ವಸಿಷ್ಠ - ಬ್ರಹ್ಮರ್ಷಿ, ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬ. ಕಶ್ಯಪನಿಗೆ ಅದಿತಿಯಲ್ಲಿ ಮಿತ್ರಾ ವರುಣರೆಂಬ ಅವಳಿ ಮಕ್ಕಳು ಹುಟ್ಟಿದರು. ಇವರಿಬ್ಬರು ಒಮ್ಮೆ ಮಾಡಿದ ಯಜ್ಞಕ್ಕೆ ದೇವತೆಗಳು, ಗಂಧರ್ವರು, ಪಿತೃಗಳಲ್ಲದೆ, ಅಪ್ಸರೆಯರಲ್ಲೆಲ್ಲ ಹೆಚ್ಚು ಸುಂದರಿಯಾದ ಊರ್ವಶಿಯೂ ಬಂದಳು. ದೀಕ್ಷಾಬದ್ಧರಾಗಿದ್ದ ಇವರಿಬ್ಬರ ದೃಷ್ಟಿ ಊರ್ವಶಿಯ ಮೇಲೆ ಬಿತ್ತು. ಇಬ್ಬರೂ ವಿಕಾರ ವಶರಾದರು. ಅಖಂಡನಿಷ್ಠೆಯಿಂದ ಪಾಲಿಸಿದ್ದ ಇವರ ಬ್ರಹ್ಮಚರ್ಯ ಸಡಿಲವಾಯಿತು. ಇಬ್ಬರಿಗೂ ವೀರ್ಯಸ್ಖಲನವಾಗಿ ಅದನ್ನು ಒಂದು ಕುಂಭದಲ್ಲಿಟ್ಟರು. ಅದರಲ್ಲಿ ಇಬ್ಬರು ಮಕ್ಕಳು ಜನಿಸಿದರು. ಮೊದಲನೆಯ ಮಗು ಅಗಸ್ತ್ಯ. ಆಮೇಲೆ ಕುಂಭದಲ್ಲಿದ್ದ ನೀರನ್ನು ಸರೋವರದಲ್ಲಿ ಚೆಲ್ಲಿದಾಗ ಅದರಲ್ಲಿದ್ದ ಎರಡನೆಯ ಮಗು ಸರೋವರದಲ್ಲಿ ತೇಲುತ್ತ ಬಂದು ಒಂದು ಕಮಲ ದಳದ ಮೇಲೆ ಕುಳಿತಿತು. ಇದು ವಿಶಿಷ್ಟರೀತಿಯಲ್ಲಿ ಜನಿಸಿದ್ದರಿಂದ ಇದಕ್ಕೆ ವಸಿಷ್ಠನೆಂದು ಹೆಸರಾಯಿತು. ಅಗಸ್ತ್ಯ ಹುಟ್ಟಿದ ಕೂಡಲೆ ಮಿತ್ರನಿಗೆ ನಾನು ನಿನ್ನ ವೀರ್ಯದಿಂದ ಹುಟ್ಟಿದವನಲ್ಲ ಎಂದುದರಿಂದ ವಸಿಷ್ಠ ಮಿತ್ರನ ಮಗನೆಂದಾಯಿತು.

ವ್ಯುತ್ಪತ್ತಿ ಬದಲಾಯಿಸಿ

ವಶಿಷ್ಠ‍ವನ್ನು ವಸಿಷ್ಠ ಎಂದೂ ಉಚ್ಚರಿಸಲಾಗುತ್ತದೆ ಮತ್ತು ಸಂಸ್ಕೃತದಲ್ಲಿ "ಅತ್ಯುತ್ತಮ", "ಅತ್ಯುತ್ತಮ" ಅಥವಾ "ಶ್ರೀಮಂತ". ಮೊನಿಯರ್-ವಿಲಿಯಮ್ಸ್ ಪ್ರಕಾರ, ಇದನ್ನು ಕೆಲವೊಮ್ಮೆ ಪರ್ಯಾಯವಾಗಿ ವಶಿಷ್ಠ ಅಥವಾ ವಸಿಷ್ಠ ಎಂದು ಉಚ್ಚರಿಸಲಾಗುತ್ತದೆ.[೧]

