ಈ ಲೇಖನವು ಒಂದು ಹಿಂದೂ ಧರ್ಮಶಾಸ್ತ್ರ ಸಿದ್ಧಾಂತದ ಬಗ್ಗೆ ಸಂಬಂಧಿಸಿದ ವಿಷಯವಾಗಿದೆ: ದೇವರ ಮೂಲ ಅಥವಾ ನಿಖರವಾದ ಪುರಾವೆಯೊಂದಿಗಿನ ಸ್ಪಷ್ಟೀಕರಣ.

ಬೇರೆ ಅರ್ಥಗಳಲ್ಲಿ ಹೇಳುವುದಾದರೆ, ಕೃಷ್ಣ (ಅಸ್ಪಷ್ಟತೆಯ ನಿವಾರಣೆ) ಮತ್ತು ಭಗವಾನ್(ಅಸ್ಪಷ್ಟತಾನಿವಾರಣೆ).


ಹಿಂದೂ ತತ್ತ್ವಶಾಸ್ತ್ರ
ಸರಣಿಯ ಲೇಖನ
aum symbol
ಪಂಥಗಳು
ಸಾಂಖ್ಯ · ನ್ಯಾಯ
ವೈಶೇಷಿಕ · ಯೋಗ
ಪೂರ್ವ ಮೀಮಾಂಸಾ · ವೇದಾಂತ
ವೇದಾಂತ ಪಂಥಗಳು
ಅದ್ವೈತ · ವಿಶಿಷ್ಟಾದ್ವೈತ
ದ್ವೈತ
ಪ್ರಮುಖ ವ್ಯಕ್ತಿಗಳು
ಕಪಿಲ · ಗೋತಮ
ಕಣಾದ · ಪತಂಜಲಿ
ಜೈಮಿನಿ · ವ್ಯಾಸ
ಮಧ್ಯಕಾಲೀನ
ಆದಿಶಂಕರ · ರಾಮಾನುಜ
ಮಧ್ವ · ಮಧುಸೂದನ
ವೇದಾಂತ ದೇಶಿಕ · ಜಯತೀರ್ಥ
ಆಧುನಿಕ
ರಾಮಕೃಷ್ಣ · ರಮಣ
ವಿವೇಕಾನಂದ · ನಾರಾಯಣ ಗುರು
ಅರವಿಂದ ·ಶಿವಾನಂದ

ಸ್ವಯಂ ಭಗವಾನ್ (IAST svayam bhagavān ), "ದಿ ಲಾರ್ಡ್ " ಅಥವಾ ದೇವರೇ ಸ್ವತಃ , ಇದು ಒಂದು ಸಂಸ್ಕೃತ ಧರ್ಮಶಾಸ್ತ್ರ ಸಿದ್ಧಾಂತದ ಪದವಾಗಿದೆ. ಈ ಪದವು ಹೇಳುವಂತೆ, ಹಿಂದೂ ಧರ್ಮದಲ್ಲಿಯೇಭಗವಾನ್ ಎಂದು ಕರೆಯಲಾಗಿದ್ದು, ಅದರರ್ಥ ದೇವರು ಒಬ್ಬನೇ (ಅದ್ವೈತವಾದ) ಎಂಬುದರ ನಿಖರವಾದ ಸ್ಪಷ್ಟೀಕರಣ ವಾದವೇ ಈ ವಿಷಯವಾಗಿದೆ. ಅಂದರೆ ಏಕನಾಥೇಶ್ವರದ ದೇವ, ಅದೇ ಮೊನೋಥೈಯಿಸ್ಟಿಕ್ ಗಾಡ್‌ನ ಒಳಾರ್ಥ.

ಗೌಡಿಯಾ ವೈಷ್ಣವದಲ್ಲಿ ಇದು ಹಲವಾರು ಬಾರಿ ಉಪಯೋಗಿಸಲ್ಪಟ್ಟಿದ್ದು, ಅದರಲ್ಲಿ ಕೃಷ್ಣನೇ ಕೇಂದ್ರೀಕರಿಸಲ್ಪಟ್ಟ ಧರ್ಮಶಾಸ್ತ್ರವು ಕೃಷ್ಣನನ್ನೇ ಕುರಿತು ವಿವರಿಸುತ್ತದೆ. ಸ್ವಯಂ ಭಗವಾನ್ ಎಂಬ ಬಿರುದಾಂಕಿತವನ್ನು ಕೃಷ್ಣನ ಅಧಿಕಾರಯುತ ಕರ್ತವ್ಯವನ್ನು ಮಾತ್ರ ಏಕೈಕವಾಗಿ ವರ್ಣಿಸಲು ಬಳಸಲಾಗಿದೆ,[೧] ಹಾಗೆಯೇ ಭಾಗವತ ಪುರಾಣದಲ್ಲಿ ಬೇರೆ ರೀತಿಯ ಬಳಕೆಗಳು ಅಥವಾ ಅಸಮಂಜಸವಾದ ಶಾಸ್ತ್ರಪದಗಳ ಅಧ್ಯಯನಗಳು ಇವೆ. ಗೌಡಿಯಾ ವೈಷ್ಣವರುಗಳ ಸಂಪ್ರದಾಯ ಶಾಸ್ತ್ರಗಳು, ನಿಂಬರ್ಕ ಸಂಪ್ರದಾಯ ಮತ್ತು ವಲ್ಲಭನ ಅನುಯಾಯಿ ಆಸ್ತಿಕರುಗಳ ಸ್ಪಷ್ಟನೆಯ ಪ್ರಕಾರ ನಾರಾಯಣ[೨] ತಾನಾಗಿಯೇವಿಷ್ಣುವಿನ ಮೂಲ ಮತ್ತು ಎಲ್ಲಾಅವತಾರಗಳ ಮೂಲನೆಂದು ಹೇಳುತ್ತಾರೆ. ಈ ರೀತಿಯಾಗಿ ಆದರಿಂದ, ಅವನನ್ನು ಸ್ವಯಂ ಭಗವಾನ್{/0 }ನೆಂಬುದಾಗಿ ಸಂಭೋಧನೆ ಮಾಡಲಾಗಿದೆ.[೩][೪][೫]

ಈ ಪದವನ್ನು ತುಂಬಾ ವಿರಳವಾಗಿ ಕೃಷ್ಣ ಅಥವಾ ವಿಷ್ಣುವಿನ ಬೇರೆ ಹಲವು ರೂಪಗಳಿಗೆ ಬಳಸಲಾಗುತ್ತದೆ, ಅಥವಾ ವೈಷ್ಣವಾ ಸಿದ್ಧಾಂತದ ಬೇರೆ ವಿಭಾಗಗಳೊಳಗೆ ಕೂಡ ಮತ್ತು ಭಗವತ ಪುರಾಣದಂತಹ ಕೆಲವೊಂದು ಧಾರ್ಮಿಕ ವಿಷಯಗಳ ಗ್ರಂಥ ಪುಸ್ತಕಗಳಲ್ಲಿ ಈ ಸ್ವಯಂ ಭಗವಾನ್ ಪದವು ಅಪರೂಪವಾಗಿ ಬಳಕೆಯಾಗುತ್ತಿದೆ.

