ನಾಗರಿಕ ಅವಿಧೇಯತೆ ಕೆಲವು ಕಾನೂನುಗಳು, ಬೇಡಿಕೆಗಳನ್ನು ಮತ್ತು ಸರ್ಕಾರದ ಅಥವಾ ಆಕ್ರಮಿಸಿಕೊಂಡಿರುವ ಅಂತಾರಾಷ್ಟ್ರೀಯ ಶಕ್ತಿಯ ಆದೇಶಗಳನ್ನು ಪಾಲಿಸಬಾರದು ಎಂಬ ಸಕ್ರಿಯ, ಸಾರಿದ ನಿರಾಕರಣೆ ಆಗಿದೆ. ನಾಗರಿಕ ಅಸಹಕಾರ ಸಾಮಾನ್ಯವಾಗಿ, ಯಾವಾಗಲೂ ಅಲ್ಲದಿದ್ದರೂ, ಅಹಿಂಸಾತ್ಮಕ ಪ್ರತಿರೋಧ ಎಂದು ವ್ಯಾಖ್ಯಾನಿಸಲಾಗಿದೆ. ಇದು ನಾಗರಿಕ ಪ್ರತಿರೋಧದ ಒಂದು ರೂಪ. ಒಂದು ದೃಷ್ಟಿಕೋನದಲ್ಲಿ (ಭಾರತದಲ್ಲಿ ಅಹಿಂಸೆ ಅಥವಾ ಸತ್ಯಾಗ್ರಹದ ಎಂದು ಕರೆಯಲಾಗುತ್ತದೆ) ಇದು 'ಗೌರವಯುತ ಭಿನ್ನಾಭಿಪ್ರಾಯದ ರೂಪದಲ್ಲಿ ಸಹಾನುಭೂತಿ' ಎಂದು ಹೇಳಬಹುದು.ಇದರ ಬೃಹತ್ ಉದಾಹರನೆ ಆರಂಭದಲ್ಲಿ 1919 ಕ್ರಾಂತಿಯಲ್ಲಿ ಬ್ರಿಟಿಷ್ ಆಕ್ರಮಣದ ವಿರುದ್ಧ ಈಜಿಪ್ಟಿನವರು ಕೈಗೊಂಡದ್ದು. ಭರತದ ಬಹಳಷ್ಟು ಕಡೆ ಬ್ರಿಟೀಶ್ ರಾಜ್ಯಾಧಿಕಾರದಿಂದ ಸ್ವಾತಂತ್ರ ಪದೆಯಲು, ಜೆಕೊಸ್ಲೋವಾಕಿಯಾದ ವೆಲ್ವೆಟ್ ಕ್ರಾಂತಿಯಲ್ಲಿ, ಪೂರ್ವ ಜರ್ಮನಿ ತಮ್ಮ ಕಮ್ಯುನಿಸ್ಟ್ ಸರ್ಕಾರಗಳು ಹೊರಹಾಕಲು ವರ್ಣಭೇದ ನೀತಿಯ ವಿರುದ್ಧ ಹೋರಾಡಲು ದಕ್ಷಿಣ ಆಫ್ರಿಕಾದಲ್ಲಿ, ಅಮೆರಿಕನ್ ಸಿವಿಲ್ ರೈಟ್ಸ್ ಚಳುವಳಿಯಲ್ಲಿ, ಸೋವಿಯತ್ ಯೂನಿಯನ್ ಬಾಲ್ಟಿಕ್ ದೇಶಗಳಿಗೆ ಸ್ವಾತಂತ್ರ್ಯ ತರಲು ಸಿಂಗಿಂಗ್ ಕ್ರಾಂತಿಯಲ್ಲಿ, 2003ರಲ್ಲಿನ ಜಾರ್ಜಿಯಾದ ರೋಸ್ ಕ್ರಾಂತಿಯಲ್ಲಿ ಮತ್ತು 2004 ಉಕ್ರೇನ್-ರಲ್ಲಿನ ಆರೆಂಜ್ ಕ್ರಾಂತಿಯಲ್ಲಿ ಹಾಗು ಇನ್ನಿತರ ಸುಪ್ರಸಿದ್ಧ ಕ್ರಾಂತಿಗಳಲ್ಲಿ ಈ ತಂತ್ರವನ್ನು ಬಳಸಲಾಗಿದೆ.