ಆರ್. ಎಸ್. ರಾಜಾರಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೬ ನೇ ಸಾಲು:
ರಾಜಾರಾಂ ಅವರು ೧೯೭೨ರಿಂದ ನಟರಂಗ ಮತ್ತು ೧೯೮೩ರಿಂದ ವೇದಿಕೆಯ ರಂಗ ಚಟುವಟಿಕೆಗಳಲ್ಲಿ ತೊಡಗಿ ಸಿ.ಆರ್. ಸಿಂಹ ಅವರ ನಿರ್ದೇಶನದಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದರು. ಇದಲ್ಲದೆ ಬಿ.ವಿ. ಕಾರಂತ, ಎಂ.ಎಸ್‌. ಸತ್ಯು, ಶ್ರೀನಿವಾಸ್‌ ಜಿ. ಕಪ್ಪಣ್ಣ, ಜಯತೀರ್ಥ ಜೋಶಿ, ಸಿ.ಎಚ್‌. ಲೋಕನಾಥ್‌, ಆರ್. ನಾಗೇಶ್‌, ಪ್ರಕಾಶ್‌ ಬೆಳವಾಡಿ ಇವರ ನಿರ್ದೇಶನದ ಮಂಡೋದರಿ, ವಿಗಡವಿಕ್ರಮರಾಯ, ಎಚ್ಚಮನಾಯಕ, ಟಿಪ್ಪುಸುಲ್ತಾನ್‌, ಕಿತ್ತೂರು ಚೆನ್ನಮ್ಮ, ರಕ್ತಾಕ್ಷಿ, ಸದಾರಮೆ, ಕಾಕನ ಕೋಟೆ, ತುಘಲಕ್, ಮೃಚ್ಛಕಟಿಕ, ಸಂಕ್ರಾಂತಿ, ಅಗ್ನಿ ಮತ್ತು ಮಳೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ ಖ್ಯಾತಿ ರಾಜಾರಾಂ ಅವರದ್ದು . [[ಹೈದರಾಬಾದ್‌]], [[ಚೆನ್ನೈ]], [[ಕೋಲ್ಕತ್ತಾ]], [[ಕಾಶ್ಮೀರ]], [[ಮುಂಬಯಿ]], ಚಂಡೀಗಢ ಮುಂತಾದೆಡೆ ನಾಟಕ ಪ್ರದರ್ಶನದಲ್ಲಿ ಭಾಗಿಯಾದರು.<ref>https://vijaykarnataka.com/tv/news/kannada-actor-theatre-artist-rs-rajaram-passed-away/articleshow/82523261.cms</ref>
==ಕಿರುತೆರೆ-ಹಿರಿತೆರೆ==
[[ಭಲೇ_ಹುಚ್ಚ]] ಚಿತ್ರದ ಮೂಲಕ ಕನ್ನಡ ಚಲನಚಿತ್ರಲೋಕಕ್ಕೆ ಪಾದಾರ್ಪಣೆ ಮಾಡಿದ ರಾಜಾರಾಂ,<ref>https://twitter.com/KannadaNaduu/status/1391728536252264448</ref> ಸಿದ್ಧಲಿಂಗಯ್ಯನವರ [[ಕೂಡಿ_ಬಾಳಿದರೆ_ಸ್ವರ್ಗ_ಸುಖ]] ಚಿತ್ರದಲ್ಲಿ ತಂದೆಯ ಪಾತ್ರದಲ್ಲಿ ಜನಪ್ರಿಯತೆ ಗಳಿಸಿದರು. ಭಾರ್ಗವ, ಹಾಸ್ಯ ಪ್ರಧಾನ ಪಾತ್ರಗಳ ಮೂಲಕ ಜಗ್ಗೇಶ್ ಚಿತ್ರಗಳಲ್ಲಿ ಖಾಯಂ ಕಲಾವಿದರಾಗಿದ್ದ ರಾಜಾರಾಂ, ಹೊಸ ತಲೆಮಾರಿನ ನಟರಾದ[[ಶರಣ್]] <ref>https://twitter.com/i/web/status/1391755048753893381</ref>ಮತ್ತು ಮುಂತಾದವರೊಂದಿಗೆ ನಟಿಸಿ ಸೈ ಎನ್ನಿಸಿಕೊಂಡಿದ್ದರು. [[ಝಿ_ಕನ್ನಡ]]ದ [[ಜೊತೆ_ಜೊತೆಯಲಿ_(ಧಾರಾವಾಹಿ)]] ಧಾರಾವಾಹಿಯಲ್ಲಿ ಅಭಯ್ ಅಜ್ಜನ ಪಾತ್ರದಲ್ಲಿ ರಾಜಾರಾಂ ಬಲು ಜನಪ್ರಿಯತೆ ಗಳಿಸಿದ್ದರು.
[[File:Sundarraj and rs rajaram in Kannada movie aliya alla magala ganda.webp|thumb|Sundarraj and rs rajaram in aliya alla magala ganda]]
==ಪ್ರಶಸ್ತಿ ಗೌರವಗಳು==
ರಾಜಾರಾಂ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಸಂಘ. ಸಂಸ್ಥೆಗಳು, ಪ್ರತಿಷ್ಠಾನಗಳ ಗೌರವಗಳು ಸಂದಿವೆ..
==ಉಲ್ಲೇಖಗಳು==
==ಮಾಹಿತಿ ಕೃಪೆ==
[http://kanaja.in/dinamani/%E0%B2%86%E0%B2%B0%E0%B3%8D-%E0%B2%8E%E0%B2%B8%E0%B3%8D%E2%80%8C-%E0%B2%B0%E0%B2%BE%E0%B2%9C%E0%B2%BE%E0%B2%B0%E0%B2%BE%E0%B2%82/ ಕಣಜ]
[[ವರ್ಗ: ರಂಗಭೂಮಿ ಕಲಾವಿದರು]]
"https://kn.wikipedia.org/wiki/ಆರ್._ಎಸ್._ರಾಜಾರಾಂ" ಇಂದ ಪಡೆಯಲ್ಪಟ್ಟಿದೆ