ಹಲವಾರು ಭಕ್ತರಿಂದ ಕೃಷ್ಣನುಸ್ವಯಂ ಭಗವಾನ್ ಎಂಬುದಾಗಿ ಗುರುತಿಸಲ್ಪಟ್ಟಿದರೂ ಸಹ,[೬] ಅವನು ದರ್ಶನಾ ಅಂಶಗಳ ಮತ್ತು ಯಥಾದೃಷ್ಟರೂಪಗಳ ಒಂದು ವಿಶಾಲಹೃದಯ ಮನೋಭಾವದ ವಿಂಗಡಣೆಯಿಂದಾಗಿ ಕೃಷ್ಣನು ಅರ್ಥೈಸಲ್ಪಟ್ಟಿದ್ದಾನೆ ಮತ್ತು ಮನಸ್ಸಿನಿಂದ ಗ್ರಹಿಸಲ್ಪಟ್ಟಿದ್ದಾನೆ.[೭]ಕೃಷ್ಣನುಯಾವಾಗ ಸ್ವಯಂ ಭಗವಾನ್ ನೆಂದು ಗುರುತಿಸಲ್ಪಟ್ಟನೋ, ಆಗ ಮಾತ್ರ ಇದು ಒಂದು ನಿಂಬರ್ಕ ಸಂಪ್ರದಾಯದ, ಮತ್ತು ಒಂದು ವಲ್ಲಭ ಸಂಪ್ರದಾಯದ, ಹಾಗೂ ಗೌಡಿಯಾ ವೈಷ್ಣವ ಸಿದ್ಧಾಂತದ, ಅಚಲ ನಂಬಿಕೆಯೆಂದು ಅರ್ಥೈಸಿಕೊಳ್ಳಬೇಕು, ಇಲ್ಲಿ ಬೇರೆ ಎಲ್ಲ ಅವತಾರಗಳ ಮೂಲವೂ ಕೃಷ್ಣನೇ ಎಂದು ಸ್ವೀಕರಿಸಲಾಗಿದೆ. ಮತ್ತು ವಿಷ್ಣು ಒಬ್ಬನೇ ಸ್ವತ: ಮೂಲನೆಂದು ನಂಬಲಾಗಿದೆ. (1.3.28).[೮] "ಭಾಗವತದ ಪ್ರಸಿದ್ಧ ನಿದರ್ಶನಾವಾಕ್ಯಗಳಿಂದ" ಈ ತತ್ವ ನಂಬಿಕೆಯನ್ನು ಪ್ರಮುಖವಾಗಿ ಆಯ್ದುಕೊಳ್ಳಲಾಗಿದೆ[೧].

ಈ ಒಂದು ಧಾರ್ಮಿಕ ತತ್ವದಿಂದಾಗಿ ಹಲವು ರೀತಿಯ ದೃಷ್ಟಿಕೋನಗಳು ಬೇರೆಬೇರೆಯಾಗಿವೆ. ಆಂದರೆನಾರಾಯಣ ಅಥವಾ ವಿಷ್ಣುವಿನ ಒಂದು ಅವತಾರ ವೇ ಕೃಷ್ಣನ ಅವತಾರದ ವಿಚಾರವಾಗಿದೆ. ಈ ಎಲ್ಲ ತಾತ್ವಿಕತೆಯ ನಡುವೆಯೂ, ಅವತಾರಗಳ ಮೂಲವೇ ಎಂದು ವಿಷ್ಣುವಿನ ಬಗ್ಗೆ ಮಾತನಾಡಲು ಸಾಮಾನ್ಯವಾಗಿ ಜನರು ಗಮನ ಕೇಂದ್ರೀಕರಿಸುತ್ತಾರೆ. ಕೃಷ್ಣ ಮತ್ತು ವಾಸುದೇವ, ನಾರಾಯಣ ಎಂದು ಹೆಸರಿಸಲ್ಪಟ್ಟಿರುವ ವಿಷ್ಣುವು ಮಾತ್ರ ವೈಷ್ಣವ ಸಿದ್ಧಾಂತದ ದೇವರ ಹೆಸರುಗಳಲ್ಲಿ ಒಂದಾಗಿದೆ. ಈ ಎಲ್ಲಾ ಹೆಸರುಗಳ ಹಿಂದೆ, ಅಲ್ಲಿನ ವೈಷ್ಣವ ಸಿದ್ಧಾಂತದಲ್ಲಿ ವಿಶಿಷ್ಟ ಲಾಂಛನದ ಸಾರ್ವಭೌಮತ್ವವಿರುವ ಒಂದು ದೈವಿಕ ಚಿತ್ರಣವು ಅಡಗಿದೆ.[೯]

