ಭಾರತದ ಇತಿಹಾಸದಲ್ಲಿ ಬುದ್ಧ-ಪ್ರಶಾಂತ್ ಟಿ ಎಂ Dhulia Ranjith
==ಉಲ್ಲೇಖ==
<ref>http://indianhistorypr.blogspot.in/2011/03/blog-post_6230.html</ref>
<ref>http://kannada.oneindia.com/topic/%E0%B2%97%E0%B3%8C%E0%B2%A4%E0%B2%AE-%E0%B2%AC%E0%B3%81%E0%B2%A6%E0%B3%8D%E0%B2%A7</ref>
<ref>http://sampada.net/%E0%B2%AC%E0%B3%8B%E0%B2%A7%E0%B2%BF%E0%B2%B5%E0%B3%83%E0%B2%95%E0%B3%8D%E0%B2%B7-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%97%E0%B3%8C%E0%B2%A4%E0%B2%AE-%E0%B2%AC%E0%B3%81%E0%B2%A6%E0%B3%8D%E0%B2%A7</ref><ref> https://shailajasbhat.wordpress.com/tag/%E0%B2%97%E0%B3%8C%E0%B2%A4%E0%B2%AE-%E0%B2%AC%E0%B3%81%E0%B2%A6%E0%B3%8D%E0%B2%A7%E0%B2%9A%E0%B2%95%E0%B3%8D%E0%B2%B0%E0%B2%B5%E0%B2%B0%E0%B3%8D%E0%B2%A4%E0%B2%BF-%E0%B2%85%E0%B2%B6%E0%B3%8B/</ref>
<ref>http://vijaykarnataka.indiatimes.com/home/weekly/books/-1968/articleshow/28684700.cms</ref>
<ref>http://snehajivi-bhavanajivi.blogspot.in/2011/10/blog-post_19.html</ref>
<ref>http://vasanthrr.blogspot.in/2011/10/blog-post_16.html</ref>
<ref>http://www.udayavani.com/tags/%E0%B2%97%E0%B3%8C%E0%B2%A4%E0%B2%AE-%E0%B2%AC%E0%B3%81%E0%B2%A6%E0%B3%8D%E0%B2%A7</ref>
<ref>http://beta.varthabharathi.net/Writer/6241/</ref>