ವಿವರ ಬದಲಾಯಿಸಿ

ಅರುಂಧತಿ ಈತನ ಪತ್ನಿ. ಇವರಿಬ್ಬರ ಮಗ ಶಕ್ತಿ. ಶಕ್ತಿಯ ಪತ್ನಿ ಅದೃಶ್ಯಂತಿ. ಇವರ ಮಗ ಪರಾಶರ. ಪರಾಶರನಿಗೆ ಮತ್ಸ್ಯಗಂಧಿಯಲ್ಲಿ ಜನಿಸಿದವ ವೇದವ್ಯಾಸ. ವಸಿಷ್ಠ ಯಜ್ಞದಲ್ಲಿ ತೊಡಗಿದ್ದಾಗ, ಜರೂಥನೆಂಬ ರಾಕ್ಷಸ ಅದನ್ನು ಕೆಡಿಸಲು ಯತ್ನಿಸಿದಾಗ ವಸಿಷ್ಠ ಅಗ್ನಿಯ ಸಹಾಯದಿಂದ ಅವನನ್ನು ಕೊಲ್ಲಿಸಿದ. ಕಾರ್ತವೀರ್ಯಾರ್ಜುನ ವಸಿಷ್ಠನ ಆಶ್ರಮ ದಹಿಸಿದ್ದರಿಂದ ವಸಿಷ್ಠ ಅವನಿಗೆ ಶಾಪ ಕೊಟ್ಟ. ಋಷಿಗಳು ಭಿನ್ನಜಾತಿ ಸ್ತ್ರೀಯರಲ್ಲಿ ಜನಿಸಿದರೂ ಅವರ ತಪಸ್ಸು ಮತ್ತು ವಿದ್ಯೆಗಳೇ ಅವರ ಮಹಿಮೆಗೆ ಕಾರಣ ಎಂದು ವಸಿಷ್ಠ ಕರಾಳಜನಕನೊಂದಿಗೆ ನಡೆದ ಸಂವಾದದಲ್ಲಿ ವಾದಿಸಿದ.

ವಸಿಷ್ಠ ವಿಶ್ವಾಮಿತ್ರರ ದ್ವೇಷ ಬದಲಾಯಿಸಿ

ವಸಿಷ್ಠ ತನ್ನ ತೇಜಸ್ಸಿನಿಂದ ರಾಕ್ಷಸರನ್ನು ನಿಗ್ರಹಿಸಿ ಇಂದ್ರನನ್ನು ಕಾಪಾಡಿದ. ಗೋಮಹಿಮೆಯ ವಿಷಯವಾಗಿ ಕಲ್ಮಾಷಪಾದನ ಸಂಗಡ ವಸಿಷ್ಠ ಸಂವಾದ ನಡೆಸಿದ. ವಸಿಷ್ಠನ ಬಳಿ ಇದ್ದ ನಂದಿನಿಧೇನುವನ್ನು ಪಡೆಯಲಾರದೆ ವಿಶ್ವಾಮಿತ್ರ ವಸಿಷ್ಠನನ್ನು ದ್ವೇಷಿಸುವುದರೊಂದಿಗೆ ಬ್ರಹ್ಮರ್ಷಿಯಾಗಲು ಘೋರತಪಸ್ಸನ್ನು ಮಾಡಿ ವಸಿಷ್ಠನ ಅನುಗ್ರಹದಿಂದಲೇ ಬ್ರಹ್ಮರ್ಷಿಯಾದ (ಮಹಾಭಾರತ). ನೃಗ ಮಹಾರಾಜನೂ ವಸಿಷ್ಠನೂ ಒಬ್ಬರಿಗೊಬ್ಬರು ಶಾಪಕೊಟ್ಟರೆಂದು ರಾಮಾಯಣದಲ್ಲಿದೆ. ಆಪವ-ನಾಮಕ ಪ್ರಜಾಪತಿಗಳಾದ ಬ್ರಹ್ಮದೇವ ಒಬ್ಬ ಸುಂದರ ಸ್ತ್ರೀಯನ್ನು ಸೃಷ್ಟಿ ಮಾಡಿದ. ಈಕೆ ಮಹಾತಪಸ್ವಿನಿ. ವಸಿಷ್ಠರು ಈಕೆಯನ್ನು ಪತ್ನಿಯಾಗಿ ಸ್ವೀಕರಿಸಿದರು. ಇವರಲ್ಲಿ ಇವಳಿಗೆ ವೀರನೆಂಬ ಮಗ ಹುಟ್ಟಿದ(ಹರಿವಂಶ). ಆತ ಕರ್ದಮ ಮುನಿಯ ಏಳನೆಯ ಮಗಳಾದ ಊರ್ಜಾದೇವಿಯನ್ನು ಮದುವೆಯಾಗಿ ಚಿತ್ರಕೇತು, ಸುರೋಚಿ, ವಿರಜ, ಮಿತ್ರ, ಉಲ್ಬಣ, ವಸುಭೃಧ್ಯಾನ, ದ್ಯುಮಂತರೆಂಬ ಏಳು ಮಕ್ಕಳನ್ನು ಪಡೆದ(ಭಾಗವತ). ಹರಿಶ್ಚಂದ್ರನ ಸತ್ಯಸಂಧತೆಯ ಬಗ್ಗೆ ವಿಶ್ವಾಮಿತ್ರನೊಡನೆ ವಾಗ್ವಾದ ನಡೆಸಿ ಕಡೆಗೆ ವಸಿಷ್ಠನೇ ಗೆದ್ದನೆಂದು ದೇವೀ ಭಾಗವತದಿಂದ ತಿಳಿದುಬರುತ್ತದೆ.[ [೨] [೩]

