ಗೋನಾವರದ ರಾಮದಾಸರು



ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನ ' ಜೋಳ ಹೆಡಿಗೆ' ಎಂಬಲ್ಲಿ ಜನಿಸಿದ ರಾಮದಾಸರ ಪೂರ್ವನಾಮ 'ಬಡೇಸಾಬ್' ತಂದೆ ಖಾಜಾ ಸಾಹೇಬ, ತಾಯಿ ಪೀರಮ್ಮ . ಇವರು ಇಸ್ಲಾಂ ಧರ್ಮದಲ್ಲಿನ ಪಿಂಗಾರ ಪಂಗಡಕ್ಕೆ ಸೇರಿದವರು. ಇಸ್ಲಾಂ ಧರ್ಮದಲ್ಲಿಯೇ ಈ ಪಂಗಡವನ್ನು ಕೀಳರಿಮೆಯಿಂದ ಕಾಣಲಾಗುತ್ತಿದ್ದು, ಇದರಿಂದ ಸಾಕಷ್ಟು ಕಷ್ಟ ನೋವುಗಳನ್ನನುಭವಿಸಿದ ಬಡೇಸಾಹೇಬರ ಬದುಕಿನ ದಾರಿಯೇ ಬದಲಾಯಿತು. ಬಡತನದ ದೆಸೆಯಿಂದಾಗಿ ಶಿಕ್ಷಣವನ್ನು ಕಲಿಯಾಲಾಗಿದೆ ಉದರ ಪೋಷಣೆಗಾಗಿ ಅಂಗಡಿ ಕೆಲಸಕ್ಕೆ ಸೇರಿದರು.