ಶಬ್ದಾರ್ಥ ಬದಲಾಯಿಸಿ

  • ‘ಭಗವಾನ್’ ಶಬ್ದದ ಬಗ್ಗೆ ಚರ್ಚೆ: ‘ದೇವರು’ ಎಂಬ ಅರ್ಥ ಅದಕ್ಕಿರುವುದರಿಂದ ‘ಬುದ್ಧ ಭಗವಾನ್‌’ ಎನ್ನುವುದು ಬೇಡ ಎನ್ನುತ್ತಿದ್ದಾರೆ ಚಂಪಾ(ಚಂದ್ರಶೇಖರಪಾಟೀಲ). ಅದು ವೈದಿಕಪರಂಪರೆ ಶಬ್ದವಲ್ಲ, ಕ್ಲೇಶ ಕಳೆದು ಸಂಸಾರದಿಂದ ಎತ್ತುವ ಸಾಮರ್ಥ್ಯ ‘ಭಗ್ಗ’; ಅದರಿಂದ ಕೂಡಿದವನು ಭಗವಾ(ನ್). ಅದರಿಂದ ಬುದ್ಧನ ಒಂಬತ್ತು ಪ್ರಧಾನಗುಣಗಳಲ್ಲಿ ಅದು ಒಂದು. ಭಗವದ್ಗೀತೆಯಲ್ಲಿ ಅದನ್ನು ತಿರುಚಿದೆ– ಎಂದಿದ್ದಾರೆ ರಮಾಕಾಂತ ಪುರಾಣಿಕ (ವಾ.ವಾ., ಮೇ 16).
  • ದಯವಿಟ್ಟು ಗಮನಿಸಿ: ಋಗ್ವೇದ 7-41ನೇ ಸೂಕ್ತ, ಯಜುರ್ವೇದ, ವಾಜಸನೇಯಿಸಂಹಿತೆ 38ರಲ್ಲಿನ ಮಂತ್ರಗಳಲ್ಲಿ [ಉತೇದಾನೀಂ ಭಗವಂತಃ ಸ್ಯಾಮ ..., ಭಗ ಏವ ಭಗವಾ । ಅಸತು ದೇವಾಸ್ತೇನ ವಯಂ ಭಗವಂತಃ ಸ್ಯಾಮ...] ‘ಭಗ-ಇರುವ ದೇವತೆಗಳನ್ನು ಪ್ರಾರ್ಥಿಸಿ, ನಾವು ಭಗವಂತರಾಗೋಣ’ ಎಂದಿದೆ. ಸಾವಿರಾರು ವರ್ಷದ ನಂತರದ ಸಾಯಣರ ವ್ಯಾಖ್ಯಾನದಲ್ಲಿ ‘ಭಗ’ ಶಬ್ದಕ್ಕೆ ಜ್ಞಾನ, ಧನವನ್ನು ಹೊಂದಿದವನು, ಕೊಡುವವನು ಭಗವಂತ ಎಂದಿದೆ. ವೇಶೋಯಶ-ಆದೇರ್ಭಗಾದ್ಯತ್ ಎಂದು ಬುದ್ಧನಿಗಿಂತ ಹಿಂದಿನ ಪಾಣಿನಿಯ ಸೂತ್ರದಲ್ಲಿ [4-4-131] ಭಗ ಪದ ಬಳಕೆ ಹೇಳಿದೆ.
  • ಆದರೆ ‘ಭಗ’ ಎನ್ನುವುದು ವೇದದ ಭಾಷೆಯ ಧಾತುವಿನಿಂದ ಬಂದ ಪದವಲ್ಲ. ಇಂತಹವನ್ನು ಅವ್ಯುತ್ಪನ್ನ ಎಂದು ಗುರುತಿಸಿ ಅವು ಅವೈದಿಕರಿಂದ (ಮ್ಲೇಚ್ಛರಿಂದ) ಬಂದ ಶಬ್ದಗಳೆಂದು ಅದರ ಅರ್ಥನಿರ್ಣಯಕ್ರಮವನ್ನು ವೇದಮೀಮಾಂಸೆಗೆ ಇರುವ ಜೈಮಿನಿ ಸೂತ್ರಗಳಲ್ಲಿ [1-3-2ರಿಂದ 20] + ಶಬರಭಾಷ್ಯದಲ್ಲಿ ಹೇಳಿದೆ. ಎಂದರೆ ಬೇರೆ ಭಾಷೆಯಿಂದ ಬಂದ ಪದಗಳನ್ನು ವೈದಿಕ ಪರಂಪರೆ ಒಪ್ಪಿದೆ. ಇನ್ನು ಭಗ ಶಬ್ದಕ್ಕೆ ‘ಯೋನಿ’ ಎಂಬ ಅರ್ಥವೂ ಪ್ರಸಿದ್ಧವೇ.
  • ಅದು ಹೆಣ್ಣಿನ ಜನನಾಂಗ ಅಲ್ಲದೆ ಎಲ್ಲರಲ್ಲಿಯೂ ಲೈಂಗಿಕ ಶಕ್ತಿಯನ್ನು ಒಳಗೆ ತಿರುಗಿಸಿಕೊಳ್ಳುವ ಕೇಂದ್ರ. ತಂತ್ರಯೋಗದಲ್ಲಿನ ವಿಶೇಷ. ಈ ರೀತಿ ಸಾಧನೆ ವಿಶೇಷ ಅರಿವನ್ನೂ ಶಕ್ತಿಯನ್ನೂ ಕೊಡುತ್ತದೆ ಎಂದು ನಂಬುಗೆ [ಆ ಸೌಲಭ್ಯ ಇರುವುದೇ ‘ಸೌ-ಭಾಗ್ಯ’]. ಶ್ರಮಣ ಮತ್ತು ಬ್ರಾಹ್ಮಣ ಪರಂಪರೆಗಳೆರಡೂ ಇದನ್ನು ಗುರುತಿಸಿ ಬಳಸಿಕೊಂಡಿವೆ; ತಮಗೆ ತಕ್ಕಂತೆ ವ್ಯಾಖ್ಯಾನಿಸಿವೆ.
  • ‘ಐಶ್ವರ್ಯಸ್ಯ ಸಮಗ್ರಸ್ಯ ವೀರ್ಯಸ್ಯ ಯಶಸಂ ಬಲಃ ಜ್ಞಾನವಿಜ್ಞಾನಯೋಶ್ಚೈವ ಷಣ್ಣಾಂ ಭಗ ಇತೀರಣೆ’ ಎಂದು ವಿಷ್ಣುಪುರಾಣ ವ್ಯಾಖ್ಯಾನ ಮಾಡಿದೆ. ಜತೆಗೆ ಆ ಸಂಕೇತ–ಲಾಂಛನಗಳನ್ನು ದೇವರಿಗೂ ಹಾಕಿ ತಾವೂ ಹಾಕಿಕೊಳ್ಳುವುದಕ್ಕೂ ಭಾಗವತೋತ್ತಮರು ವ್ಯಾಖ್ಯಾನ ಕೊಟ್ಟಿದ್ದಾರೆ.[೧೦]

ಸಾಂಪ್ರದಾಯಿಕ ಅರ್ಥ ಬದಲಾಯಿಸಿ

ಈ ರೀತಿಯ ಪ್ರತಿಯೊಂದು ಸಂಪ್ರದಾಯದೊಂದಿಗಿನ ವಿಭಿನ್ನತೆಗಳು ಮತ್ತು ಧರ್ಮಶಾಸ್ತ್ರ ಪದಗಳ ಸಾಹಿತ್ಯಕ ಭಾಷಾಂತರವು, ಧಾರ್ಮಿಕ ಸಿದ್ಧಾಂತ ವಿವರಣಾ ವಿಶ್ಲೇಷಣೆಯನ್ನು ಹಲವಾರುsvayam bhagavān ವಿಭಿನ್ನ ಮಾರ್ಗಗಳಲ್ಲಿ ಅರ್ಥೈಸಿಕೊಳ್ಳಲಾಗಿದೆ. ಸಂಸ್ಕೃತ ಭಾಷೆಯಿಂದ ಅನುವಾದಿಸಲ್ಪಟ್ಟ ಈ ಪದವು ಯಥಾಮೂಲ ಅರ್ಥದನ್ವಯ "ಸ್ವತ ಭಗವಾನ್" ಅಥವಾ "ಭಗವಾನ್ನೇರವಾಗಿ" ಅರ್ಥನೀಡುತ್ತದೆ.[೧] ಇದನ್ನು ಗೌಡಿಯಾ ವೈಷ್ಣವ ಸಂಪ್ರದಾಯವು ಆದಿ ದೇವ ಅಥವಾ ದೇವಾಧಿಪತಿಯ ಮೂಲ ವ್ಯಕ್ತಿತ್ವ ದಂತೆಯೇ ಅದರ ಯಥಾದೃಷ್ಟರೂಪಗಳ ಸೀಮಿತಿಯೊಳಗೆ ಆಗಾಗ್ಗೆ ಭಾಷಾಂತರಿಸಿದೆ. ಆದರೆ, ಅದೇ ರೀತಿ ದೇವನಾಯಕನ ಪರಮಾಧಿ ವ್ಯಕ್ತಿತ್ವ ಮತ್ತು ಮಹಾದೇವ ದಂತಹ ಪದಗಳನ್ನೂ ಪರಿಗಣಿಸಲಾಗಿದೆ. ಸ್ವಯಂ ಭಗವಾನ್ ಪದಕ್ಕೆ ಸಮಾನವಾಗಿರುವ ಈ ಪದಗಳು, ಮತ್ತು ವಿಷ್ಣು,ನಾರಾಯಣಪದಗಳನ್ನೂ ಅಳವಡಿಸಿಕೊಳ್ಳಲು ಆಯ್ಕೆ ಮಾಡಬಹುದಾಗಿದೆ. ಹೀಗೆ ಅವತಾರಗಳಿಗೆ ಸಂಬಂಧಿಸಿದ ಅವನ ಹಲವು ಪದಗಳು ಬಳಕೆಯಲ್ಲಿವೆ.[೧೧][೧೨]