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ವಸಿಷ್ಠ ದೇವಾಲಯಗಳು ಬದಲಾಯಿಸಿ

ಗುವಾಹಟಿ, ಭಾರತ ನಲ್ಲಿ ವಶಿಷ್ಠರಿಗೆ ಸಮರ್ಪಿತವಾದ ಆಶ್ರಮವಿದೆ. ಈ ಆಶ್ರಮವು ಗುವಾಹಟಿ ನಗರದ ದಕ್ಷಿಣಕ್ಕೆ ಅಸ್ಸಾಂ-ಮೇಘಾಲಯ ಗಡಿಗೆ ಸಮೀಪದಲ್ಲಿದೆ ಮತ್ತು ಇದು ಗುವಾಹಟಿಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ವಶಿಷ್ಠರ ದೇವಾಲಯವು ಹಿಮಾಚಲ ಪ್ರದೇಶದ ವಸಿಷ್ಠ ಗ್ರಾಮದಲ್ಲಿದೆ. ವಶಿಷ್ಠ ಗುಹೆ, ಶಿವಪುರಿಯಲ್ಲಿರುವ ಗಂಗಾ ದಡದಲ್ಲಿರುವ ಒಂದು ಗುಹೆ, ಋಷಿಕೇಶನಿಂದ ೧೮ ಕಿಮೀ ದೂರದಲ್ಲಿ ಸ್ಥಳೀಯವಾಗಿ ಅವನ ಚಳಿಗಾಲದ ವಾಸಸ್ಥಾನವೆಂದು ನಂಬಲಾಗಿದೆ ಮತ್ತು ಶಿವನ ದೇವಾಲಯವನ್ನು ಹೊಂದಿದೆ, ಅರುಂಧತಿ ಗುಹೆ ಕೂಡ ಹತ್ತಿರದಲ್ಲಿದೆ.

ಕೇರಳದ ತ್ರಿಶೂರ್ ಜಿಲ್ಲೆಯ ಅರಟ್ಟುಪುಳ ಗ್ರಾಮದ ಅರಟ್ಟುಪುಳ ಶ್ರೀ ಧರ್ಮಶಾಸ್ತ ಎಂದು ಕರೆಯಲ್ಪಡುವ ಅರಟ್ಟುಪುಳ ದೇವಸ್ಥಾನದಲ್ಲಿ ಗುರು ವಶಿಷ್ಠರು ಸಹ ಪ್ರಾಥಮಿಕ ದೇವತೆಯಾಗಿದ್ದಾರೆ. ಪ್ರಸಿದ್ಧ ಅರಟ್ಟುಪುಳ ಪೂರಂ ವಾರ್ಷಿಕ ಆಚರಣೆಯಾಗಿದ್ದು, ಶ್ರೀರಾಮನು ತ್ರಿಪ್ರಯಾರ್ ದೇವಸ್ಥಾನದಿಂದ ಅರಟ್ಟುಪುಳ ದೇವಸ್ಥಾನದಲ್ಲಿ ತನ್ನ ಗುರುವಿಗೆ ನಮನ ಸಲ್ಲಿಸಲು ಬರುತ್ತಾನೆ.

ಸಹ ನೋಡಿ ಬದಲಾಯಿಸಿ


ಉಲ್ಲೇಖ ಬದಲಾಯಿಸಿ

  1. https://www.sanskrit-lexicon.uni-koeln.de/scans/MWScan/2014/web/index.php
  2. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಸಿಷ್ಠ
  3. ರಾಮಾಯಣ
"https://kn.wikipedia.org/w/index.php?title=ವಸಿಷ್ಠ&oldid=1135114" ಇಂದ ಪಡೆಯಲ್ಪಟ್ಟಿದೆ