಯೂ ಆಗಿದ್ದ ಎಂದೂ ಹೇಳಲಾಗಿದೆ.
* ಪರದೇಶದ ಪ್ರವಾಸಿಗಳಿಗೆ ಗೌರವ ತೋರಿಸುತ್ತಿದ್ದ. ಸಮರ್ಥ ಆಡಳಿತಗಾರನಾಗಿದ್ದು ಕಾನೂನು ಪಾಲನೆಯಲ್ಲಿ ಕಟ್ಟರ ಶಿಸ್ತು ಪಾಲಿಸುತ್ತಿದ್ದ. ಅತ್ಯುತ್ತಮ ಸೇನಾನಾಯಕನೂ ಆಗಿದ್ದ ಆತನು, ಸ್ವತಃ ಸೇನೆಯ ಮುಂದಾಳುತ್ವ ವಹಿಸುವುದಷ್ಟೇ ಅಲ್ಲ, ಗಾಯಗೊಂಡವರಿಗೆ ಕೈಯಾರೆ ಶುಶ್ರೂಷೆಯನ್ನೂ ಮಾಡುತ್ತಿದ್ದ ಎಂದೂ ಹೇಳಲಾಗಿದೆ. ಕೃಷ್ಣದೇವರಾಯನ ಆಡಳಿತದ ಬಗೆಗಿನ ಬಹಳಷ್ಟು ಮಾಹಿತಿ ಅವನ ಕಾಲದಲ್ಲಿ [[ಭಾರತ]]ಕ್ಕೆ ಬಂದ [[ಪೋರ್ಚುಗೀಸ್]] ಯಾತ್ರಿಕರಾದ '''ಡೊಮಿಂಗೋ ಪಾಯಸ್''' ಮತ್ತು '''ಫೆರ್ನಾವ್ ನೂನೀಜ್''' ಅವರ ಬರಹಗಳಿ೦ದ ತಿಳಿದುಬರುತ್ತದೆ.
"https://kn.wikipedia.org/wiki/ಕೃಷ್ಣದೇವರಾಯ" ಇಂದ ಪಡೆಯಲ್ಪಟ್ಟಿದೆ