ಮಧ್ವಾಚಾರ್ಯರಂಥ ಭಾಗವತ ಪುರಾಣದ ಪೂರ್ವ ವಿಮರ್ಶಕರು ಸ್ವಯಂ ಭಗವಾನ್ ಪದದ ಅನುವಾದವನ್ನು ಹೀಗೆ ಮಾಡಿದ್ದಾರೆ. "ಭಾಗವತ ವಿರುವ ಅವರು (ದೇವರು)"; ಅಂದರೆ "ಎಲ್ಲ ಉತ್ತಮ ಗುಣಗಳನ್ನು ಹೊಂದಿರುವ ಅವನು, ಒಬ್ಬ ಸರ್ವಗುಣಸಂಪನ್ನ" ಎಂದರ್ಥ.[೫] ಬೇರೆಯವರು "ದೇವಸ್ವಯಂ" ಎಂದು ಸರಳವಾಗಿ ಭಾಷಾಂತರಿಸಿದ್ದಾರೆ.[೧೩] ವಿಷ್ಣುವಿನ ಅನುಯಾಯಿಗಳು, ಆತನನ್ನೇ ಕೇಂದ್ರೀಕರಿಸಿ ವೈಷ್ಣವ ಸಿದ್ಧಾಂತದಸಂಪ್ರದಾಯಗಳು ವಿರಳವಾಗಿ ಈ ಪದವನ್ನು ಸಂಭೋಧಿಸುತ್ತಾರೆ. ಆದರೆ ಎಲ್ಲಾಅವತಾರಗಳ [೧೪] ಅತ್ಯತ್ಕಷ್ಟವುತ್ತು ಸಂಪೂರ್ಣತೆಯೇ ಕೃಷ್ಣನೆಂದು ಸ್ಪಷ್ಟೀಕರಿಸುವುದರಿಂದ, ಇದನ್ನೇ ನಂಭಿರಲಾಗಿದೆ, ಹಾಗಾಗಿ ಇದನ್ನು "ಪರಿಪೂರ್ಣ ಅವತಾರ " ವೆಂದು ಪರಿಗಣಿಸಲಾಗಿದೆ. ಅಂದರೆ, ಎಲ್ಲಾ ಮೂಲಗಳಂತೆಯೇ ಎಲ್ಲದರಲ್ಲೂ ಪೂರ್ಣತೆ ಇರುವಿಕೆ ಎಂದು ಗಣನೆಗೆ ತೆಗೆದುಕೊಳ್ಳಲಾಗಿದೆ.[೧೫](ಅದರೆ ಪರಾಶರರು ಕೃಷ್ಣನಿಗಿಂತ ಹಿಂದೆ ಇದ್ದವರು. ಪರಾಶರರ ಮಗ ವ್ಯಾಸರಿಗಿಂತ ಬಹಳ ಕಿರಿಯ ಕೃಷ್ಣ. ವ್ಯಾಸರ ಮೊಮ್ಮಗ ಅರ್ಜುನನ ವಯಸ್ಸು ಕೃಷ್ನನಿಗೆ. ಪರಾಶೆರರು ಕೃಷ್ನನ ಬಗೆಗೆ ಅವನು ಹುಟ್ಟುವ ಮೊದಲೇ ಬರೆದರೇ ಎಂಬ ಸಂಧಿಗ್ದತೆ ಇದೆ.) ಅವರ ಪ್ರಕಾರ ಭಾಗವತ ಪುರಾಣದಲ್ಲಿ ಕೃಷ್ಣನನ್ನು ಪೂರ್ಣವತಾರ (ಅಥವಾ ಪೂರ್ಣ ಪುರಾವೆಯುತ ಅವತಾರ)ವೆಂದು ಭಗವಾನ್‌ನನ್ನು ವರ್ಣಿಸಲಾಗಿದೆ, ಹಾಗೇ ಬೇರೆ ಅವತಾರಗಳನ್ನು ಭಾಗಶಃವೆನ್ನಲಾಗಿದೆ. "ಸ್ವತಃ ಭಗವಾನ್ ನಾಗಿದ್ದು ಕೃಷ್ಣನು, ಸ್ವಇಚ್ಛೆಯಿಂದ ವ್ಯಕ್ತಿಯ ಮನಸ್ಸು ಅವನ ಮೇಲೆ ಕೇಂದ್ರೀಕರಿಸಿರಬೇಕು, ಯಾವುದೇ ಕಾರ್ಯಗಳಿದ್ದರೂ, ಮತ್ತು ಅರಿವಿಲ್ಲದೆಯೂ ಕೂಡ ಮನಸ್ಸು ಅವನ ಬಗ್ಗೆ ಚಿಂತನೆ ನಡೆಸಬೇಕು"(ಪು.  334)[೬]ಹಿಂದೂ ತತ್ವದೆಲ್ಲೆಡೆಯೂ ಕೃಷ್ಣ ಅವತಾರಗಳ ವಿಶೇಷತೆಯನ್ನು ವೈಶಿಷ್ಟ್ಯವಾಗಿ ಜಾಗತಿಕವಾಗಿ ಸ್ವೀಕರಿಸಿರುವ ಪುರಾವೆಗಳನ್ನು ಸಾಮಾನ್ಯವಾಗಿ ಕಾಣುತ್ತಿದ್ದೇವೆ. ಹಾಗೆಯೇ ಏತಕ್ಕಾಗಿ ಅವನನ್ನು ಸ್ವಯಂ ಭಗವಾನ್ ಎಂದು ವರ್ಣಿಸಿರುವ ಕಾರಣವನ್ನು, ಅವನ ಜೀವನ ಮತ್ತು ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಲಾದ ತತ್ವಗಳನ್ನು ಇಡೀ ವಿಶ್ವವೇ ಒಪ್ಪಿ ಸ್ವೀಕರಿಸಿದೆ.[೬]

ದೃಷ್ಟಿಕೋನಗಳು ಬದಲಾಯಿಸಿ

ಪರ ಅಭಿಪ್ರಾಯಗಳು ಬದಲಾಯಿಸಿ

ಕೃಷ್ಣನೇ ಕೇಂದ್ರೀಕೃತಗೊಂಡ ಹಲವಾರು ಸಂಪ್ರದಾಯಗಳಲ್ಲಿ, ಕೃಷ್ಣನ ಉಪದೇವತೆಗಳಿಂದ ವಿಷ್ಣುವಿನ ತನಕ ಗಣೀಕರಿಸಲ್ಪಡುವ ಒಂದು ಅಂಶವೂ ನಮ್ಮ ಜನರಲ್ಲಿದೆ. ಇದರ ಕಾರಣಗಳೇನೆಂದರೆ, ವೈಷ್ಣವಧಾರ್ಮಿಕ ಸಿದ್ಧಾಂತದ ಸಂಪೂರ್ಣ ಯಥಾದೃಷ್ಟ ರೂಪಗಳೊಳಗೆ ಅಂದರೆ ಕೃಷ್ಣನ ಮಾನವ ಅವತಾರದೊಳಗೆ ಆಲೋಚಿಸಿ, ಅದರಲೇ ನೆಲೆಸುವುದೇ ಅತ್ಯಂತ ಸುಲಭದ ದಾರಿಯಾಗಿದೆ. ಈ ಎಲ್ಲಾ "ಉತ್ಕೃಷ್ಟ ಗ್ರಂಥಗಳು ಕೃಷ್ಣನ ವ್ಯಕ್ತಿತ್ವದಪರಮೋನ್ನತಕ್ಕಾಗಿ ಹೋರಾಡುತ್ತವೆ ಮತ್ತು ಶ್ರಮಿಸುತ್ತವೆ".[೧೬] ಅವತಾರಗಳ ಪಟ್ಟಿಯಲ್ಲಿ ಕೃಷ್ಣನ ಒಳಪಡಿಸುವಿಕೆಯಿಂದ ಅಗತ್ಯವಾಗಿ ಅವನನ್ನು ಕೆಳ ದರ್ಜೆಗೆ ಇಳಿಸಲಾಗಿಲ್ಲ. ಇತ್ತೀಚೆಗಿನ ವಿವರಣೆಗಳ ಪ್ರಕಾರ ವಿಷ್ಣುವನ್ನು ಕೃಷ್ಣನ ಅಧೀನನೆಂದು ಪರಿಗಣಿಸಲಾಗಿಲ್ಲ.[೧೭] 12ನೇ ಶತಮಾನದ ಜಯದೇವನಂತಹ ಪೂರ್ವ ಲೇಖಕರುಗಳು ವಿಷ್ಣುವಿಗಿಂತ ಹೆಚ್ಚಾಗಿ ಕೃಷ್ಣನ ಅವತಾರಗಳ ಪ್ರಾಮುಖ್ಯತೆಯೆಂದು ದಶಾವತಾರವನ್ನು ಪರಿಗಣಿಸಿದ್ದಾರೆ.

ಗೌಡಿಯಾ ವೈಷ್ಣವ ಸಿದ್ಧಾಂತ ಅಂದರೆ ಕೃಷ್ಣ-ಕೇಂದ್ರೀಕೃತ ಧಾರ್ಮಿಕ ಸಿದ್ಧಾಂತದ ಪ್ರಧಾನ ಬೆಂಬಲಿಗರು ಮತ್ತು ವಲ್ಲಭ ಸಂಪ್ರದಾಯ, ನಿಂಬರ್ಕ ಸಂಪ್ರದಾಯಗಳ ಅನುಯಾಯಿಗಳು, ಗೋಪಾಲ ಟಪನಿ ಉಪನಿಷತ್,[೧೮] ವೇದಾಂತ ಸೂತ್ರಗಳು [೧] ಮತ್ತು ಬೇರೆ ಹಿಂದೂ ಧರ್ಮಗ್ರಂಥ[೧೯] ದಂತಹ ಭಾಗವತ ಪುರಾಣ ಮತ್ತು ಬ್ರಹ್ಮ ವೈವಾರ್ತ ಪುರಾಣಗಳಲ್ಲಿ ಕೃಷ್ಣನನ್ನೇ ಪ್ರಮುಖವಾಗಿ ಎತ್ತಿ ತೋರಿಸಿದ್ದಾರೆ, ಅದೇ ರೀತಿ ಬೇರೆ ಗ್ರಂಥಗಳು, ಅವರವರ ದೃಷ್ಟಿಕೋನಕ್ಕೆ ತಕ್ಕಂತೆ ಕೃಷ್ಣನನ್ನು ಆಸಕ್ತಿಯಿಂದ ಸ್ವಯಂ ಭಗವಾನ್ ಎಂದು ಬೆಂಬಲಿಸಿದ್ದಾರೆ. 16ನೇ ಶತಮಾನದ ಲೇಖಕರಾದ ಜೀವ ಗೋಸ್ವಾಮಿಯಿಂದ ರಚಿಸಲ್ಪಟ್ಟಿರುವ ಆತನ ಬರಹಗಳಾದ ಕೃಷ್ಣ - ಸಂದರ್ಭ ಕೃತಿಯಲ್ಲಿ ಇದೇ ನಂಬಿಕೆಯು ಕ್ರೋಢೀಕರಿಸಲ್ಪಟ್ಟಿದೆ.[೧][೨೦] ಋಗ್ವೇದದಂತಹ ವೇದ ತತ್ವ ಸಾಹಿತ್ಯದ ಕೆಲವೊಂದು ಪೂರ್ವಬರಹಕೃತಿಗಳಲ್ಲಿ ಕೃಷ್ಣ ಸ್ವತ: ಗುರುತಿಸಲ್ಪಟ್ಟಿದ್ದಾನೆ.[೨೧]

ಹಿಂದೂ ಗ್ರಂಥವೆನಿಸಿದ ಮಹಾಭಾರತದ ಆರನೇ ಪುಸ್ತಕದಲ್ಲಿ ಅಂದರೆ ಭೀಷ್ಮಪರ್ವ ದಲ್ಲಿ (ಭಾಗವತ ಗೀತ ದ ಭಾಗದಲ್ಲಿ) ಕೃಷ್ಣನು ಅಸಂಖ್ಯಾತ ವೇದವಾಕ್ಯಗಳಲ್ಲಿ ಪುನರ್ ಸ್ಪಷ್ಟಣೆ ನೀಡಿರುವ ಪ್ರಕಾರ ಸ್ವಯಂ ಭಗವಾನ್ ತಾನಾಗಿಯೇ ಅಧಿಪತಿಯೆಂದು ನಂಬಿರಲಾಗಿದೆ. ಭಗವದ್ ಗೀತೆ7.7 ವಿಭಾಗವನ್ನು ಕೃಷ್ಣನೇ ಒಬ್ಬ ಸ್ವಯಂ ಭಗವಾನ್ ನೆಂದು ತಾನೇ ಅಭಿಪ್ರಾಯಪಟ್ಟಿರುವುದನ್ನು ಆಗಾಗ್ಗೆ ಬೆಂಬಲಿಸಲು ಉಪಯೋಗಿಸಲಾಗಿದೆ, ಮತ್ತು ಬ್ರಹ್ಮನು ತನ್ನ ಸಾಕಾರ ಸ್ವರೂಪವೆಲ್ಲದ ವಿಧವ ಅಸ್ಥಿತ್ವವನ್ನು ಪ್ರತಿವಾಧಿಸಿದ್ದಾನೆ. ಅತೀ ದೊಡ್ಡ ಪ್ರತಿಪಾದಕರುಗಳ ಏಕತತ್ವವಾದಕ್ಕಿಂತ ಮೊದಲು ಸಾಮಾನ್ಯ ದೃಷ್ಟಿಕೋನದಲ್ಲಿ ಭಗವದ್ಗೀತೆಯು ಕೃಷ್ಣ - ತತ್ವಸಿದ್ಧಾಂತವನ್ನು ಪ್ರತಿಪಾದಿಸುತ್ತಿತ್ತು.[೨೨]

