ತುಳು ನಾಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧ ನೇ ಸಾಲು:
*ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ತುಳು ನಾಡಿಗೆ ಸಂಬಂಧಿಸಿದ ಹಲವು ಉಲ್ಲೇಖಗಳಿವೆ. ತುಳು ನಾಡು ಪರಶುರಾಮ ಕ್ಷೇತ್ರದ ಭಾಗವೆಂಬ ಕತೆಯೂ ಇದೆ.
 
*ಕ್ರಿ. ಪೂ. ಸುಮಾರು 400೩೦೦-300೪೦೦ ರ ವರೆಗೆ ತುಳು ನಾಡಿನಲ್ಲಿ ಬೃಹತ್ ಶಿಲಾಯುಗದ ಒಂದು ಸಂಮ್ಮಿಶ್ರ ಸಂಸ್ಕøತಿಸಂಸ್ಕೃತಿ ಅಸ್ತಿತ್ವದಲ್ಲಿತ್ತು. ಅಶೋಕನ ಶಿಲಾಲೇಖನದಲ್ಲಿ ಬರುವ ಸತಿಯಪುತ ತುಳು ನಾಡಿರಬಹುದು. ಕ್ರಿ. ಶ. 3ನೆಯ೩ ನೆಯ ಶತಮಾನದ ಟಾಲಮಿಯ ಭೂಗೋಳದಲ್ಲಿ ನಮೂದಿತವಾದ ಒಲೊಖೊಯ್ರಾ ತುಳು ನಾಡಿನ ನಾಮಾಂತರವಾದ ಆಳ್ವಖೇಡವಿರಬೇಕು. ಕ್ರಿ. ಶ. 3-4 ನೆಯ ಶತಮಾನದ ತಮಿಳಿನ ಸಂಗಮ್ ಸಾಹಿತ್ಯದಲ್ಲಿ ತುಳು ನಾಡಿನ ಉಲ್ಲೇಖವಿದೆ. ಪಲ್ಲವ ಅರಸನಾದ 2ನೆಯ ನಂದಿವರ್ಮನ ಕಾಲದ (731೭೩೧ - 795೭೯೫) ಪಟ್ಟಟ್ಟಾಲ್ ಮಂಗಲಮ್ ತಾಮ್ರ ಶಾಸನದಲ್ಲೂ 1012೧೦೧೨ ರ ಕೊಂಗಾಳ್ವನ ಬಲ್ಮುರಿಯ ಶಾಸನದಲ್ಲೂ ತು¿ುವರ ಉಲ್ಲೇಖವಿದೆ. ಇದು ಕನ್ನಡ ಭಾಷೆಯಲ್ಲಿ ತು¿ುವರನ್ನು ಕುರಿತ ಮೊದಲ ಶಾಸನ. 11ನೆಯ೧೧ ನೆಯ ಶತಮಾನದ ಬಂಕಿಯಾಳುಪೇಂದ್ರನ ಕಾಲದ ಬಾರಕೂರು ಶಾಸನದಲ್ಲಿ ಮೊದಲಾಗಿ ತುಳು ನಾಡಿನಲ್ಲಿ ನಾಡಿನ ಉಲ್ಲೇಖ ದೊರೆಕುತ್ತದೆ. ಹೊಯ್ಸಳ ವಿಜಯನಗರ ಕಾಲದ ಶಾಸನಗಳಲ್ಲಿ ಹೇರಳವಾಗಿ ತುಳು ನಾಡಿನ ಉಲ್ಲೇಖಗಳು ದೊರೆಯುತ್ತವೆ. ರತ್ನಾಕರವರ್ಣಿಯ ಭರತೇಶವೈಭವ ಕೃತಿಯಲ್ಲಿ ಮೊದಲಾಗಿ ತುಳು ವಾಕ್ಯವೂ ತುಳುವ ಶಬ್ದವೂ ಸಿಗುತ್ತವೆ.
