ಕೊಂಡಗೂಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೫ ನೇ ಸಾಲು:
 
ಕೊಂಡಗೂಳಿ ಗ್ರಾಮವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ [[ಸಿಂದಗಿ]] ತಾಲ್ಲೂಕಿನಲ್ಲಿದೆ.
ಚರೀತ್ರೆಯಲ್ಲಿ ಕೇಶಿರಾಜ,
ಕೊಂಡಗುಳಿ ಕೇಶಿರಾಜ ಕರ್ನಾಟಕದ ಮೊದಲ ವೀರಶೈವ ಕವಿಯೆನ್ನಿಸಿಕೊಂಡಿದ್ದಾನೆ. ಕವಿಯಾಗಿ ವಿದ್ವಾಂಸನಾಗಿ ಮಂತ್ರಿಯಾಗಿ ಬಹುಮುಖ ಖ್ಯಾತಿಗೆ ಪಾತ್ರನಾದ ಕನ್ನಡಿಗ.
 
===ಕಾಲ===
೧೧೬೦ ಎಂದು ಕನ್ನಡ ಕವಿಚರಿತ್ರೆಯಲ್ಲಿ ಹೇಳಿದೆ. ಈತ ವೀರಶೈವ.
 
===ಕೃತಿಗಳು===
ಷಡಕ್ಷರ ಮಂತ್ರಮಹಿಮೆ,ಲಿಂಗಮಹತ್ವದ ಕಂದ, ಮಂತ್ರಮಹತ್ವದಕಂದ ಎಂಬ ಗ್ರಂಥ ಬರೆದಿದ್ದಾನೆ. ಮಂತ್ರಮಹತ್ವದ ಕಂದ ಈ ಕೃತಿಯಲ್ಲಿ ಓಂ ನಮಃ ಶಿವಾಯ ಎಂಬ ಮಂತ್ರದ ಮಹಾತ್ಮ್ಯವನ್ನು ಇದರಲ್ಲಿ ಬಗೆಬಗೆಯಾಗಿ ಬಣ್ಣಿಸಲಾಗಿದೆ. ಇದರಲ್ಲಿ 110 ಕಂದಪದ್ಯಗಳಿವೆ. ಇವನ ಬಂಧ ಪ್ರೌಢವಾದುದು. . ಪ್ರಾಚೀನ ಕವಿಗಳಾದ ಹಂಪೆಯ ಹರೀಶ್ವರ, ರಾಘವಾಂಕರು ತಮ್ಮ ಗಿರಿಜಾಕಲ್ಯಾಣ ಮತ್ತು ಹರಿಶ್ಚಂದ್ರ ಕಾವ್ಯಗಳಲ್ಲಿ ಈತನ ಬಗೆಗೆ `ಫಾಲಲೋಚನನಲ್ಲದೆ ಪೊಗಳದ ಕೇಶಿರಾಜ' ಎಂದು ಮೊದಲಾಗಿ ಸ್ಮರಿಸಿದ್ದಾರೆ. ಪಾಲ್ಕುರಿಕೆ ಸೋಮನಾಥನ ಗಣಸಹಸ್ರನಾಮದಲ್ಲಿ ಇವನ ಹೆಸರಿನ ಉಲ್ಲೇಖವಿದೆ. ಬೈರವೇಶ್ವರ ಕಾವ್ಯದ ಕಥಾಸೂತ್ರ ರತ್ನಾಕರದಲ್ಲಿ ಮತ್ತು ಇತರ ವೀರಶೈವ ಗ್ರಂಥಗಳಲ್ಲಿ ಈತನ ವಿಷಯವಾಗಿ ಅನೇಕ ಉಲ್ಲೇಖಗಳಿವೆ. ಶಿಕಾರಿಪುರದ 119 ಮತ್ತು 123ನೆಯ ಶಾಸನಗಳಲ್ಲಿ ಇವನನ್ನು ಕುರಿತು ಬಣ್ಣಿಸಲಾಗಿದೆ. ಈತನೊಬ್ಬ ವೀರಶೈವರಲ್ಲಿ ಮಹಿಮಾ ಪುರುಷನೆಂಬ ನಂಬಿಕೆ ಇದೆ.
 
ಕೇಶಿರಾಜನ ಊರು ಕೊಂಡುಗುಳಿ. ಇದು ವಿಜಯಪುರ ಜಿಲ್ಲೆಯ ಸಿಂದಗಿ ಗ್ರಾಮಕ್ಕೆ 10 ಮೈಲಿ ದೂರದಲ್ಲಿ ಆಗ್ನೇಯ ದಿಕ್ಕಿಗಿದೆ. ಕೇಶಿರಾಜ ಹುಟ್ಟಿದ ಸ್ಥಳವಿದು. ಈತನ ತಂದೆ ಹೂಳಲಮರಸ, ತಾಯಿ ದುರ್ಗಾದೇವಿ ಎಂದು ಶಿಕಾರಿಪುರದ ಶಾಸನಗಳಲ್ಲಿ ಹೇಳಿದೆ. ಈತನ ಹೆಂಡತಿಯ ಹೆಸರು ಗಂಗಾದೇವಿ. ಗುರುವಿನ ಹೆಸರು ವಿರೂಪಾಕ್ಷ. ಇವನ ಇಷ್ಟ ದೇವತೆ ಸೋಮನಾಥ. ಕೇಶಿರಾಜ ದೊಡ್ಡ ವಿದ್ವಾಂಸನಾಗಿದ್ದ. ಪ್ರತಿದಿನವೂ ಕಂದ, ತ್ರಿಪದಿ, ರಗಳೆ, ವಚನ, ಪದ, ಪದ್ಯ, ದಂಡಕ, ಅಷ್ಟಕ ಮೊದಲಾದವನ್ನು ರಚಿಸಿ, ಪರಮೇಶ್ವರನ ಮುಂದೆ ಹಾಡುತ್ತಿದ್ದ. ಕೆಲವು ಕಾಲಾನಂತರ ಈತ ಭಕ್ತರ ಕೋರಿಕೆಯಂತೆ ಆಗ ಚಾಲುಕ್ಯರ ರಾಜಧಾನಿಯಾದ ಕಲ್ಯಾಣಪಟ್ಟಣಕ್ಕೆ ಸಮೀಪದ ಶಿವಪುರ ಎಂಬ ಗ್ರಾಮಕ್ಕೆ ಬಂದು ನಿಂತ. ಅಲ್ಲಿ ಲಿಂಗಾರ್ಚನೆ, ಜಂಗಮದಾಸೋಹ ಮೊದಲಾದವನ್ನು ನಡೆಸುತ್ತಿದ್ದ. ಇವನ ಶಾಸ್ತ್ರ ಪಾಂಡಿತ್ಯ, ವಿಚಾರಲಹರಿ ಮತ್ತು ಮಹತ್ವದ ಸದ್ಗುಣಗಳು ಸಮಕಾಲೀನ ಜನರ ಮೇಲೆ ಒಳ್ಳೆಯ ಪರಿಣಾಮವನ್ನುಂಟುಮಾಡಿದವು. ಆ ಕಾಲದಲ್ಲಿ ತರ್ದೆವಾಡಿ ನಾಡಿನ ರಾಜಧಾನಿಯಾದ ಮಂಗಳವಾಡದಲ್ಲಿ(ಸೊಲ್ಲಾಪುರ ಜಿಲ್ಲೆ) ಕಳಚುರಿ ವಂಶೀಯನಾದ ಪೆರ್ಮಾಡಿ ಎಂಬ ರಾಜ ಆಳುತ್ತಿದ್ದ. ಕೇಶಿರಾಜನ ಕೀರ್ತಿ ವಿದ್ವತ್ತು, ಮೊದಲಾದುವನ್ನು ದಿನವೂ ಕೇಳಿದ ರಾಜ ಇವನನ್ನು ಮಂಗಳವಾಡಕ್ಕೆ ಕರೆಸಿದ. ಕೇಶಿರಾಜನ ಪ್ರಭಾವ ಅರಸನ ಮೇಲೆಯೂ ಬಿತ್ತು. ಕೆಲ ದಿನಗಳಲ್ಲಿಯೇ ಕೇಶಿರಾಜ ಪೆರ್ಮಾಡಿಯ ಮಂತ್ರಿಯಾದ. ಈತನಿಗೆ ದಂಡನಾಯಕ ಎಂಬ ಬಿರುದೂ ಸಂದಿತು. ಅಂದಿನಿಂದ ಕೇಶಿರಾಜ ದಂಣ್ಣಾಯಕ ಕೇಶಿರಾಜ ಎಂದು ಕರೆಸಿಕೊಂಡ.
 