ಘವತಮ ಬುದ್ಧ
🏵️ಸೋಮ (ಚಂದ್ರ) ವಂಶಿ ಆರ್ಯ ಕ್ಷತ್ರಿಯರ ಇತಿಹಾಸ 🏵️ ಸ್ವಯಂಭೂ ಭಗವಾನ್ ವಿಷ್ಣುವಿನ ಹೊಕ್ಕೊರಳಿನ ನಾಬೆಯ ಕಮಲದಿಂದ ಬ್ರಹ್ಮನು ಜನಿಸಿದನು.ಬ್ರಹ್ಮನು ತನ್ನ ಕಮಂಡಲದಲ್ಲಿರುವ ನೀರಿನಿಂದ ಈಶ್ವರನನ್ನು ಸೃಷ್ಟಿಸಿದನು. ಕೆಲವು ವರ್ಷಗಳ ನಂತರ ಬ್ರಹ್ಮನು ಅತ್ರಿ ಋಷಿಯನ್ನು ಸೃಷ್ಟಿಸಿದನು. ಅತ್ರಿ ಋಷಿಯು ಅನುಸೂಯಳನ್ನು ವಿವಾಹವಾದರು. ಈವಿವಾಹದ ನಂತರ ಈ ದಂಪತಿಗಳಿಗೆ ಸೋಮ (ಚಂದ್ರ)ನು ಜನಿಸಿದನು. ಚಂದ್ರನು ದಕ್ಷನ 24 ಪುತ್ರಿಯರನ್ನು ವಿವಾಹವಾದನು. ಚಂದ್ರನ 24 ಹೆಂಡತಿರಯಲ್ಲಿ ಒಬ್ಬಳಾದ ನೀಲಾಮಣಿ ಎನ್ನುವವಳಿಗೆ ಸುಶೀಲಾ ಎನ್ನುವ ಹೆಣ್ಣುಮಗು ಜನಿಸಿತು. ಆ ಸುಶೀಲಾ ಬೆಳೆದು ದೊಡ್ಡವಳಾದ ನಂತರ ತಾನು ಇಚ್ಛಿಸುವ ಗುಣಗಳಿರುವ ವರನನ್ನು ಪಡೆಯಲು ಹಿಮಾಲಯದ ತಪ್ಪಲಿನಲ್ಲಿ ಇರುವ ಬದರಿಕಾಶ್ರಮಕ್ಕೆ ತೆರಳಿ ಹಲವಾರು ವರ್ಷಗಳ ಕಾಲ ಬ್ರಹ್ಮನ ತಪ್ಪಸ್ಸು ಮಾಡಿ ಬ್ರಹ್ಮನಿಂದ ವರವನ್ನು ಪಡೆದುಕೊಳ್ಳುತ್ತಾಳೆ. ಮತ್ತು ಬೃಂದಾಕಾರನ್ಯ ದಲ್ಲಿ ಸುಶೀಲಾಕುಶಿಕ ಋಷಿಯ ಮಗನಾದ ಸಮನಸ್ಕಾ ಮುನಿಯನ್ನು ವಿವಾಹವಾಗಿ ಮುಕ್ತ ರಿಷಿ ಎನ್ನುವ ಗಂಡುಮಗುವಿಗೆ ಜನ್ಮ ನೀಡುತ್ತಾಳೆ. (ಬಹಳ ವರ್ಷಗಳ ಹಿಂದೆ ದೇವತೆಗಳು ಮತ್ತು ದಾನವರು ಸೇರಿಕೊಂಡು ಕ್ಷೀರಸಾಗರ ಮಂಥನ ಮಾಡುವಾಗ ಅಮೃತವೂ ದೇವತೆಗಳ ಪಾಲಾಯಿತು. ಇದರಿಂದ ದಾನವರು ದೇವತೆಗಳ ನಡುವೆ ವೈರತ್ವ ಬೆಳೆಯುತ್ತಾ ಹೋಯಿತು) ಇದರಿಂದ ದಾನವರ ಗುರುಗಳಾದ ಶುಕ್ರಾಚಾರ್ಯರು ತ್ವಾಶಾ ಎನ್ನುವ ರಾಕ್ಷಸನನ್ನು ಸೃಷ್ಟಿಸಿದರು. ತ್ವಾಶಾನು ಅವಿಚರಕ ಹೋಮದಿಂದ ಜಾನು ಮತ್ತು ಸುಮಂಡಲ ಎನ್ನುವ ರಾಕ್ಷಸರನ್ನು ಸೃಷ್ಟಿಸಿದನು. ಜಾನು ಮತ್ತು ಸುಮಂಡಲರು ಕಾಂಚಾನಾಗ್ರವ ಎನ್ನುವ ಪರ್ವತದ ತುದಿಯಲ್ಲಿ ನಿಂತು ಬ್ರಹ್ಮನ ತಪ್ಪಾಸನ್ನು ಮಾಡಿ ದೇವ,ದಾನವ,ಯಕ್ಷ,ಕಿನ್ನರ,ಕಿಂಪುರುಷ,ರಿಂದ ಸಾವು ಬರಬಾರದೆಂದು ವರವನ್ನು ಪಡೆದುಕೊಂಡು ದೇವತೆಗಳನ್ನು ಹಿಂಸಿಸತೊಡಗಿದರು. ತದನಂತರ ತಮ್ಮ ಹೆಂಡತಿಯಾದ ಶೋಭಿ ತಂಗಿಯ ಬಳಿಗೆ ಬಂದು ತಮ್ಮ ಶಕ್ತಿಯನ್ನು ಪ್ರದರ್ಶಿಸಿ ಕೆಲವು ಸಮಯದ ಬಳಿಕ ಋಷಿಮುನಿಗಳನ್ನು ಹಿಂಸಿಸತೊಡಗಿದರು. ಇದರಿಂದ ಮೂರುಲೋಕದಲ್ಲಿ ದಾನವರು ಅಧಿಪತ್ಯವನ್ನು ಸ್ಥಾಪಿಸಿದರು. ಇದರಿಂದ ಋಷಿ ಮುನಿಗಳು ಮತ್ತು ದೇವತೆಗಳಾದಿಯಾಗಿ ಈಶ್ವರನ ಬಳಿಗೆ ಬಂದು ಪ್ರಭು ಜನು ಮತ್ತು ಮಂಡಲರಿಂದ ನಮ್ಮನು ರಕ್ಷಿಸುವವರು ಯಾರೆಂದು ಕೇಳಿದರು. ಆಗ ಈಶ್ವರನು ಸಮನಾಸ್ಕ ಮುನಿಗಳ ಮಗನಾದ ಮುಕ್ತರಿಷಿ ಯನ್ನು ಆಹ್ವಾನಿಸಿದರು. ಮುಕ್ತರಿಷಿ ಗಳೇ ನಿಮ್ಮಿಂದ ಜನು ಮತ್ತು ಮಂಡಲ ರೆಂಬ ರಾಕ್ಷಸರ ವಧೆಮಾಡಿ ಭೂಲೋಕದಲ್ಲಿ ಶಾಂತಿಯನ್ನು ಸ್ಥಾಪಿಸಬೇಕೆಂದು ಹೇಳಿದರು. ಆಗ ಮುಕ್ತರಿಷಿಯು ಎಲ್ಲಾ ದೇವತೆಗಳಿಂದ ಶಸ್ತಾತ್ರಗಳನ್ನು ಪಡೆದುಕೊಂಡು ವಿಶ್ವಾಮಿತ್ರರ ಜೊತೆಗೆ ಭೂಲೋಕಕ್ಕೆ ಬಂದು ಪೌಂಡರಿಕಾ ಯಗ್ನವನ್ನು ಮಾಡಿ ಪಾರ್ವತಿ ದೇವಿಯನ್ನು ಆಹ್ವಾನಿಸಿದರು ಆದರೆ ದೇವಿಯು ಪ್ರತ್ಯಕ್ಷ ವಾಗಾದ ಕಾರಣ ತಮ್ಮ ಶಿರವನ್ನು ಅಗ್ನಿಗೆ ಆಹುತಿ ಕೊಡಲು ಹೋದಾಗ ದೇವಿಯು ಪ್ರತ್ಯಕ್ಷವಾಗಿ ಮುಕ್ತರಿಷಿಯನ್ನು ತಡೆದು. ವರವನ್ನು ಮತ್ತು ಖಡ್ಗವನ್ನು ನೀಡಿದಳು. ನಂತರ ಮುಕ್ತರಿಷಿ ಯು ಜಾನು ಮತ್ತು ಮಂಡಲರ ಮೇಲೆ ಯುದ್ಧಕ್ಕೆ ಹೋದರು. ರಾತ್ರಿಯಲ್ಲಿ ರಾಕ್ಷಸ ರ ಶಕ್ತಿಯು ಪ್ರಭಲವಾದರಿಂದ ಅವರನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ. ಅತ್ರಿ ಋಷಿಯು ಮೂರು ಸಾವಿರ ವರ್ಷಗಳ ಕಾಲ ಪಾರ್ವತಿ ದೇವಿಯ ತಪ್ಪಸ್ಸು ಮಾಡಿದರು. ನಂತರ ದೇವಿಯು ಪ್ರತ್ಯಕ್ಷವಾಗಿ ಚಂದ್ರನ ಅಂಶದಿಂದ ಒಬ್ಬ ಮನುಷ್ಯನನ್ನು