 
*ಕ್ರಿ,ಸ್ತಶಕೆಯ ಆರಂಭದಿಂದ 15೧೫ ನೆಯ ಶತಮಾನದ ವರೆಗೆ ಆಳುಪರು (ಆಳಿವರು) ಇಲ್ಲಿ ಆಳಿಕೊಂಡಿದ್ದರು. ಇವರು ಕರ್ನಾಟಕದ ಸಾರ್ವಭೌಮರ ಆಶ್ರಿತರಾಜರಾಗಿದ್ದರೂ ಹೆಚ್ಚಿನ ಸ್ವಾಯತ್ತತೆಯನ್ನು ಪಡೆದು ಇಲ್ಲಿಯ ಸಂಸ್ಕøತಿಯ ಬೆಳವಣಿಗೆಗೆ ನೆರವಾದರು. ಇವರು ಬಾದಾಮಿ ಚಾಳುಕ್ಯರು ಹಾಗೂ ಹೊಂಬುಚ್ಚದ ಸಾಂತರಸರ ರಕ್ತಸಂಬಂಧಿಗಳು. ಇವರು ಉಚ್ಛ್ರಾಯ ಸ್ಥಿತಿಯಲ್ಲಿ ಕದಂಬ ಮಂಡಲವನ್ನಾಳುತ್ತಿದ್ದರು. 7ನೆಯ ಶತಮಾನದ ವಡ್ಡರ್ಸೆ ಶಾಸನ ಇವರಿಗೆ ಸಂಬಂಧಿಸಿದ ದಕ್ಷಿಣ ಕನ್ನಡದ ಮೊದಲ ಶಾಸನ. ಇವರದು ಮತ್ಸ್ಯಲಾಂಛನ (ಮತ್ಸ್ಯಲಾಂಛನೋಪೇತ). ಬಂಗಾರದ ನಾಣ್ಯಗಳ ಒಂದು ಬದಿಯಲ್ಲಿ ಎರಡು ಮೀನು, ಶಂಖ ಹಾಗೂ ಪೂರ್ಣಕುಂಭ ಅಥವಾ ಕಾಲುದೀಪವೂ ಇನ್ನೊಂದು ಬದಿಯಲ್ಲಿ ದೇವನಾಗರಿಯಲ್ಲಿ ಅಥವಾ ಕನ್ನಡ ಲಿಪಿಯಲ್ಲಿ ಪಾಣ್ಡ್ಯಧನಂಜಯ ಎಂಬ ಹೆಸರೂ ಇವೆ. ಇವರು ಶೈವರಾದರೂ ಜೈನಮತಕ್ಕೂ ನಾಥಪಂಥಕ್ಕೂ ಪ್ರೋತ್ಸಾಹವನ್ನಿತ್ತರು.
 
*ವಿಜಯನಗರದ ಅರಸರ ಆಳ್ವಿಕೆಯ ಕಾಲದಲ್ಲಿ ತುಳು ನಾಡಿನ ಬಾರಕೂರು ಮತ್ತು ಮಂಗಳೂರು ಪ್ರಾಂತ್ಯಗಳಾಗಿ ವಿಭಾಗವಾಯಿತು. ಅವರಿಂದ ನೇಮಿತರಾದ ರಾಜ್ಯಪಾಲರು ಇದನ್ನು ಆಳುತ್ತಿದ್ದರು. ತುಳುವ ವಂಶದ ಕೃಷ್ಣದೇವರಾಯನ ಪೂರ್ವಜರು ಮೂಲತಃ ತುಳು ನಾಡಿನ ಪಾಡುವಳ್ಳಿಯವರೆಂದು ಕೆಲವರ ಅಭಿಪ್ರಾಯವಿದೆ. ವಿಜಯನಗರ ಕಾಲದಲ್ಲಿ ಸುರಾಲಿನ ತೊಳಹರು (ಈಗಿನ ತೋಳಾರರು), ಬಂಗಾಡಿಯ ಬಂಗರು, ಪುತ್ತಿಗೆಯ ಚೌಟರು, ಕೇಣೂರಿನ ಅಜಿಲರು, ಸಿಮಂತೂರಿನ ಸಾವಂತರು, ಕಾರ್ಕಳದ ಬೈರರಸರು, ಹೊಸಂಗಡಿಯ ಹೊನ್ನೆಕಂಬಳಿಯವರು, ನಗಿರೆಯ ಅರಸರು, ಹಾಡುವಳ್ಳಿಯ ರಾಜರು, ಎಮಾಗಳಿನ ಮಾರಮ್ಮ ಹೆಗ್ಗಡೆ, ಕಾಪುವಿನ ಮದ್ದಗ ಹೆಗ್ಗಡೆ, ಎಲ್ಲೂರಿನ ಕುಂದ ಹೆಗ್ಗಡೆ, ಪಡುಬಿದರೆಯ ಬಲ್ಲಾಳರು ಮೊದಲಾದವರು [[ವಿಜಯನಗರ ಸಾಮ್ರಾಜ್ಯ|ವಿಜಯನಗರದ]] ಕಾಲದ ತುಳು ನಾಡಿನ ಜೈನ ಅರಸರು.