ಸ್ವಯಂ ಭಗವಾನ್ ನ ಸ್ಥಾನದ ಬೇರೆ ಎರಡು ವ್ಯಾಪಕವಾಗಿ ಹಬ್ಬುವ ಗೀತೆಯಲ್ಲಿ ಸಮರ್ಥಿಸಿವಿ, ಅವು ಕೃಷ್ಣ - ಕೇಂದ್ರೀಕೃತ ಸಂಪ್ರದಾಯವನ್ನು ಬಿಟ್ಟು ಬೇರೆಯವುಗಳಿಗೆ ಸಂಬಂಧಿಸಿದೆ. ಬ್ರಹ್ಮಸೂತ್ರಗಳ ಬಗ್ಗೆ ಶಂಕರಾಚಾರ್ಯರು ಪಾದಗಳು ಪ್ರಮುಖವಾಗಿ ಹಲವು ದೃಷ್ಟಿಕೋನಗಳನ್ನು ಒಂದು ಸಂಪ್ರದಾಯವು ಅನುಸರಿಸುವಷ್ಟು ಪ್ರಭಾವ ಬೀರಿದ್ದವು. ಅದನ್ನು ಮಾಯವಾದ [೨೨] ಎಂದು ಹೆಸರಿಸಲಾಗಿದ್ದು, ಇದು ಸ್ವಯಂ ಭಗವಾನ್ ನ ಪಾರಮಾಧಿತ್ಯವನ್ನು ಮಾಯ ಅಥವಾ ಕಾಲ್ಪನಿಕ ಭ್ರಮೆಯ ವಿಚಾರದಿಂದ ಸಮರ್ಥಿಸುತ್ತದೆ.

ಗೀತೆಯಲ್ಲಿ ಸ್ವಯಂ ಭಗವಾನ್ ನ ಪರಮೋನ್ನತ ಸ್ಥಾನದ ಅರ್ಥೈಸುವಿಕೆಗಾಗಿ ಎರಡನೇ ಬದಲೀ ಕಾರ್ಯವೆಂದರೆ, ನಾರಾಯಣ ಅಥವಾ ವಿಷ್ಣು ದೇವರ ಅವತಾರವು ಉತ್ಕೃಷ್ಟ ಮತ್ತು ಪರಿಪೂರ್ಣತೆಯಿಂದ ತುಂಬಿದ ಕೃಷ್ಣನಲ್ಲಿಯ ಒಂದು ಜನಪ್ರಿಯ ದೃಷ್ಟಿಕೋನವಾಗಿದೆ.[೧೪] "ಬ್ರಹ್ಮನಂತೆಯೇ ಕೃಷ್ಣ ಎಂದು ಚಿತ್ರಿಸುವುದಲ್ಲದೆ, ವಿಷ್ಣುವಿನ ಒಂದು ಅವತಾರ ಮತ್ತು ಅರ್ಜುನನ ಒಬ್ಬ ಮಿತ್ರನೂ ಕೂಡ ಎಂದು ಭಗವದ್ಗೀತೆಯು ಚಿತ್ರಿಸುತ್ತದೆ."[೨೩]ಸ್ವಯಂ ಭಗವಾನ್ ದೃಷ್ಟಿಯೊಂದಿಗಿನ ಒಂದು ಪ್ರಕಾರದಿಂದ ಕೂಲಂಕುಷವಾಗಿ, ಕೃಷ್ಣನನ್ನು ವಿಷ್ಣುವಿನ ಪೂರ್ಣ-ಅವತಾರ (ಅವತಾರ ಸಂಪೂರ್ಣ) ವೆಂದು ಪರಿಗಣಿಸಲಾಗಿದೆ. ಬ್ರಹ್ಮನಾಗಿಯೂ ಬದಲಾಗುವ ನಾರಾಯಣನು ಪ್ರಾಪಂಚಿಕ ವಿಶ್ವಸ್ವರೂಪಿಯೆನಿಸಿದ್ದಾನೆ.[೨]

[೨೪]

ಕೃಷ್ಣನು ಸ್ವತಃ ಮೂಲತ್ವ ದ ಒಂದು ವಿಚಾರ ಅಥವಾ ಪರಮೋನ್ನತೆಯನ್ನು ಹೀಗೆ ವರ್ಣಿಸಿದ್ದಾನೆ, ಉದಾಹರಣೆಗೆ ಅಭಿನವಗುಪ್ತಎಂಬ ಹಿಂದೂ ಧರ್ಮಶಾಸ್ತ್ರದ ಮತ್ತೊಂದು ಸಂಪ್ರದಾಯವು ಭಗವದ್ - ಗೀತಎಂಬ ಒಂದು ಗೀತಾ ಸುಭಾಷಿತವನ್ನು ಹೀಗೆ ಪರಿಚಯಿಸಿದೆ. "ನಾನು" ಅಂದರೆ ಕೃಷ್ಣ ನನ್ನು ಸಂಭೋಧಿಸುತ್ತಾ, ಆತನು ಒಬ್ಬ ಅತ್ಯುತ್ಕೃಷ್ಟನೂ, ವಿಶ್ವದಲ್ಲಿಯೇ ನಶ್ವರ ಮತ್ತು ಶಾಶ್ವತಗಳೆರಡರಲ್ಲೂ ಅತೀತವಾಗಿ ಗ್ರಹಿಸಬಲ್ಲವನೆನಿಸಿದ್ದಾನೆ.[೨೫]