ಸೃಷಿಸಿದಳು. ಆ ಮನುಷ್ಯ ನು ಶಶಿಯ (ಚಂದ್ರ) ಬಿಂದುವಿನಿಂದ ಜನಿಸಿದ್ದರಿಂದ ಅವನು ಶಶಿಬಿಂದು ಎನ್ನುವ ಹೆಸರು ಬಂದಿತು. ನಂತರ ಶಶಿಬಿಂದು, ಮೂಕ್ತರಿಷಿಯ ಕೆಲವು ಯೋಧರಾದ ಬಲಸುದನ,ಮಹಾಬಲ,ಭದ್ರಕರಣ, ಮತ್ತು ಅವರ ಸೈನ್ಯದೊಂದಿಗೆ ಅಮರಕಾಂತಪುರದ ಜನು ಮತ್ತು ಮಂಡಲರ ಮೇಲೆ ಯುದ್ಧಕ್ಕೆ ಹೊರಟರು. ಈ ಯುದ್ಧದಲ್ಲಿ ಮುಕ್ತರಿಷಿ ಮತ್ತು ಶಶಿಬಿಂದುವು ಜನು ಮತ್ತು ಸುಮಂಡಲರ ಸೈನ್ಯವನ್ನು ದ್ವಂಸಮಾಡುತ್ತ ಮುಂದೆಸಾಗಿ ಅಂತಿಮವಾಗಿ ಜನು ಮತ್ತು ಸುಮಂಡಲರನ್ನು ಪಾಸ್ವಪತಾಸ್ತದಿಂದ ವಧೆ ಮಾಡಿದರು. ಯುದ್ಧದ ಬಳಿಕ ಶಶಿಬಿಂದುವೂ ಮುಕ್ತರಿಶಿಯನ್ನ ಅಮರಕಾಂತಪುರದ ರಾಜನನ್ನಾಗಿ ನೀಮಿಸಿ. ಪರಾಶರ ಮುನಿಯ ಮಗಳಾದ ಕಂಡಲಿ ಯನ್ನೂ ಮುಕ್ತರಿಶಿ ವಿವಾಹವಾದರು. ಕೆಲವು ವರ್ಷಗಳ ನಂತರ ಈ ದಂಪತಿಗಳಿಗೆ ವಿಷ್ಣುವಿನ ಕೃಪೆಯಿಂದ ರುಕ್ಮವತ,ರುಕ್ಮವರ್ಣ, ರುಕ್ಮಾಭೂಷಣ, ರುಕ್ಮಕಾಂತ, ಜೋತಿಷ್ಮಂತ್,ಹಂಸ್ತಕ್, ಮಂದಪಾಲ, ಮತ್ತು ಸುಧೀಕ್ಷ್ಣ, ಎನ್ನುವ 8 ಮಕ್ಕಳು ಜನಿಸಿದರು. ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಕುಷಿಕ ಮುನಿಯ 8 ಮಕ್ಕಳ ಜೊತೆಗೆ ವಿವಾಹ ಮಾಡಿದರು. ಕೆಲವು ವರ್ಷಗಳ ಕಾಲ ರಾಜ್ಯವಾಳಿದ ಮುಕ್ತರಾಜರು ತನ್ನ ಪತ್ನಿಯಾದ ಕಂಡಲಿ ಯ ಜೊತೆಗೆ ರಾಜ್ಯವನ್ನು ತ್ಯಜಿಸಿ ಕಾಡಿಗೆ ಹೊರಟರು ಅಲ್ಲಿಯೇ ತಮ್ಮ ದೇಹತ್ಯಾಗ ಮಾಡಿದರು. ಕೆಲವು ವರ್ಷಗಳ ನಂತರ ಮುಕ್ತರಾಜನ ಮಕ್ಕಳು ಕಾಡಿಗೆ ವಾಯುವಿಹಾರಕ್ಕೆ ಬಂದಾಗ ಅಲ್ಲಿ ತಮ್ಮ ತಾಯಿಯ ಮೃತ ದೇಹವನ್ನ ಕಂಡು ಅವರ ದೇಹಕ್ಕೆ ಅಗ್ನಿಸ್ಪರ್ಶ ಮಾಡಿ. ನದಿಯಲ್ಲಿ ಸ್ನಾನಕ್ಕೆಂದು ಹೋದಾಗ ಅಲ್ಲಿ ಹುತ್ತವೊಂದನ್ನು ಕಂಡರು. ಆ ಹುತ್ತಕೆ ಎರಡು ರಂದ್ರಗಳಿರುವುದನ್ನು ಕಂಡು ಆ ರಂದ್ರಗಳಿರುವ ಸ್ಥಳಕ್ಕೆ ಕಡ್ಡಿಯಿಂದ ತಿವಿದರು. ಅದರ ಒಳಗೆ ಕುಳಿತಿದ್ದ ರೂಮಾರ್ಷ ಮುನಿಗಳು ಶಾಪವನ್ನು ಕೊಟ್ಟರು. ತದನಂತರ ಅವರು ಪರಿಪರಿಯಾಗಿ ಮುನಿಗಳನ್ನು ಬೇಡಿಕೊಂಡಿದರಿಂದ ಅವರು ಶಾಪವನ್ನು ಹಿಂಪಡೆದರು. ಪುನಃ ಅವರು ತಮ್ಮ ನಗರಗಳಿಗೆ ಹಿಂತಿರುಗಿದರು. ಕೆಲವು ವರ್ಷಗಳ ನಂತರ ಜನುಮಂದಳನ ಪತ್ನಿಯಾದ ಶೋಭಿತಂಗಿಯು ಮಹಿಷ್ಮತಿ ನಗರವನ್ನು ಪ್ರವೇಶಿಸಿ ಅವಳು ತನ್ನ ಪತಿ ಜನುಮಂಡಲ ನ ಸಾವಿಗೆ ಕಾರಣರಾದ ಮುಕ್ತರಾಜ ಮತ್ತು ಶಶುಬಿಂದುವಿನ ವಂಶದವರಾದ ನೀವು ನಿಮ್ಮ ಎಲ್ಲಾ ರಾಜ್ಯ,ಧನ,ಸಂಪತ್ತು,ಗಳನ್ನು ಕಳೆದುಕೊಳ್ಳು ವಂತಾಗಲಿ ಎಂದು ಶಪಿಸಿದಳು. ಆಗಿನಿಂದ ಇಂದಿನವರೆಗೂ ಮೂಕ್ತರಾಜ ಮತ್ತು ಶಶೀಬಿಂದು ವಿನ ವಂಶಸ್ಥರು ಚಿತ್ರಕಾರರು, ಕಟ್ಟಿಗೆಕೆಲಸ, ಬಣ್ಣಗಾರರು, ಮತ್ತು ಕೆಲವು ಕುಶಲ ಕರ್ಮಿಗಳು ಆಗಿ ಮಾರ್ಪಟ್ಟು ಶ್ರೀ ನಿಮಿಷಾಂಬದೇವಿಯನ್ನು ಆರಾಧಿಸುತ್ತಿದಾರೆ ಎಂದು ವ್ಯಾಸ ಮಹರ್ಷಿಗಳು ತಮ್ಮ ಕುಲದ ಬಗ್ಗೆ ಪಾಂಡವರು ಪಗಡೆ ಆಟದಲ್ಲಿ ಸೋತು ವನವಾಸದಲ್ಲಿದ್ದಾಗ ವ್ಯಾಸಮಹರ್ಷಿ ಗಳು ತಮ್ಮ ಕುಲವಾದ ಸೋಮವಂಶಿ ಆರ್ಯ ಕ್ಷತ್ರಿಯ ಕುಲದ ಮೂಲದ ಬಗ್ಗೆ ಯುಧಿಷ್ಠಿರನಿಗೆ ನಿರೂಪಿಸಿದರು. ಈ ಪ್ರಸ್ತುತ ಕಲಿಯುಗದಲ್ಲಿ ನಿಮಿಷಾಂಬದೇವಿಯು ಮಧ್ಯಪ್ರದೇಶದ ಅಮಾರಕಂತಕ್ ನಲ್ಲಿ ನರ್ಮದದೇವಿ ಎಂಬ ಹೆಸರಿನಿಂದ ಪೂಜಿಸಲ್ಪಡುತ್ತಾಳೆ.ಮತ್ತು ಕರ್ನಾಟಕದ ಮೈಸೂರಿನ ಹತ್ತಿರವಿರುವ ಗಂಜಾಂ ಎಂಬಲ್ಲಿ ಶ್ರೀ ನಿಮಿಷಾಂಬ ದೇವಿಯ ಹೆಸರಿನಲ್ಲಿ ಪೂಜಿಸಲಾಗುತ್ತದೆ. ಲೇಖಕರು* ಜೆ.ಎಂ. ಗುರುಕಾರ್ತಿಕ್ . ಕರ್ನಾಟಕ ರಾಜ್ಯ ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲೂಕು ವಾಸಿಯಾಗಿದ್ದರೆ . ********* ಜೈ ನಿಮಿಷಾಂಬ ಜೈ ಮುಕ್ತೇಶ್ವರ್ ************* ್ನ
[[ವರ್ಗ:ಬೌದ್ಧ ಧರ್ಮ]]
[[ವರ್ಗ:ಭಾರತೀಯ ದಾರ್ಶನಿಕರು]]
|