 
*ಕಾಸರಗೋಡಿನ ಹೆಚ್ಚಿನ ಭಾಗ ಕುಂಬಳ ಅರಸರ ವಶದಲ್ಲಿತ್ತು. ತುಳು ನಾಡು ವಿಜಯನಗರದ ಅರಸರ ಬಳಿಕ ಕೆಳದಿಯ ನಾಯಕರ ಅಧೀನವಾಯಿತು. ಆಗಾಗ ತುಳು ನಾಡಿನ ಅರಸರ ಪರಸ್ಪರ ಕಲಹದಿಂದ ಕೆಳದಿಯ ನಾಯಕರು ಖೇದಗೊಂಡಿದ್ದರು. ಕೆಳದಿಯ ಅರಸರ ಬಳಿಕ ತುಳು ನಾಡು ಹೈದರ್ ಅಲಿಯ ಅಧೀನವಾಯಿತು. ಅದು 19ನೆಯ೧೯ ನೆಯ ಶತಮಾನದಲ್ಲಿ ಬ್ರಿಟಿಷರ ಕೈಸೇರಿ, ದಕ್ಷಿಣ ಕನ್ನಡ ಉತ್ತರ ಕನ್ನಡಗಳಾಗಿ ವಿಭಜಿಸಲಾಯಿತು. ದಕ್ಷಿಣ ಕನ್ನಡ ಮದ್ರಾಸ್ ಪ್ರಾಂತ್ಯಕ್ಕೂ ಉತ್ತರ ಕನ್ನಡ ಬೊಂಬಾಯಿ ಪ್ರಾಂತ್ಯಕ್ಕೂ ಸೇರಿದವು. ಭಾರತ ರಾಜ್ಯ ಪುನರ್ ವಿಂಗಡಣೆಯಾದಾಗ ಕಾಸರಗೋಡು ಬಿಟ್ಟು ಉಳಿದ ತುಳು ನಾಡು ಕರ್ನಾಟಕಕ್ಕೆ ಸೇರಿತು.
