ಆರ್ಥರ್ ಎಡ್ವಿನ್ ಕೆನ್ನೆಲ್ಲೆ

ಗಣಿತಜ್ಞ

ಬ್ರಿಟನ್ ಸಂಜಾತ ಮತ್ತು ಅಮೇರಿಕದ ಭೌತವಿಜ್ಞಾನಿ ಆರ್ಥರ್ ಎಡ್ವಿನ್ ಕೆನ್ನೆಲ್ಲೆಯವರು (ಭಾರತವನ್ನು ಬ್ರಿಟಿಷರು ಆಳುತ್ತಿದ್ದ ಕಾಲದಲ್ಲಿ) ೧೮೬೧ರ ಡಿಸೆಂಬರ್ ೧೭ರಂದು ಮುಂಬೈನ ಕೊಲಾಬಾದಲ್ಲಿ ಜನಿಸಿದರು. ಕೆನ್ನೆಲ್ಲೆಯವರು ೧೮೮೭ರಲ್ಲಿ ಅಮೇರಿಕದ ಪ್ರಜೆಯಾದರು.[೧] ನಮ್ಮ ಭೂಮಿಯ ವಾತಾವರಣದ ಮೇಲ್ಪದರದಲ್ಲಿ ವಿದ್ಯುದಾವೇಶದ ಕಣಗಳ ಪದರವೊಂದು ಅಸ್ತಿತ್ವದಲ್ಲಿದೆ, ಅವು ರೇಡಿಯೋ ತರಂಗಗಳನ್ನು ಪ್ರತಿಫಲಿಸಿ ಭೂಮಿಯ ಕಡೆಗೆ ವಾಪಸ್ಸು ಕಳುಹಿಸುತ್ತದೆ ಎಂಬುದಾಗಿ ಕೆನ್ನೆಲ್ಲೆಯವರು ಮತ್ತು ಆಲಿವರ್ ಹೆವಿಸೈಡ್‌ರವರು (೧೮೫೦-೧೯೨೫) ಪ್ರತ್ಯೇಕವಾಗಿ ೧೯೦೨ರಲ್ಲಿ ಪ್ರತಿಪಾದಿಸಿದರು. ಆದ್ದರಿಂದ ಆ ಪದರವನ್ನು ‘ಕೆನ್ನೆಲ್ಲೆ-ಹೆವಿಸೈಡ್ ಪದರ’ ಎಂಬುದಾಗಿ ಕರೆಯಲಾಯಿತು.[೨] ೧೦೦ಕಿ,ಮೀ.ಗಳ ಎತ್ತರದಲ್ಲಿ ಇರುವ ಆ ಪದರದ ಅಸ್ತಿತ್ವವನ್ನು ಕಂಡುಹಿಡಿದ ಎಡ್ವರ್ಡ್ ಆಪಲ್‌ಟನ್‌ರವರು (೧೮೯೨-೧೯೬೫) ೧೯೨೪ರಲ್ಲಿ ದೃಢಪಡಿಸಿದರು. ನಂತರದ ದಿನಗಳಲ್ಲಿ ಆ ಪದರವನ್ನು ‘ಅಯಾನುಗೋಳ’ ಎಂದು ಕರೆಯಲಾಗಿದೆ. ಕೆನ್ನೆಲ್ಲೆಯವರು ೧೯೩೯ರ ಜೂನ್ ೧೮ರಂದು ಮೆಸಾಚುಸೆಟ್ಸ್‌ನ ಬಾಸ್ಟನ್‌ನಲ್ಲಿ ನಿಧನರಾದರು.

ಆರ್ಥರ್ ಎಡ್ವಿನ್ ಕೆನ್ನೆಲ್ಲೆ
ಆರ್ಥರ್ ಎಡ್ವಿನ್ ಕೆನ್ನೆಲ್ಲೆ
Born
ಆರ್ಥರ್ ಎಡ್ವಿನ್ ಕೆನ್ನೆಲ್ಲೆ

೧೮೬೧ ಡಿಸೆಂಬರ್ ೧೭
ಬ್ರಿಟನ್
Nationalityಬ್ರಿಟನ್

ಉಲ್ಲೇಖಗಳು ಬದಲಾಯಿಸಿ