ವೈಷ್ಣವರ ಇತರೆ ದೃಷ್ಟಿಕೋನಗಳು ಬದಲಾಯಿಸಿ

ಶ್ರೀ ವೈಷ್ಣವರು ವಿಷ್ಣುವನ್ನು ಬ್ರಹ್ಮನೊಂದಿಗೆ ಗುರುತಿಸುತ್ತಾರೆ, ಹಾಗೆ ಕೃಷ್ಣ-ಕೇಂದ್ರೀಕೃತ ಸಂಪ್ರದಾಯಗಳು ಪರಬ್ರಹ್ಮನೆಂದು ಕೃಷ್ಣನೊಂದಿಗೆ ಸಂಯೋಜಿಸಿ ಸ್ವಯಂ ಭಗವಾನ್‌ನಂತೆ ಗೌರವಿಸುತ್ತಾರೆ. ರಾಮಾನುಜಾಚಾರ್ಯರ ಪ್ರಕಾರ ಬ್ರಹ್ಮಣ ಎಂಬುವುದು ಸಾಕಾರರೂಪವಿರುವವನು. ಆದರೂ, ಅವನೇ ಉನ್ನತ ವ್ಯಕ್ತಿ, ಸೃಷ್ಟಿಕರ್ತ ಮತ್ತು ದೇವನಾಗಿದ್ದು ಆತ್ಮಗಳನ್ನು ಮೋಕ್ಷದೆಡೆಗೆ ಕೊಂಡೊಯ್ಯುವ ಕಾರಣಕರ್ತನಾಗಿದ್ದಾನೆ. (ಧನಾತ್ಮಕ) ವೈಶಿಷ್ಟ್ಯತೆಗಳಿಲ್ಲದೆ ಹೋದರೂ, ಕೆಲವು ಅದ್ವೈತ ವೇದಾಂತದ ಅನುಯಾಯಿಗಳು ಹೀಗೆ ನಿರ್ವಹಿಸಿದ್ದಾರೆ. ಬ್ರಹ್ಮ ಎಂಬುವವ ಎಲ್ಲಾ "ಸರ್ವೋಚ್ಛ ಗುಣವಿಶೇಷಣಗಳ" ಒಂದು ಸಂಕಲನ ವಾಗಿದೆ - ಅಂದರೆ ಸರ್ವಾಂತರ್ಯಾಮಿಯೂ, ಸರ್ವಜ್ಞನೂ, ಸರ್ವಶ್ರೇಷ್ಠನೂ ಮತ್ತು ಸಂಪೂರ್ಣದಯಾಪರನೂ, ಎಂಬ ಎಲ್ಲ ಗುಣ ಸಂಪನ್ನಗಳು ವೈಷ್ಣವರಿಂದ ವಿಷ್ಣುಗೆ ಹೆಗ್ಗುರುತಾದ ಚಿಹ್ನೆಗಳಾಗಿವೆ. ದಕ್ಷಿಣ ಭಾರತೀಯ ಸಂಪ್ರದಾಯಗಳ ಪ್ರಕಾರ ಆತನು ಅದ್ವೈತ ಕೂಡ ಆಗಿದ್ದಾನೆ. (ಸಂಸ್ಕೃತದಲ್ಲಿ, ಅದರರ್ಥ ಪ್ರತಿಸ್ಪರ್ಧಿರಹಿತನು). ವೈಷ್ಣವರುಗಳಿಗೆ, ಶಿವ, ಬ್ರಹ್ಮ, ಮತ್ತು ಹಿಂದೂಧರ್ಮದ ಬೇರೆ ದೇವತೆಗಳು ದೇವಾಲಯ, ದೇವಾಲಯ ಬ್ರಾಹ್ಮಣ ಏಜೆಂಟರುಗಳು ಅಥವಾ ಸೇವಕರುಗಳಂತೆ ನೋಡಲಾಗುವುದು ಮತ್ತು ಅವನಿಂದ ಸೃಷ್ಟಿಸಲ್ಪಟ್ಟು, ಬಡ್ತಿಯ ಲಾಭ ಪಡೆದಂತಾಗುವುದು. ಪಾಶ್ಚಿಮಾತ್ಯ ಧರ್ಮಶಾಸ್ತ್ರ ಸಂಪ್ರದಾಯಗಳಲ್ಲಿನ ದೇವದೂತರುಗಳ ಸ್ಥಾನ ಪ್ರತಿಷ್ಠೆಗೆ ಸಮಾನವಾಗಿ ಬೇರೆ ದೇವತೆಗಳನ್ನು ಕೂಡ ಕೆಲ ವೈಷ್ಣವರು ವಿಷ್ಣುವಿನ ಅಧಿದೇವತೆಗಳೆಂದು ಪರಿಗಣಿಸಿದ್ದಾರೆ.[೨೬]

"ಬುದ್ಧಿವಂತಿಕೆ, ಜಾಣ್ಮೆ ಮತ್ತು ಪೆದ್ದ, ದಡ್ಡತನಗಳ ಒಂದು ಸಂಪೂರ್ಣ ಸಂಯೋಗವಿರುವಿಕೆಯ ಅಸ್ತಿತ್ವ - ಎಂಬುದನ್ನು ಸತ್ಯದಂತೆ ನೋಡಲಾಗುವುದು ಮತ್ತು ಉನ್ನತ ಬ್ರಾಹ್ಮಣನ ಶರೀರ ವೆಂಬಂತೆ ಸಂಯೋಜಿತ ರೂಪವೆಂದು ಪರಿಗಣಿಸಲಾಗುತ್ತದೆ”.[೨೭] ಒಂದು ಆತ್ಮ ಮತ್ತು ಶರೀರದ ಸಂಬಂಧವು ರಾಮಾನುಜಾಚಾರ್ಯರ ಪ್ರಕಾರ, ಶರೀರವು ಆತ್ಮದ "ಸಂಪೂರ್ಣ ಅಧೀನ" ವೆಂದು, ಸ್ವತಂತ್ರವಾಗಿ ಬೆಲೆಯಿಲ್ಲದ ಅಥವಾ ಸತ್ಯಾತೆಯಿಲ್ಲದೇ ಇರುವುದು" ಎಂದರ್ಥ.[೨೮] ಆದರೂ, ರಾಮಾನುಜಾಚಾರ್ಯರು ಸ್ವತಃ ಒಂದು "ಪೂರ್ಣ ಅವತಾರ" ವೆನ್ನುವ ಕೃಷ್ಣನಿಂದ ವಿಷ್ಣುವಿಗೆಯ ರೀತಿಯಲ್ಲೇ ಒಂದು ಶರೀರದ ಅಧೀನತೆಗೆ ಒತ್ತುಕೊಟ್ಟಿರಲಿಲ್ಲ.

ಹಾಗೆಯೇ, ವೈಷ್ಣವ ಸಂಪ್ರದಾಯಗಳು, ಸ್ವಯಂ ಭಗವಾನ್ ವಿಚಾರವನ್ನು ಬೆಂಬಲಿಸುವವರಂತೆಯೇ ಅದೇ ದೃಷ್ಟಿಕೋನದೊಂದಿಗೆ ಒಪ್ಪಿಕೊಳ್ಳುವುದಿಲ್ಲ.[೨೯][unreliable source?]

ಅವರ ದೃಷ್ಟಿಕೋನಗಳಿಗೆ ಬೆಂಬಲಿಸಲೆಂದು ಅವರು ಮಹಾಭಾರತ ದಲ್ಲಿ ಅನುಶಾಸನ ಪರ್ವ ದ 149ನೇ ಅಧ್ಯಾಯವನ್ನು ಪ್ರಮುಖವಾಗಿ ಉಲ್ಲೇಖಿಸಿದ್ದಾರೆ. ಭೀಷ್ಮನು ಹೇಳುತ್ತಾನೆ ಕೃಷ್ಣನ ಉಪಸ್ಥಿತಿಯು, ವಿಷ್ಣು ಸಹಸ್ರನಾಮ'ವನ್ನು ಸ್ತುತಿಸುವುದರಿಂದ ಮನುಕುಲವು ತನ್ನ ಎಲ್ಲಾ ದುಃಖಗಳಿಂದ ಮುಕ್ತವಾಗುತ್ತದೆ, ವಿಷ್ಣು ಅಂದರೆ ಸರ್ವೋಚ್ಛ ಆತ್ಮ ಸಾವಿರಾರು ನಾಮಗಳನ್ನು ಎಲ್ಲೆಡೆ ವ್ಯಾಪಕವಾಗಿ ಹಬ್ಬಿಸುವುದರಿಂದ (ಸ್ತುತಿಸುವ ಮೂಲಕ) ಸಂಕಟಗಳ ನಿವಾರಣೆಯಾಗುತ್ತದೆ. ಇಡೀ ವಿಶ್ವಮಂಡಲಗಳ ಅಧಿಪತಿಯಾದ ವಿಷ್ಣುವನ್ನು, ಹಾಗೇ, ಎಲ್ಲ ದೇವತೆಗಳಲ್ಲಿಯೇ ಪರಮೋಚ್ಛ ದೇವನಾಗಿದ್ದು, ಮತ್ತು ಬ್ರಾಹ್ಮಣನ ಜೊತೆಗೆ ಇರುವವನಾಗಿರುವುದರಿಂದ ವಿಷ್ಣು ಸಹಸ್ರನಾಮವು ಬಹು ಮುಖ್ಯ ಪಾತ್ರವಹಿಸಿದೆ.[೩೦][೩೧] ಕೃಷ್ಣನು ವಿಷ್ಣುವಿನೊಂದಿಗೆ ಏಕರೂಪ ಹೊಂದಿರುವವನಾಗಿದ್ದು, ಅನನ್ಯಸ್ಕ ತದ್ರೂಪಿಯೆಂದು ಸೂಚಿಸುತ್ತಿರುವುದನ್ನು ಇದು ತೋರುತ್ತದೆ. ಆದರೂ, ತಾನೇ ಸ್ವತಃ ಕೃಷ್ಣನು ಹೇಳುತ್ತಾ, "ಅರ್ಜುನ, ಸಹಸ್ರನಾಮಗಳ ವಾಚನಮಾಡುವುದರಿಂದ ಪ್ರಶಂಸೆಯ ಉತ್ಕಷ್ಟಬಯಕೆಯು ಒಬ್ಬನಿಗಿರಬಹುದು. ' ಆದರೆ, ನನ್ನ ಬಗೆಗಿನ ವಿಷಯದಲ್ಲಿ, ನಾನು ಒಂದುಶ್ಲೋಕದಿಂದಲೇ ಹೊಗಳಲ್ಪಡುತ್ತಿರುವೆನೆಂದು ಭಾವಿಸುತ್ತೇನೆ. ಅದರ ಬಗ್ಗೆ ಯಾವುದೇ ಸಂಶಯವಿಲ್ಲ." [೩೨]