 
*ತುಳು ನಾಡಿನಲ್ಲಿ ಮೊಗೇರ ಬಿಲ್ಲವ ನಾಡವ ಬಂಟ ಜೈನ ಬ್ರಾಹ್ಮಣರೂ ಕೊರಗ ಮೊದಲಾದ ಆದಿವಾಸಿಗಳೂ ಇದ್ದಾರೆ. ಕೊರಗರ ಭಾಷೆ ಅವರದೇ ಆದ ದಕ್ಷಿಣ ದ್ರಾವಿಡೆರ ಭಾಷೆ- ಕೊರಗರ ಭಾಷೆ. ಬ್ರಾಹ್ಮಣರು ಮಾತನಾಡುವ ತುಳು ಇತರರ ತುಳುವಿಗಿಂತ ಸ್ವಲ್ಪ ಭಿನ್ನವಾಗಿವೆ. ಬ್ರಾಹ್ಮಣರಿಗೆ ಗೋತ್ರವಿದ್ದಂತೆ, ಬ್ರಾಹ್ಮಣೇತರರಿಗೆ ಬಳಿ ಇದೆ. ಅಳಿಯ ಸಂತಾನ ಕಟ್ಟು ತುಳು ನಾಡಿನ ವೈಶಿಷ್ಟ್ಯ. ಭೂತಾಳ ಪಾಂಡ್ಯನ ಕಟ್ಟುಕಟ್ಟಲೆಯಲ್ಲಿ ಇದರ ವಿವರವಿದೆ. ಆದರೆ ಈ ಕತೆಗೆ ಸಾಕಷ್ಟು ಆಧಾರಗಳಿಲ್ಲ. 12ನೆಯ೧೨ ನೆಯ ಶತಮಾನದಿಂದಲೂ ಅಳಿಯ ಸಂತಾನ ಕಟ್ಟು ಬೆಳೆದು ಬಂದಿರಬೇಕು. ಇತ್ತೀಚೆಗೆ ಇಂಡೊ-ಆರ್ಯನ್ ಬುಡಕಟ್ಟುಗಳಿಗೆ ಸೇರಿದ ಭಾಷೆಗಳನ್ನಾಡುವ ಕುಡುಬಿ, ಮರಾಠಿ ಮತ್ತು ಗೌಡ ಸಾರಸ್ವತರೂ ಇಲ್ಲಿ ನೆಲೆಸಿದ್ದಾರೆ. ಭೂತಾರಾಧನೆ ತುಳು ನಾಡಿನ ವೈಶಿಷ್ಟ್ಯಗಳಲ್ಲೊಂದು. ಅಗೆಲು, ತಂಬಿಲ, ಕೋಲ, ನೇಮ ಮೊದಲಾದ ಆರಾಧನಾ ವಿಧಾನಗಳಿಂದ ಬೊಬ್ಬರ್ಯ, ಪಂಜುರ್ಳಿ, ಕಲ್ಕುಡ, ಚಿಕ್ಕು, ಗುಳಿಗ, ಹಾಯ್ಗುಳಿ, ಕೋಟಚೆನ್ನಯ, ಹಳೆಯಮ್ಮ, ಪಿಲಿಚಾಮುಂಡಿ, ಮಾಸ್ತಿ, ಜುಮಾದಿ ಮೊದಲಾದ ನೂರಾರು ದೈವಗಳನ್ನು ಆರಾಧಿಸುತ್ತಾರೆ. ನಾಗ, ನಂದಿ ಕೋಣ, ಲೆಕ್ಕಸಿರಿ, ಬೆರ್ಮ, ಕ್ಷೇತಪಾಲ-ಇವು ಪಂಚದೆವಗಳು. ಇವನ್ನು ಆಲಡೆ ಅಥವಾ ಬ್ರಹಸ್ಥಾನಗಳಲ್ಲಿ ಆರಾಧಿಸುತ್ತಾರೆ. ಅಬ್ಬಕ್ಕ ದಾರಕ್ಕ ದೈವಗಳನ್ನು ತುಳುನಾಡಿನ ಸಿರಿ ಎಂದು ಜನತೆ ಪೂಜಿಸುತ್ತದೆ. ನಾಗ ಸುಬ್ರಹ್ಮಣ್ಯರನ್ನು ಅಭೇದವಾಗಿ ಕಲ್ಪಿಸಿ ಅದರ ಪ್ರೀತ್ಯರ್ಥವಾಗಿ ನಾಗಮಂಡಲ, ಧಕ್ಕೆ ಬಲಿಯನ್ನು ಆಚರಿಸುತ್ತಾರೆ. ಇದೂ ತುಳು ನಾಡಿಗೇ ವಿಶಿಷ್ಟವಾದ್ದು. ಆಗಮ ದೇವಾಲಯಗಳಲ್ಲಿ ಶಿವ, ಶಕ್ತಿ, ವಿಷ್ಣು, ಆದಿತ್ಯ, ಗಣಪತಿ, ಶಂಕರ, ನಾರಾಯಣ, ಶಾಸ್ತಾರ ಆರಾಧನೆ ಇದೆ. ಕ್ರಿಸ್ತಶಕದ ಆದಿಯಿಂದ ದೇಗುಲ ನಿರ್ಮಾಣಕ್ಕೆ, ದಾಖಲೆಯಿದೆ. ರಜತಪೀಠ (ಉಡುಪಿ), ಶಿವಾಲಯ, ಕುಮಾರಾದ್ರಿ (ಸುಬ್ರಹ್ಮಣ್ಯ), ಕುಂಭಕಾಶಿ(ಕುಂಭಾಶಿ), ಧ್ವಜೇಶ್ವರ (ಕೋಟೇಶ್ವರ), ಕ್ರೋಢ (ಶಂಕರನಾರಾಯಣ), ಮೂಕಾಂಬಾ (ಕೊಲ್ಲೂರು) - ಇವು ತುಳುನಾಡಿನ ಸಪ್ತಕ್ಷೇತ್ರಗಳು. ಮಣ್ಣು (ಪೊಳಲಿ), ಶಿಲೆ, ಪಂಚಲೋಹ ಹಾಗೂ ಮರದ ಕೆತ್ತನೆಗಳಲ್ಲಿ (ಮೆಕ್ಕಿಕಟ್ಟೆಯ ಭೂತದ ಉರುಗಳು) ಚಾಳುಕ್ಯ, ಕದಂಬ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರ ಮತ್ತು ಕೆಳದಿಯ ಶಿಲ್ಪ ಮಾದರಿಗಳು ಅಲ್ಪ ಸ್ವಲ್ಪ ಪ್ರಾದೇಶೀಕ ಭೇದಗಳೊಂದಿಗೆ ಇಲ್ಲಿ ಒಡಮೂಡಿವೆ. ಕದಿರೆಯ ಪಂಚಲೋಹದ ಲೋಕೇಶ್ವರ ಮೂರ್ತಿ (ಕ್ರಿ. ಶ. 968೯೬೮), ಕಾರ್ಕಳ ಹಾಗೂ ವೇಣೂರ ಗೊಮ್ಮಟೇಶ್ವರ, ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಪಂಚಲೋಹದ ಚಂದ್ರನಾಥ (71೭೧/2 ಅಡಿ ಮೂಡಬಿದರೆ), ಉಡುಪಿಯ ಮಠದ ಕಡಗೋಲು ಕೃಷ್ಣ ಹಾಗೂ ತೈಲಕೃಷ್ಣಬಿಂಬಗಳು - ಇವು ತುಳು ನಾಡಿನ ಉಲ್ಲೇಖಾರ್ಹ ಶಿಲ್ಪಗಳು.
 
*ಕರ್ನಾಟಕದ ಪ್ರಥಮ ತಾಮ್ರ ಶಾಸನ (ಬೆಳ್ಮಣ್ಣು - 8 ನೆಯ ಶತಮಾನ) ತುಳು ನಾಡಿನದು. ದ್ವೈತಮತಸ್ಥಾಪಕರಾದ ಮಧ್ವಾಚಾರ್ಯರು ಇಲ್ಲೇ ಜನಿಸಿ, ಉಡುಪಿಯನ್ನು ಕೇಂದ್ರವಾಗಿಟ್ಟುಕೊಂಡು ತತ್ತ್ವವಾದವನ್ನು ಪ್ರಚಾರಮಾಡಿದರು. ಮಧ್ವಾಚಾರ್ಯರಿಗೆ ಮೊದಲು ವ್ಯಾಪಕವಾಗಿ ಹರಡಿದ್ದ ಭಾಗವತ ಸಂಪ್ರದಾಯದ ಎಡನೀರು ಹಾಗೂ ಬಾಳೆ ಕುದುರು ಮಠಗಳಿವೆ. ಕದಿರೆಯಲ್ಲಿ ನಾಥಪಂಥದ ದೇಗುಲಗಳಿವೆ. ಮೂಡಬಿದರೆ ಜೈನಕಾಶಿ ಎಂದು ಪ್ರಸಿದ್ಧವಾಗಿದೆ. ಬೌದ್ಧಮತ ಪ್ರಚಾರದಲ್ಲಿತ್ತು ಎನ್ನುವುದಕ್ಕೆ ಅಲ್ಪಸ್ವಲ್ಪ ದಾಖಲೆಗಳಿವೆ. ಜಂಗಮರ ಮಠಗಳು ಅಲ್ಲಲ್ಲಿ ಕಾಣಸಿಗುತ್ತವೆ. ಜನಪದ ಸಾಹಿತ್ಯಗಳಲ್ಲಿ ಜಂಗಮರ ಉಲ್ಲೇಖವಿದೆ. ತುಳು ಭಾಷೆಯಲ್ಲಿ ಪಾಡ್ದನಗಳ ರೂಪದಲ್ಲೂ ಕನ್ನಡದಲ್ಲೂ ವಿಪುಲವಾದ ಜನಪದ ಸಾಹಿತ್ಯವಿದೆ. ಇಲ್ಲಿಯ ಕನ್ನಡದಲ್ಲಿ ಹವ್ಯಕ ಮತ್ತು ಕುಂದಾಪುರ ಎಂಬ ಪ್ರಾದೇಶಿಕ ಭೇದವಿದೆ.
 
*ಕರ್ನಾಟಕದ ಪ್ರಥಮ ತಾಮ್ರ ಶಾಸನ (ಬೆಳ್ಮಣ್ಣು - 8 ನೆಯ ಶತಮಾನ) ತುಳು ನಾಡಿನದು. ದ್ವೈತಮತಸ್ಥಾಪಕರಾದ ಮಧ್ವಾಚಾರ್ಯರು ಇಲ್ಲೇ ಜನಿಸಿ, ಉಡುಪಿಯನ್ನು ಕೇಂದ್ರವಾಗಿಟ್ಟುಕೊಂಡು ತತ್ತ್ವವಾದವನ್ನು ಪ್ರಚಾರಮಾಡಿದರು. ಮಧ್ವಾಚಾರ್ಯರಿಗೆ ಮೊದಲು ವ್ಯಾಪಕವಾಗಿ ಹರಡಿದ್ದ ಭಾಗವತ ಸಂಪ್ರದಾಯದ ಎಡನೀರು ಹಾಗೂ ಬಾಳೆ ಕುದುರು ಮಠಗಳಿವೆ. ಕದಿರೆಯಲ್ಲಿ ನಾಥಪಂಥದ ದೇಗುಲಗಳಿವೆ. ಮೂಡಬಿದರೆ ಜೈನಕಾಶಿ ಎಂದು ಪ್ರಸಿದ್ಧವಾಗಿದೆ. ಬೌದ್ಧಮತ ಪ್ರಚಾರದಲ್ಲಿತ್ತು ಎನ್ನುವುದಕ್ಕೆ ಅಲ್ಪಸ್ವಲ್ಪ ದಾಖಲೆಗಳಿವೆ. ಜಂಗಮರ ಮಠಗಳು ಅಲ್ಲಲ್ಲಿ ಕಾಣಸಿಗುತ್ತವೆ. ಜನಪದ ಸಾಹಿತ್ಯಗಳಲ್ಲಿ ಜಂಗಮರ ಉಲ್ಲೇಖವಿದೆ. ತುಳು ಭಾಷೆಯಲ್ಲಿ ಪಾಡ್ದನಗಳ ರೂಪದಲ್ಲೂ ಕನ್ನಡದಲ್ಲೂ ವಿಪುಲವಾದ ಜನಪದ ಸಾಹಿತ್ಯವಿದೆ. ಇಲ್ಲಿಯ ಕನ್ನಡದಲ್ಲಿ ಹವ್ಯಕ ಮತ್ತು ಕುಂದಾಪುರ ಎಂಬ ಪ್ರಾದೇಶಿಕ ಭೇದವಿದೆ.
