ಮಾತೃಭಾಗ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Maatrubhagya.jpg ಹೆಸರಿನ ಫೈಲು Christian Ferrerರವರಿಂದ ಕಾಮನ್ಸ್ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕ... |
No edit summary |
||
೧ ನೇ ಸಾಲು:
{{Infobox ಚಲನಚಿತ್ರ
|ಚಿತ್ರದ ಹೆಸರು = ಮಾತೃಭಾಗ್ಯ
Line ೨೩ ⟶ ೨೧:
|ಪ್ರಶಸ್ತಿ ಪುರಸ್ಕಾರಗಳು =
|ಇತರೆ ಮಾಹಿತಿ =
|----}}
ಮಾತೃಭಾಗ್ಯ ಕೆ.ಎನ್.ಚಂದ್ರಶೇಖರ್ ಶರ್ಮ ಅವರ ನಿರ್ದೇಶನದಲ್ಲಿ ೧೯೯೧ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯ ಮಹತ್ವ, ಆಕೆ ನಿರ್ವಹಿಸುವ ವಿವಿಧ ಜವಾಬ್ದಾರಿಗಳು, ಅತ್ಯಂತ ಕ್ಲಿಷ್ಟ ಪರಿಸ್ಥಿತಿಗಳಲ್ಲಿಯೂ ಜಾಗೃತವಾಗುವ ಆಕೆಯ ಮಾತೃ ಹೃದಯ ಇಂತಹ ಹೊಳಹುಗಳನ್ನು ಇರಿಸಿಕೊಂಡು ತಯಾರಾದ ಈ ಚಿತ್ರದಲ್ಲಿ ಟೈಗರ್ [[ಪ್ರಭಾಕರ್]] ಮತ್ತು [[ಮಹಾಲಕ್ಷ್ಮಿ]] ಮುಖ್ಯ ತಾರಾಗಣದಲ್ಲಿ ಇದ್ದಾರೆ.
[[ವರ್ಗ:ವರ್ಷ-೧೯೯೧ ಕನ್ನಡಚಿತ್ರಗಳು]]▼
==ಪರಿಚಯ==
==ವಸ್ತು ವಿಷಯ==
▲ ಈ ಚಿತ್ರ ವಿ.ಎಮ್.ಎ. ಮೂವೀಸ್ ಅವರ ಬ್ಯಾನರಿಂದ ಬಂದಿತ್ತು. ಈ ಚಿತ್ರವನ್ನು ಶ್ರೀಮತಿ ಕಮಲಮ್ಮ ಅವರು ಪ್ರಸ್ತುತಗೊಳಿಸಿದ್ದಾರೆ. ಇಪ್ಪತ್ತನೇ ನವೆಂಬರ್ ೧೯೯೧ ರಲ್ಲಿ ಬಿಡುಗದೆಯಾದ ಈ ಚಿತ್ರದ ಸಮಯಚಾಲನೆ ೧೩೭ ನಿಮಿಷಗಳು. ಇದರ ನಿರ್ಮಾಪಕರು ಶ್ರೀ ಪುರುಶೋತ್ತಮ್ ಮತ್ತು ಎನ್.ಮುನಿರಾಮ್ ಅವರುಗಳು. ಕುಣಿಗಲ್ ನಾಗಭೂಷಣ ಕಥೆ ಹಾಗೂ ಡಯಾಲೋಗ್ ಬರೆದ ಈ ಚಿತ್ರವನ್ನು ನಿರ್ದೇಶಿಸಿದವರು ಕೆ.ಎನ್.ಚಂದ್ರಶೇಖರ ಶರ್ಮಾ. ಚಿತ್ರಕಥೆಯನ್ನು ಬರೆದವರು ಅವರೇ. ಇವರಿಗೆ ಸಹಾಯ ಮಾಡಿದವರು ಸುಂದರ್ ಮತ್ತು ರಮೇಶ್ ಅವರುಗಳು. ಈ ಚಿತ್ರದ ಸಂಪಾದಕರು ವಿಕ್ಟರ್ ಯಾದವ್, ಸಾಹಸಗಳನ್ನು ಕೊಟ್ಟಿರುವರು ಶಿವಯ್ಯ, ವೇಷಭೂಷಣಕ್ಕೆ ಕಾರಣರಾದವರು ಸುಂದರ್ ಮತ್ತು ಪರಮೇಶ್. ಉಪೇಂದ್ರ ಕುಮಾರ್ ಅವರ ಸಂಗೀತದಲ್ಲಿ ಗೀತೆಗಳನ್ನು ಜಿ.ಉದಯಶ್ಂಕರ, [[ಆರ್.ಎನ್.