ಹಟ್ಟಿಯಂಗಡಿ ನಾರಾಯಣ ರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೯ ನೇ ಸಾಲು:
== ಆಸಕ್ತಿಯ ವಿಷಯ ==
[[ಭಾಷಾಶಾಸ್ತ್ರ]] ಮತ್ತು ತತ್ತ್ವಜ್ಞಾನಗಳು ಇವರ ವಿಶೇಷ ಆಸಕ್ತಿಯ ವಿಷಯಗಳಾಗಿದ್ದವು. ಇವರ ಕನ್ನಡ ಕಥಾನಕ, [[ಕನ್ನಡ ಭಾಷೆ|ಕನ್ನಡಭಾಷೆ]], ಅದರ ಶಬ್ದಸಂಪತ್ತುಗಳನ್ನು ಕುರಿತು ಮಾಡಿದ ಮೌಲಿಕ ವಿವೇಚನೆಯಾಗಿದೆ. ಕನ್ನಡ ಶಬ್ದಗಳು ದೇಶ್ಯ, [[ಸಂಸ್ಕೃತ]]ದ [[ತತ್ಸಮ-ತದ್ಭವ]] ಎಂಬಿಷ್ಟೇ ಪರಿಮಿತಿಯಲ್ಲಿವೆ ಎಂದು ತಿಳಿದಿದ್ದ ಆ ಕಾಲದಲ್ಲಿ, ಕನ್ನಡದಲ್ಲಿ [[ಪ್ರಾಕೃತ]]ದಿಂದಲೂ ಸ್ವೀಕೃತವಾಗಿರುವ ಹಲವಾರು ಶಬ್ದ, ಪದಗಳ ಕಡೆಗೆ ಎಲ್ಲರ ಗಮನವನ್ನು ವಿಸ್ತರಿಸಿದರು. ಈ ಎಲ್ಲ [[ಭಾಷೆ]]ಗಳೊಂದಿಗೆ [[ಮರಾಠಿ]]ಯನ್ನೂ ಒಳಗೊಂಡು ಮುಂಬಯಿಯ [[ಏಷ್ಯಾಟಿಕ್ ಸೊಸೈಟಿ]]ಯಲ್ಲಿ ನೀಡಿದ ಇವರ [[ಭಾಷಣ]] ಬಹಳ ಮಹತ್ತ್ವದ್ದಾಗಿದೆ. ಇವರ [[ಮಾತೃಭಾಷೆ]] [[ಕೊಂಕಣಿ]]ಯಲ್ಲೂ ಚಿಂತನೆ ನಡೆಸಿ '''ಕೊಂಕಣೀಚೆ ಮೂಲಾದರ್ಶೋ''' ಎಂಬ ಕೃತಿಯನ್ನು ರಚಿಸಿದ್ದಾರೆ. [[ಬ್ರಹ್ಮ ಸಮಾಜ|ಬ್ರಹ್ಮಸಮಾಜ]]ದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಇವರು [[ಗಾಯತ್ರಿ ಮಂತ್ರ|ಗಾಯತ್ರಿಮಂತ್ರ]], [[ಭಜನೆ]]ಯ ಪದಗಳನ್ನು ಕನ್ನಡದಲ್ಲಿ ತಂದದ್ದು ಮಾತ್ರವಲ್ಲ ಅವುಗಳನ್ನು ಸೊಗಸಾಗಿ ಹಾಡುತ್ತಿದ್ದರು. 'ಟ್ರಾಕ್ಸ್ ಫಾರ್ ಥಿಂಕರ್ಸ್' ಎಂಬ ಇವರ ಕಿರುಹೊತ್ತಗೆಯೂ ಈ ನಿಟ್ಟಿನದೇ ಆಗಿದೆ.
== ಕೃತಿ ರಚನೆ ==
ಇವರು ಬರೆದದ್ದು ಕಡಿಮೆಯಾದರೂ ಮೌಲ್ಯ ಹಾಗೂ ಸತ್ತ್ವದಲ್ಲಿ ಹಿರಿಯದಾಗಿದೆ. ಇವರ ಅನುವಾದಿತ [[ಕವಿತೆ]]ಗಳಿಗೆ ಐತಿಹಾಸಿಕ ಮಹತ್ತ್ವವಿದೆ. ಇವರ ಆಂಗ್ಲಕವಿತಾವಳಿಯ ವಿಸ್ತೃತ ಪ್ರತಿ 1985ರಲ್ಲಿ೧೯೮೫ ರಲ್ಲಿ ಪ್ರಕಟಗೊಂಡಿದೆ ([[ಪಂಡಿತಾರಾಧ್ಯ]]). ಇವರ [[ಗದ್ಯ]] ಲೇಖನಗಳ ಸಂಪುಟವನ್ನು [[ಕರ್ನಾಟಕ ಸಾಹಿತ್ಯ ಅಕಾಡೆಮಿ]] ಪ್ರಕಟಿಸಿದೆ.
===ಕೃತಿಗಳು===
 
==ನಿಧನ==
ಹಟ್ಟಿಯಂಗಡಿ ನಾರಾಯಣರಾಯರು ೧೯೨೧ [[ಜೂನ್]] ೧೭ ರಂದು ನಿಧನರಾದರು.