==ಚರಿತ್ರೆ ==
ಅಶೋಕನ 2ನೆಯ ಬಂಡೆಗಲ್ಲಿನ ಶಾಸನದಲ್ಲಿ ಆತನ ಸಾಮ್ರಾಜ್ಯದ ಮೇರೆಗಳನ್ನು ಹೇಳುವಾಗ ಸತಿಯಪುತವನ್ನು ಉಲ್ಲೇಖಿಸಿದೆ. ಈ ಭೌಗೋಳಿಕ ಪ್ರದೇಶವನ್ನು ಗುರುತಿಸುವುದರಲ್ಲಿ ಹಲವಾರು ಅಭಿಪ್ರಾಯಗಳು ಮಂಡಿತವಾಗಿವೆಯಾದರೂ ಈಗ ಇದು ತುಳು ದೇಶಕ್ಕೆ ಅನ್ವಯವಾಗುವ ಪದವೆಂದು ಸಮಾನ್ಯವಾಗಿ ಒಪ್ಪಲಾಗಿದೆ. ತುಳು ದೇಶದ ಬಹುಶ: ಮೊಟ್ಟಮೊದಲ ಐತಿಹಾಸಿಕ ಉಲ್ಲೇಖ ಇದು. ಕ್ರಿ. ಶ. ಸುಮಾರು 3ನೆಯ ಶತಮಾನಕ್ಕೆ ಸೇರಿದ ಮಾಮೂಲನಾರ್ ಎಂಬ ತಮಿಳು ಕವಿ ತನ್ನ ಒಂದು ಪದ್ಯದಲ್ಲಿ ತುಳು ನಾಡನ್ನು ಪ್ರಸ್ತಾಪಿಸಿದ್ದಾನೆ. ತಮಿಳು ನಾಡಿನ ಸಂಗಮ್ ಸಾಹಿತ್ಯದಲ್ಲಿ ಮೌರ್ಯ, ಕೋಶ, ಪಡುಗ, ಮೋಗೂರು ಮುಂತಾದ ಜನರ ಪ್ರದೇಶಗಳ ಪ್ರಸ್ತಾಪವಿದೆ. ಇವನ್ನು ಗುರುತಿಸಲು ಹಲವಾರು ಯತ್ನಗಳು ನಡೆದಿವೆ. ಮೌರ್ಯ ಸಾಮ್ರಾಜ್ಯದ ಪತನಾನಂತರ ದಕ್ಷಿಣ ಭಾರತದ ಪಶ್ಚಿಮ ಕರಾವಳಿಯ ಉತ್ತರ ಭಾಗದ ಕೊಂಕಣ ಪ್ರದೇಶದಲ್ಲಿ ನೆಲಸಿದ್ದ, ಮೌರ್ಯ ಸಂತತಿಗೆ ಸೇರಿದವರೆನ್ನಲಾದ ಕೆಲವರಲ್ಲಿ ಒಬ್ಬ ತುಳು ನಾಡಿನ ಕೋಶರ್ ಜನರ ನೆರವಿನಿಂದ ತಮಿಳು ನಾಡಿನ ಮೋಗೂರ ಮೇಲೆ ದಂಡೆತ್ತಿದ. ಸ್ವಲ್ಪ ಕಾಲದ ಅನಂತರ ಕೋಶರ್ ಹಾಗೂ ಮೌರ್ಯರ ನಡುವೆ ಕಲಹ ಉಂಟಾಗಿ ಕೋಶರನ್ನು ಮೌರ್ಯರ ನನ್ನನ್ ಯುದ್ಧದಲ್ಲಿ ಎದುರಿಸಿದ. ಈ ಕೆಲವು ಅಂಶಗಳನ್ನು ಸಾಹಿತ್ಯಾಧಾರಗಳಿಂದ ಊಹಿಸಲಾಗಿದೆ. ಇವು ಎಷ್ಟರಮಟ್ಟಿಗೆ ಐತಿಹಾಸಿಕ ಎಂದು ಹೇಳಲಾಗದು.
"https://kn.wikipedia.org/wiki/ತುಳು_ನಾಡು" ಇಂದ ಪಡೆಯಲ್ಪಟ್ಟಿದೆ