ಕೇಶಿರಾಜ ಸಕಲಶಾಸ್ತ್ರ ಪಂಡಿತನೂ, ರಾಜನೀತಿ ವಿಷಾರದನು ಎನಿಸಿದ್ದುದರಿಂದ ಇವನ ಆಡಳಿತ ಜನಪ್ರಿಯವೆನಿಸಿತು. ಶಿವಶರಣನಾದುದರಿಂದ ಅವರ ಉದಾರ ತತ್ತ್ವಗಳನ್ನು ಈತ ಪ್ರಸಾರಮಾಡತೊಡಗಿದ್ದ. ಇದರಿಂದ ಅಸಮಾಧಾನಗೊಂಡ ಕೆಲವರು ರಾಜನಲ್ಲಿ ದೂರಿತ್ತರು. ದುರಾದೃಷ್ಟದಿಂದ ರಾಜ ಚಾಡಿಕೋರರ ಮಾತನ್ನು ನಂಬಿದ. ರಾಜನಿಗೂ ಕೇಶಿರಾಜನಿಗೂ ವಿರಸ ಉಂಟಾಗಿ ಕೇಶಿರಾಜ ಮಂತ್ರಿಪದವಿಯನ್ನು ತೊರೆದು ಮನೆಗೆ ಬಂದ. ಈತನ ಹೆಂಡತಿ ಮಹಾಶಿವಶರಣೆಯಾದ್ದರಿಂದ ನರನಸೇವೆ ತೊಲಗಿ ಹರನಸೇವೆಗೆ ಅನುಕೂಲವಾಯಿತು-ಎಂದು ಸಮಾಧಾನಪಟ್ಟಳು. ಸತಿಪತಿಗಳಿಬ್ಬರೂ ಮಂಗಳವಾಡದಿಂದ ಹೊರಟಾಗ ತತ್ತ್ವನಿಷ್ಟರಾದ ಜನ ಅವರನ್ನು ಸತ್ಕರಿಸಿದರು. ಕೇಶಿರಾಜನ ತ್ಯಾಗಬುದ್ಧಿ, ಸತ್ಯಸಂಧತೆ, ಧೈರ್ಯಸ್ಥೈರ್ಯಗಳು ನಾಡಿನಲ್ಲಿ ಮನೆಮಾತಾದವು. ಅನಂತರ ಅರಸ ಪೆರ್ಮಾಡಿ ತಾನು ಚಾಡಿಕೋರರ ಮಾತನ್ನು ಕೇಳಿದ್ದು ತಪ್ಪಾಯಿತೆಂದು ಗ್ರಹಿಸಿ, ಹಿಂದಿರುಗುವಂತೆ ಕೇಶಿರಾಜನಿಗೆ ಕರೆ ಕಳುಹಿಸಿದ. ಸ್ವಾಭಿಮಾನಿಯಾದ ಕೇಶಿರಾಜ ಆಹ್ವಾನವನ್ನು ತಿರಸ್ಕರಿಸಿ, ಸ್ವಗ್ರಾಮವಾದ ಕೊಂಡಗುಳಿಗೆ ತೆರಳಿದ. ಮಾರ್ಗಮಧ್ಯದಲ್ಲಿ ಭೀಮಾನದಿ ತೀರದ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಅಲ್ಲಿ ಪತ್ನಿ ಸಮೇತ ಶಿವಪೂಜೆಯಲ್ಲಿ ತೊಡಗಿರಲು ಗರುಡಪಕ್ಷಿಯೊಂದು ಬಂದು ಈತ ಪೂಜಿಸುತ್ತಿದ್ದ ಇಷ್ಟಲಿಂಗವನ್ನು ಕಚ್ಚಿಕೊಂಡುಹೋಗಿ ನದಿಯಲ್ಲಿ ಹಾಕಿತು. ಇದರಿಂದ ಬಹಳವಾಗಿ ದುಗುಡಗೊಂಡ ಕೇಶಿರಾಜ ತನ್ನ ಇಷ್ಟಲಿಂಗವನ್ನು ಕುರಿತು ಭಕ್ತಿಯಿಂದ ಪ್ರಾರ್ಥಿಸಲು ಅದು ಭೀಮಾನದಿಯಿಂದ ಬಂದು ಇವನ ಅಂಗೈಯಲ್ಲಿ ಕುಳಿತುಕೊಂಡಿತು. ಪೂಜಾನಂತರ ಇವರು ತಮ್ಮ ಗ್ರಾಮವನ್ನು ಸೇರಿಕೊಂಡರು.
 
ಕೇಶಿರಾಜ ಬಸವೇಶ್ವರನಿಗಿಂತ ಮೊದಲು ಕಳಚುರಿಗಳಲ್ಲಿ ಮಂತ್ರಿಯಾಗಿದ್ದ ಪ್ರಪ್ರಥಮ ವೀರಶೈವ. ಕೊಂಡಗುಳಿಯಲ್ಲಿ ಇವನ ಹೆಸರಿನ ದೇವಾಲಯವಿದೆ. ಕೊಂಡಗುಳಿಯಲ್ಲಿಯೇ ಈತ ಐಕ್ಯನಾದಂತೆ ಕಾಣುತ್ತದೆ. ಅಲ್ಲಿ ಈತನ ಸಮಾಧಿ ಉಂಟೆಂದು ಹೇಳುತ್ತಾರೆ. ವೀರಶೈವ ಸಾಹಿತ್ಯದಲ್ಲಿ ಇವನ ಹೆಸರು ವಿಖ್ಯಾತವಾಗಿದೆ.
 
==ಭೌಗೋಳಿಕ==
"https://kn.wikipedia.org/wiki/ಕೊಂಡಗೂಳಿ" ಇಂದ ಪಡೆಯಲ್ಪಟ್ಟಿದೆ