ಹೆಬ್ಬಾಳ ಕಿತ್ತಯ್ಯ ಶಿಲಾಬರಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
{{Quotation|ಶ್ರೀಪುರುಷ ಮಹಾರಾಜನು ಭೂಮಿಯನ್ನು ಆಳುತ್ತಿದ್ದಾಗ ಪೆರ್ಬ್ಬೊಳಲನಾಡು-ಮೂವತ್ತನ್ನು ಪೆಳ್ನಾಗತ್ತರಸನು ಆಳುತ್ತಿರಲು ಆರಕಮ್ಮೊರ ಎಂಬ ವ್ಯಕ್ತಿಯ ಮೈದುನ ಕೊಡನ್ದಲೆ ಕಿತ್ತಯ್ಯನು ರಟ್ಟವಾಡಿಯ ದಂಡು ಬಂದಾಗ ಊರಿನ ನಾಶವನ್ನು ತಡೆಯಲು ಹೋರಾಡಿ ಸತ್ತು ಇಂದ್ರಲೋಕವನ್ನು ಸೇರಿದ. ಪೆರ್ಗುನ್ದಿ ಮತ್ತು ಅವನ ತಮ್ಮ ಕಿರ್ಗುನ್ದಿ ಸ್ಥಾಪಿಸಿದ ಕಲ್ಲು ಇದಾಗಿದೆ}}.
 
ಈ ವೀರಗಲ್ಲು 'ಕಿತ್ತಯ್ಯ' ಎಂಬುವವನ ನೆನಪಿಗಾಗಿ ಗೌರವಾರ್ಥವಾಗಿ ಹಾಕಲಾಗಿದೆ. ಆತ 'ಪೆರ್ಬೊಳಲನಾಡು'-ಮೂವತ್ತರ ನಿವಾಸಿಯಾಗಿದ್ದು ರಟ್ಟವಾಡಿ ([[ರಾಷ್ಟ್ರಕೂಟ]]) ಸೈನ್ಯದ ಧಾಳಿಯ ವಿರುದ್ಧ ಹೋರಾಡಿ ಮರಣಹೊಂದಿದವನು. ಆ ದಾಳಿಯು ಪೆರ್ಬೊಳ ಊರನ್ನು ನಾಶಮಾಡಲು ಮಾಡಿದ ದಾಳಿಯಾಗಿತ್ತು. ಆ ಸಮಯದಲ್ಲಿ ಪೆಳ್ನಾಗತ್ತರನು'ಪೆಳ್ನಾಗತ್ತರ'ನು ಪೆರ್ಬೊಳಲನಾಡಿನ ಮುಖ್ಯಸ್ಥನಾಗಿದ್ದನು ಮತ್ತು ಶ್ರೀಪುರುಷನು'ಶ್ರೀಪುರುಷ'ನು ದೊರೆಯಾಗಿದ್ದನು. ಇದರಲ್ಲಿ 'ಮೂವತ್ತು' ಎಂಬ ಸಂಖ್ಯೆಯು ಗಂಗ ಸಾಮ್ರಾಜ್ಯದಲ್ಲಿ ಮೂವತ್ತು ಊರುಗಳ ಅಡಳಿತ ಮುಖ್ಯಕೇಂದ್ರವಾಗಿ ಪೆರ್ಬೊಳನಾಡು ಇರುವುದನ್ನು ಸೂಚಿಸುತ್ತದೆ.
 
ಗಂಗರ ಶ್ರೀಪುರುಷನು ಕ್ರಿ.ಶ ೭೨೬-೭೮೮ರ ನಡುವೆ ರಾಜ್ಯವಾಳಿದ ಗಂಗ ಸಾಮ್ರಾಜ್ಯದ ಶಕ್ತಿಶಾಲಿ ದೊರೆ. ಪಶ್ಚಿಮ ಗಂಗ ಸಾಮ್ರಾಜ್ಯವು ಕ್ರಿಶ ೪೦೦ ರಿಂದ ೧೦೦೦ ನೇ ಇಸವಿಯವರೆಗೆ ದಕ್ಷಿಣ ಭಾರತದಲ್ಲಿ ಒಂದು ಶಕ್ತಿಶಾಲಿ ಸಾಮ್ರಾಜ್ಯವಾಗಿತ್ತು. ಶ್ರೀಪುರುಷನ ರಾಜ್ಯವು ಗಂಗವಾಡಿ<ref>{{Harvnb|The Ganga’s of Talakad by V Krishna Rao|1936|p=139 & 305}}</ref> ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು ಮತ್ತು ಈಗಿನ ಕೋಲಾರ, ಬೆಂಗಳೂರು, ಕೃಷ್ಣಗಿರಿ, ಸೇಲಂ, ಈರೋಡು, ಮಂಡ್ಯ, ಮೈಸೂರು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳ ಪ್ರದೇಶಗಳಲ್ಲಿ ಹರಡಿತ್ತು. ಈ ಪ್ರದೇಶಗಳಲ್ಲಿ ದೊರೆತ ಆ ಕಾಲದ ಅನೇಕ ವೀರಗಲ್ಲುಗಳು ಆ ಕಾಲದಲ್ಲಿ ಗಂಗ ಮತ್ತು [[ರಾಷ್ಟ್ರಕೂಟ|ರಾಷ್ಟ್ರಕೂಟರ]] ನಡುವೆ ನಡೆದ ಹಲವು ಕಾಳಗಗಳ ಬಗ್ಗೆ ಮಾಹಿತಿ ಒದಗಿಸುತ್ತವೆ.<ref>{{cite book|title=Rashtrakuta Relations with the Gangas of Talakad|last1=ಕೆ. ಎಸ್|first1=ಶಿವಣ್ಣ|date=1977|publisher=ಮೈಸೂರು ವಿ.ವಿ. ಪ್ರಸಾರಾಂಗ|year=|isbn=|location=ಮೈಸೂರು|pages=}}</ref>