ಜಯಗೋಪಾಲ್]], [[ದೊಡ್ಡರಂಗೇಗೌಡ]] ಅವರುಗಳು ಬರೆದಿದ್ದಾರೆ. [[ಎಸ್.ಪಿ.ಬಾಲಸುಬ್ರಹ್ಮಣ್ಯಂ]] ಮತ್ತು [[ಚಿತ್ರಾ]] ಇವರು ಹಾಡಿದ ನೀ ನಗಲು ಹಾಗೂ ತಾಳಳಾರೆ ನಾ ಗೀತೆಗಳು ಪ್ರಸಿದ್ಧಗೊಂಡಿವೆ. [[ಎಸ್.ಪಿ.ಬಾಲಸುಬ್ರಹ್ಮಣ್ಯಂ]] ಅವರು ನಗುತಾ ಬಾಳಲ್ಲಿ ಮತ್ತು [[ಮಂಜುಳಾ ಗುರುರಾಜ್]] ಅವರು ಹಾಡುತ್ತ ಹಾಡುತ್ತ ಎಂಬ ಹಾಡುಗಳನ್ನು ಹಾಡಿದರು. ಎಲ್ಲಾ ಹಾಡುಗಳೂ ಕೇಳುವವರ [[ಕಿವಿ]] ಮತ್ತು ಮನಸ್ಸಿಗೆ ಇಂಪು ನೀಡುತ್ತವೆ. ಈ ಹಾಡುಗಳಿಗೆ ನೃತ್ಯವನ್ನು ಕಲಿಸಿಕೊಟ್ಟವರು ಡಾನ್ಸ್ ಮಾಸ್ಟರ್ ಸತೀಶ್ ಅವರು. ಚಿತ್ರದ ಛಾಯಾಗ್ರಹಕರಾದ ಎನ್.ಕೆ.ಸತೀಶ್ ಉತ್ತಮವಾಗಿ ಕೆಲಸವನ್ನು ನಿಭಾಯಿಸಿದ್ದಾರೆ.<ref>https://kannadamoviesinfo.wordpress.com/2013/09/07/mathru-bhagya-1991/</ref>
==ತಾರಾಗಣ==
▲ ಚಿತ್ರದ ನಾಯಕ ನಟ [[ಟೈಗರ್ ಪ್ರಭಾಕರ್]] ಅವರನ್ನು [[ಕನ್ನಡ]] ಪ್ರಭಾಕರ್ ಎಂದು ಕರೆಯುವರು. ಇವರು ತಮ್ಮ ಚಿತ್ರರಂಗದ ಪಯಣವನ್ನು ಖಳನಾಯಕನಾಗಿ 'ಕಾಡಿನ ರಹಸ್ಯ' ಚಿತ್ರದಲ್ಲಿ ಪ್ರಾರಂಭಿಸಿದರು. ಇವರು [[ಕನ್ನಡ]], ತಮಿಲು , ತೆಲುಗು, ಮಲಯಾಲಮ್ ಹಾಗೂ ಹಿಂದಿ ಸೇರಿಸಿ ೧೯೩ ಚಿತ್ರಗಳಲ್ಲಿ ನಟಿಸಿದ್ದಾರೆ. ಮಾತೃಭಾಗ್ಯ ಇವರ ೧೫೭ನೇ ಚಿತ್ರ. ಈ ಚಿತ್ರದ ಇನ್ನೊಂದು ನಾಯಕ ನಟ ದೇವರಾಜ್ ಅವರು. ಇವರೂ ಕೂಡ ಖಳನಾಯಕನಾಗಿ ತಮ್ಮ ಚಿತ್ರರಂಗದ ಪ್ರಯಾಣವನ್ನು ಪ್ರಾರಂಭಿಸಿದರು. ಇವರು ಹಲವು ನಾಟಕಗಳಲ್ಲಿ ಪಾತ್ರ ವಹಿಸಿ ಮೊಟ್ಟ ಮೊದಲು ೧೯೮೫ರಲ್ಲಿ ತ್ರಿಶೂಲ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಇವರನ್ನು 'ಡೈನಾಮಿಕ್ ಸ್ಟಾರ್' ಎಂಬ ಹೆಸರಿನಿಂದ ಕರೆಯುತ್ತಾರೆ. ಟೈಗರ್ ಪ್ರಭಾಕರ್ ಮತ್ತು ದೇವರಜ್ ಇವರ ಚಿತ್ರಗಳಲ್ಲಿ ದೇಶಪ್ರೇಮ ಮೂಡಿ ಬರುತ್ತದೆ. ಈ ಚಿತ್ರದಲ್ಲೂ ನಾವು ಇದನ್ನು ಕಾಣುತ್ತೇವೆ.
==ಉಲ್ಲೇಖಗಳು==
<references/>
▲[[ವರ್ಗ:ವರ್ಷ-೧೯೯೧ ಕನ್ನಡಚಿತ್ರಗಳು]]
[[ವರ್ಗ:ಕನ್ನಡ ಚಲನಚಿತ್ರಗಳು]]
|