ನಾಗಾಭರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇನ್ನಷ್ಟು ಮಾಹಿತಿ ಸೇರಿಸಿದ್ದು
೮೫ ನೇ ಸಾಲು:
* ಜೀವನ್ಮುಖಿ
 
====ಚಲನಚಿತ್ರಗಳು====
===ಬೆಳ್ಳಿತೆರೆ===
ಬಿಎಸ್ಸಿ ನಂತರ ನಾಗಾಭರಣ ಎಲ್ ಎಲ್ ಬಿ ಪದವಿಗಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯ ಲಾ ಕಾಲೇಜು ಸೇರಿದರು. ವಿದ್ಯಾರ್ಥಿಯಾಗಿದ್ದಾಗಲೇ ಅವರು ಗಿರೀಶ್ ಕಾರ್ನಾಡ ಅವರ ಕಾಡು ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಮತ್ತು ಚೋಮನ ದುಡಿ ಚಿತ್ರಕ್ಕೆ ಬಿ ವಿ ಕಾರಂತ ಅವರಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದರು.[[೧೯೮೦]]ರಲ್ಲಿ [[ಬಂಗಾರದ ಜಿಂಕೆ]] ನಿರ್ದೇಶಿಸುವ ಮೂಲಕ ಪೂರ್ಣಪ್ರಮಾಣದ ನಿರ್ದೇಶನ ಪ್ರಾರಂಭಿಸಿದ ನಾಗಾಭರಣರವರು, ಇದುವರೆಗೆ ಸುಮಾರು ೩೬ ಕನ್ನಡ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರ ನಿರ್ದೇಶನದ ಚಲನಚಿತ್ರಗಳಲ್ಲಿ [[ಆಕಸ್ಮಿಕ]], ಚಿನ್ನಾರಿಮುತ್ತ, [[ಜನುಮದ ಜೋಡಿ]] ಮತ್ತು [[ಚಿಗುರಿದ ಕನಸು]] ಮುಖ್ಯವಾದುವು.ಇವರು ಕನ್ನಡದಲ್ಲಿ ಸರಾಸರಿ ೩೬ ಚಲನಚಿತ್ರಗಳನ್ನು ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಅವರಿಗೆ ಚಿತ್ರ ನಿರ್ದೇಶಿಸುವ ಹಂಬಲವಾಗಿ ಬಹಳ ಕಷ್ಟಪಟ್ಟು ತಮ್ಮ ಮೊದಲ ಚಿತ್ರ
ಗ್ರಹಣ ನಿರ್ದೇಶಿಸಿದರು. ಈ ಚಿತ್ರಕ್ಕೆ ೧೯೭೯ರ ರಾಷ್ಟ್ರೀಯ ಐಕ್ಯತೆಯ ಅತ್ಯುತ್ತಮ ಚಿತ್ರ ಎಂದು ನರ್ಗಿಸ್ ದತ್ ರಾಷ್ಟ್ರಪ್ರಶಸ್ತಿ ಹಾಗೂ ಅತ್ಯುತ್ತಮ ಚಿತ್ರಕತೆ (ನಾಗಾಭರಣ ಮತ್ತು ಟಿ ಎಸ್ ರಂಗಾ) ಪ್ರಶಸ್ತಿಗಳು ದೊರಕಿದವು. ಜೊತೆಗೆ ೧೯೭೮-೭೯ರ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಮೊದಲ ಅತ್ಯುತ್ತಮ ಚಿತ್ರ, ಅತ್ಯುತ್ತಮ ಕಪ್ಪುಬಿಳಿ ಛಾಯಾಗ್ರಹಣ - ಎಸ್ ರಾಮಚಂದ್ರರವರಿಗೆ ನೀಡಲಾಯಿತು. ಅಲ್ಲದೆ ಈ ಚಿತ್ರ ಜರ್ಮನಿಯ ಮ್ಯಾನ್ಹೆಮ್ - ಹೈಡೆಲ್ಬರ್ಗ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಯಿತು.
 
====ಚಲನಚಿತ್ರಗಳು====
ನಾಗಾಭರಣರವರು ನಿರ್ದೇಶನಮಾಡಿದ ಕನ್ನಡ ಚಲನಚಿತ್ರಗಳ ಪಟ್ಟಿ ಇಂತಿದೆ.
{|class="wikitable" border="1"
Line ೨೦೮ ⟶ ೨೦೪:
|ಕಲ್ಲರಳಿ ಹೂವಾಗಿ
|}
 
