ವಿಶ್ವಾಮಿತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary |
||
೧ ನೇ ಸಾಲು:
'''ವಿಶ್ವಾಮಿತ್ರ''' ಪ್ರಾಚೀನ ಭಾರತದಲ್ಲಿ ಬಹಳ ಪೂಜನೀಯರಾದ ಸನ್ಯಾಸಿಗಳಲ್ಲಿ ಒಬ್ಬರು. ಋಗ್ವೇದದ ೩ನೇ ಮಂಡಲದ ಬಹುಪಾಲು ಮಂತ್ರಗಳನ್ನು ರಚಿಸಿದ ಒಬ್ಬ ಮಹಾನ್ ಸಂತ. ಸನ್ಯಾಸಿಯಾಗುವ ಮುನ್ನಿನ ಜೀವನದಲ್ಲಿ ಒಬ್ಬ ಚಂದ್ರವಂಶದ ಕ್ಷತ್ರಿಯ ರಾಜ,
== ಹಿನ್ನೆಲೆ ==
ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬನು ಕುಶ(ಈತ ರಾಮನ ಮಗ ಕುಶ ಅಲ್ಲ, ಗಮನಿಸಿ.). ಈತನಿಗೆ ನಾಲ್ಕು ಮಂದಿ ಮಕ್ಕಳು- ಕುಶಾಂಭ, ಕುಶನಾಭ, ಅಧೂರ್ಥರಜಸ್ ಮತ್ತು ವಸು. ಈ ನಾಲ್ವರು ನಾಲ್ಕು ರಾಜ್ಯಗಳನ್ನು- ಕುಶಾಂಭ ಕೌಶಾಂಬಿಯನ್ನೂ, ಕುಶನಾಭ ಮಹೋದಯವನ್ನೂ, ಅಧೂರ್ಥರಜಸ್ ಧರ್ಮಾರಣ ಮತ್ತು ವಸು ಗಿರಿವಜ್ರವನ್ನು ಆಳಿಕೊಂಡಿದ್ದರು. ಈ ನಾಲ್ವರಲ್ಲಿ ಕುಶನಾಭನ ಮಗ ಗಾದಿ ಎಂಬಾತ, ಈತನ ಮಗ ವಿಶ್ವರಥ ಈತನಿಗೆ ಕೌಶಿಕನೆಂಬ ಹೆಸರು ಸಹ ಇತ್ತು. ಈ ಕೌಶಿಕನೇ ಮುಂದೆ ಅಖಂಡ ತಪಸ್ಸನ್ನಾಚರಿಸಿ, ತನಗೆ ಸವಾಲೆಸೆದ ವಸಿಷ್ಠರಿಂದಲೇ ಬ್ರಹ್ಮರ್ಷಿ(ಅತ್ಯುನ್ನತ ದೈವಿಕ, ಅನಂತ ಮತ್ತುಬ್ರಹ್ಮಜ್ಞಾನವನ್ನು ಪಡೆದುಕೊಂಡಿರುವ ಋಷಿ.) ಎಂದು ಕರೆಸಿಕೊಂಡ ಸಾಧಕರೆನಿಸಿಕೊಂಡರು. ಇವನಿಗೆ ಹೈಮವತಿ, ಶಾಲಾವತಿ, ದೃಷದ್ವತಿ, ರೇಣು, ಮಾಧವಿ ಮುಂತಾದ ಹೆಂಡತಿಯರಿದ್ದರು. ಇವನಿಗೆ ಮಧುಚ್ಛಂದ, ಕತಿ, ಯಾಜ್ಞವಲ್ಕ್ಯ, ಪಾಣಿನ, ಗಾಲವ, ಮುದ್ಗಲ, ಸಾಂಕೃತಿ, ದೇವಲ, ಅಷ್ಟಕರೆಂಬ ಮಕ್ಕಳಲ್ಲದೆ ಇವನ ವಂಶಕ್ಕೆ ಸೇರಿದ ಶುನಶ್ಯೇಪ ಎಂಬ ಹುಡುಗನೂ ಪ್ರಖ್ಯಾತರಾದವರು.
== ಜನನ ಮತ್ತು ಜೀವನ ==
ಗಾದಿ ರಾಜನ ಮಗಳು ಸತ್ಯವತಿ, ಋಚೀಕನೆಂಬ ಮುನಿಯನ್ನು ಮದುವೆ ಆಗುತ್ತಾಳೆ. ಸತ್ಯವತಿಯು ವಯಸಿನಲ್ಲಿ ಚಿಕ್ಕವಳಾದ ಕಾರಣ, ಸತ್ಯವತಿಯ ಜೊತೆಗೆ ಅವಳ ತಾಯಿಯೂ ಋಚಿಕನ ಆಶ್ರಮಕ್ಕೆ ತೆರಳುತ್ತಾಳೆ. ಒಮ್ಮೆ, ಗಂಡನೊಂದಿಗೆ ಈಶ್ವರನ ಕುರಿತಾದ ಹೋಮವೊಂದನ್ನು ಕೈಗೊಂಡ ಸಂದರ್ಭದಲ್ಲಿ ತನಗೊಂದು ಗಂಡು ಮಗು ಬೇಕೆಂಬ ಬೇಡಿಕೆಯನ್ನಿಡುತ್ತಾಳೆ. ಹೋಮ ಮಾಡುತ್ತಿರುವ ಕಾಲದಲ್ಲಿ ಅಗ್ನಿಧಾತಳಾದ ಪತ್ನಿಯು ಕೇಳಿದ್ದನ್ನು ನಿರಾಕರಿಸುವಂತಿಲ್ಲ. ಇಕ್ಕಟ್ಟಿನಲ್ಲಿ ಸಿಕ್ಕಿದ ಋಚೀಕನು ದೇವರಿಗೆ ಅರ್ಪಿಸಬೇಕಿದ್ದ ಹವಿಸ್ಸನ್ನೇ ಮಂತ್ರಿಸಿ, ಪಿಂಡ ರೂಪದಲ್ಲಿ ಹೆಂಡತಿಯ ಕೈಯಲ್ಲಿ ಕೊಡುತ್ತಾನೆ. ಕೊಡುವಾಗ ಮೊದಲ ಪಿಂಡವನ್ನು ನೀನೇ ತಿನ್ನು, ಈ ಎರಡನೆಯ ಪಿಂಡವನ್ನು ನಿನ್ನ ತಾಯಿಗೆ ಕೊಡು ಎಂದು ಆದೇಶಿಸುತ್ತಾನೆ. ಯಾಗವನ್ನು ಮುಗಿಸಿ ಮನಃಶಾಂತಿಗಾಗಿ ತಪಸ್ಸಿಗೆ ತೆರಳುತ್ತಾನೆ.
{{ಚುಟುಕು}}
|