ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಗ್ರಾಮೀಣ ಭಾರತಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡಲು ವಿನ್ಯಾಸಗೊಳಿಸಲಾದ ಭಾರತ ಸರ್ಕಾರದ ಯೋಜನೆ
Content deleted Content added
ಹೊಸ ಪುಟ: ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾಗಿರುವ ಈ ಯೋಜನೆಯ ಉದ್... |
( ಯಾವುದೇ ವ್ಯತ್ಯಾಸವಿಲ್ಲ )
|
೨೩:೩೦, ೩೧ ಜುಲೈ ೨೦೨೦ ನಂತೆ ಪರಿಷ್ಕರಣೆ
ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾಗಿರುವ ಈ ಯೋಜನೆಯ ಉದ್ದೇಶ ಪ್ರತೀ ಗ್ರಾಮಕ್ಕೂ ತಡೆಯಿಲ್ಲದೆ ವಿದ್ಯುತ್ ಒದಗಿಸುವುದು[೧]. ಗ್ರಾಮೀಣ ವಿದ್ಯುದೀಕರಣಕ್ಕಾಗಿಯೇ ಭಾರತ ಸರ್ಕಾರ ಸುಮಾರು ೭೫೬ ಬಿಲಿಯನ್ ರೂಪಾಯಿಗಳನ್ನು ಮೀಸಲಿರಿಸಿ ಯೋಜನೆಯ ಪ್ರಗತಿಗೆ ಮುಂದಾಗಿದೆ. ಈ ಹಿಂದೆ ಇದ್ದ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯ ಹೊಸ ಅವತರಣಿಕೆಯೇ ಈ ಯೋಜನೆಯಾಗಿದೆ[೨].
ಯೋಜನೆ
ಈ ಯೋಜನೆಯ ಮೂಲಭೂತ ಉದ್ದೇಶಗಳೆಂದರೆ,
- ಎಲ್ಲ ಗ್ರಾಮಗಳಿಗೂ ವಿದ್ಯುತ್ ಸೌಲಭ್ಯ ಒದಗಿಸುವುದು.
- ಸ್ಥಳೀಯ ಎಲೆಕ್ಟ್ರಿಕ್ ಗ್ರಿಡ್ ಮಟ್ಟದಲ್ಲಿ ಫೀಡರ್ ಗಳನ್ನೂ ಬೇರ್ಪಡಿಸುವುದು. ಆ ಮೂಲಕ ಇತರೇ ಬಳಕೆದಾರರಿಗೂ ಹಾಗು ರೈತರಿಗೂ ಸರಬರಾಜು ಆಗುವ ವಿದ್ಯುತ್ ಮೇಲೆ ನಿಗಾ ಹಾಗು ರೈತರಿಗೆ ೨೪ ಗಂಟೆ ವಿದ್ಯುತ್ ಸೌಲಭ್ಯ.
- ವಿದ್ಯುತ್ ಸರಬರಾಜು ಮಾಡುವ ಜಾಲ ಹಾಗು ವಿತರಣಾ ಮಂಡಲಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ವಿದ್ಯುತ್ ಸರಬರಾಜಿನಲ್ಲಿ ಗುಣಮಟ್ಟವನ್ನು ಹಾಗು ಸ್ಥಿರತೆಯನ್ನು ಕಾಯ್ದುಕೊಳ್ಳುವುದು.
- ಮಾಪಕಗಳ ಬಳಕೆಯ ಮುಖೇನ ವಿದ್ಯುತ್ ನಷ್ಟವನ್ನು ತಡೆಗಟ್ಟುವುದು.
ಉಪಯೋಗಗಳು
- ಭಾರತದ ಎಲ್ಲ ಗ್ರಾಮಗಳಿಗೂ ವಿದ್ಯುತ್ ಲಭ್ಯವಾಗುವುದು.
- ಕೃಷಿಗೆ ಖರ್ಚಾಗುವ ವಿದ್ಯುತ್ ಮೇಲೆ ನಿಗಾ, ಇದರಿಂದ ಕೃಷಿ ಸಂಬಂಧಿತ ವಿದ್ಯುತ್ ಗೆ ವಿಶೇಷ ಪ್ಯಾಕೇಜ್ ಗಳನ್ನೂ ಘೋಷಿಸುವ ಸಂಧರ್ಭದಲ್ಲಿ ಅನುಕೂಲ.
- ಸುಧಾರಿತ ವಿದ್ಯುತ್ ಸರಬರಾಜು.
- ವಿದ್ಯುತ್ ಪೋಲು ತಡೆಯಲು ಅನುಕೂಲ.