==ಅಲಂಕರಿಸಿದ ಸ್ಥಾನಗಳು==
* ತೀರ್ಪುಗಾರ ಸಮಿತಿ ಅಧ್ಯಕ್ಷ, ಬ್ರಿಕ್ಸ್ ಅಂತರ ರಾಷ್ಟ್ರೀಯ ಚಿತ್ರೋತ್ಸವ, ೨೦೧೬
* ನಾಲ್ಕು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಿತಿಯ ಸದಸ್ಯ.
* ಮೂರು ಬಾರಿ ಕರ್ನಾಟಕ ಫಿಲಂ ಚೇಂಬರ್ ಆಫ್ ಕಾಮರ್ಸ್ ನ ಕಾರ್ಯಕಾರಿ ಸಮಿತಿ ಸದಸ್ಯ .
* ಅಧ್ಯಕ್ಷರು, ಚಲನಚಿತ್ರಗಳ ಸಬ್ಸಿಡಿ ಸಮಿತಿ, ಕರ್ನಾಟಕ ಸರ್ಕಾರ
* ಅಧ್ಯಕ್ಷರು, ಕರ್ನಾಟಕ ಚಿತ್ರ ನಿರ್ದೇಶಕರ ಸಂಘ
* CIFEJ, ಅಂತರ ರಾಷ್ಟ್ರೀಯ ಮಕ್ಕಳು ಮತ್ತು ಯುವಜನತೆಯ ಚಿತ್ರ ಕೇಂದ್ರ, ಕಳೆದ ೧೩ ವರ್ಷಗಳಿಂದ ಬೋರ್ಡ್ ಸದಸ್ಯರು.
* ಪ್ರಿನ್ಸಿಪಾಲ್ ಮತ್ತು ಶಿಕ್ಷಕರು, ಆದರ್ಶ ಫಿಲಂ ಇನ್ಟಿಟ್ಯೂಟ್ , ಬೆಂಗಳೂರು
* ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡಮಿ, ಬೆಂಗಳೂರು
* ಅಧ್ಯಕ್ಷರು, ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ್ಯ , 2012 ರಿಂದ ಇಲ್ಲಿಯವರೆಗೆ
* ಬೋರ್ಡ್ ಮೆಂಬರ್, ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್, ಭಾರತ ಸರ್ಕಾರ.
 
== ಪ್ರಶಸ್ತಿಗಳು ==
Line ೨೨೦ ⟶ ೨೨೮:
* ೧೯೭೯ರಲ್ಲಿ ''ಗ್ರಹಣ'' ಚಿತ್ರಕ್ಕಾಗಿ ಅತ್ಯುತ್ತಮ ಚಿತ್ರಕಥೆ ರಾಷ್ಟ್ರೀಯ ಪ್ರಶಸ್ತಿ.
* ''ಕಾಡು'' ಚಿತ್ರದ ವಸ್ತ್ರಾಲಂಕಾರಕ್ಕಾಗಿ ಅತ್ಯುತ್ತಮ ವಸ್ತ್ರವಿನ್ಯಾಸಕಾರ ರಾಷ್ಟ್ರೀಯ ಪ್ರಶಸ್ತಿ
 
==ಇತರೆ==
* ಶ್ರುತಾಲಯ ಸಂಸ್ಥೆ ಸ್ಥಾಪನೆ - ಚಿತ್ರ ಸಂಬಂಧಿತ ಸಕಲ ಚಟುವಟಿಕೆಗಳ ನಿರ್ವಹಣೆಯ ಸಂಸ್ಥೆ
* ಭರಣ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ (BAPA) ಸ್ಥಾಪನೆ ಮತ್ತು ಮ್ಯಾನೇಜಿಂಗ್ ಟ್ರಸ್ಟಿ
* ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳ ಪ್ರವಾಸೋದ್ಯಮ ಇಲಾಖೆಗಳಿಗೆ ಮೈಸೂರು, ಹಂಪಿ, ಕಿತ್ತೂರು ಮತ್ತು ಶ್ರೀರಂಗಪಟ್ಟಣಗಳಲ್ಲಿ ಧ್ವನಿ ಬೆಳಕು ( Sound and Light) ಕಾರ್ಯಕ್ರಮದ ನಿರ್ದೇಶನ.
* ನಾಗಾಭರಣ ಅವರ ಚಿತ್ರಗಳನ್ನು ಕುರಿತ ಅಧ್ಯಯನಕ್ಕೆ ಎನ್ ಕೆ ಪದ್ಮನಾಭ ಅವರಿಗೆ ಡಾಕ್ಟರೇಟ್ ಪದವಿ ನೀಡಲಾಗಿದೆ.
* ಹಲವಾರು ಸಂದರ್ಭಗಳಲ್ಲಿ ನಾಗಾಭರಣ ಅವರಿಗೆ ಸ್ಮರಣ ಸಂಚಿಕೆಯ ಗೌರವ ಅರ್ಪಿಸಲಾಗಿದೆ.
* ಹಲವಾರು ಸಂದರ್ಭಗಳಲ್ಲಿ ನಾಗಾಭರಣ ಚಿತ್ರೋತ್ಸವ ಮತ್ತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ.
 
 
== ಉಲ್ಲೇಖಗಳು‌ ==
"https://kn.wikipedia.org/wiki/ನಾಗಾಭರಣ" ಇಂದ ಪಡೆಯಲ್ಪಟ್ಟಿದೆ