ಸಾಮಾನ್ಯವಾಗಿ, ಈ ವಿಚಾರಕ್ಕೆ ನಿಷ್ಠೆಯಾಗಿರುವವರು ನಂಬುವಂತೆಯೇ ವೇದ ಸಾಹಿತ್ಯಕ್ಕೆ ಬಹು ಒಪ್ಪಿಗೆಯಿರುವವರು ನಿಷ್ಠತೆಯಿಂದಿರುತ್ತಾರೆ. ಕೆಲವು ವೈಷ್ಣವ ಕೃತಿಗಳ ಸೂಚಿಸುವಂತೆ ಈ ಭಗವತ ಪುರಾಣದಲ್ಲಿ, ಸ್ವಯಂ ಭಗವಾನ್ ವಿಚಾರಕ್ಕೆ ನೆರವಾಗುವಲ್ಲಿ ಅತ್ಯಂತ ಪ್ರಮುಖ ಪುಸ್ತಕಗಳನ್ನು ಉಪಯೋಗಿಸಲಾಗಿದೆ. ಅಲ್ಪಕಾಲಾನಂತರ ಆ ವಿಷಯಗಳನ್ನು ಹೊಂದಿದ ಕೃತಿಯನ್ನು ಸಂಯೋಗಿಸಲಾಗಿತ್ತು ಮತ್ತು ಈ ವೇದಗಳ ಬೋಧನೆಗಳನ್ನು ಸಂಪೂರ್ಣವಾಗಿ ಅನುಸರಿಸಲಾಗಿಲ್ಲ.[ಸೂಕ್ತ ಉಲ್ಲೇಖನ ಬೇಕು]

ಈ ವಿಚಾರದೃಷ್ಟಿಯ ಕೆಲವು ನಿಷ್ಠಾವಂತ ಅನುಯಾಯಿಗಳು, ಸ್ವಯಂ ಭಗವಾನ್ ಪದದ ಬಳಕೆಯನ್ನು ವಿರೋಧಿ ವಾದ ಮಂಡಿಸಿ, ಆ ವರ್ಗಕ್ಕೆ svayaṁ-rūpa ಸಂಬಂಧಿಸಿದ ಹೊಸ ದೃಷ್ಟಿಕೋನವನ್ನು ಗೌಡಿಯಾ ವೈಷ್ಣವ ತತ್ವದ ಜೊತೆಗೆ ಕ್ರೋಢೀಕರಿಸಲಾಗಿತ್ತು. ಉನ್ನತ ಹಿಂದೂ ತತ್ವದೊಳಗಡೆ ಮತ್ತು ಮೊದಲ ಯಾವುದೇ ವೈಷ್ಣವ ಸಂಪ್ರದಾಯಗಳಲ್ಲಿ ಇದನ್ನು ಸಾಮಾನ್ಯವಾಗಿ ಬೆಂಬಲಿಸಲಾಗಿಲ್ಲ ಅಂದರೆ ಎತ್ತಿಹಿಡಿದಿಲ್ಲ.[ಸೂಕ್ತ ಉಲ್ಲೇಖನ ಬೇಕು]

ಹಲವು ವೈಷ್ಣವ ಶಾಲೆಗಳು ಈ ವಿಚಾರದ ವಿಭಿನ್ನ ಮಂಡನೆಗಳನ್ನು ಅಥವಾವಿವರಣಾಸ್ಪಷ್ಟತೆಗಳನ್ನು ಹೊಂದಿವೆ. ಉದಾಹರಣೆಗೆ ಸ್ವಾಮಿ ನಾರಾಯಣ್ ಸಂಪ್ರದಾಯದ ಅನುಯಾಯಿಗಳು, ನಾರಾಯಣ ದೇವರೇ ಸ್ವತಃ ಸ್ವಾಮಿನಾರಾಯಣ ದೇವ ನಂತೆ ಅವತರಿಸಿ ಪುರಾವೆಯ ಸ್ಪಷ್ಟೀಕರಣ ನೀಡಿದ್ದಾನೆಂದು ನಂಬಿರುವರು.[೩೩] ಈ ವಿಚಾರವು ಅವರ ನಿರ್ಧಿಷ್ಟ ಸಂಪ್ರದಾಯದೊಳಗೆ ಮಾತ್ರ ಬೆಂಬಲಿಸುತ್ತದೆ.

ಹೋಲಿಕೆ ಬದಲಾಯಿಸಿ

ಕೃಷ್ಣ ಮತ್ತು ವಿಷ್ಣುವಿಗಿರುವ ನಿಖರವಾದ ಸಂಬಂಧ, ವಿಶೇಷವಾಗಿ ಇವರಿಬ್ಬರಲ್ಲಿ ಯಾರು ಮೊದಲಿಗರು ಮತ್ತು ಯಾರು ಸುಮ್ಮುಮ್ ಬೋನಮ್, ಎಂಬುದು ವೈಷ್ಣವ ಸಿದ್ಧಾಂತದಲ್ಲಿ ಆಗಾಗ್ಗೆ ಬರುವ ಅತ್ಯಂತ ಚರ್ಚಾಸ್ಪದ ವಿವಾದವಾಗಿದೆ.

ವಿಶೇಷವಾಗಿ ಪಂಚತ್ರಂತದಂತಹ ಕೆಲವು ಪ್ರಾಚೀನ ವೈಚಾರಿಕ ವಿದ್ಯಾಲಯಗಳಲ್ಲಿ , ವಸುದೇವ-ಕೃಷ್ಣನು ( ಕೃಷ್ಣನು ವಾಸುದೇವನ ಮಗ) ಎಲ್ಲಾ ಅವತಾರಗಳ ಮೂಲ ಎಂದು ವಿವರಿಸಲಾಗಿದೆ ಮತ್ತು ಇದು ಪರಮ ಅಂತಿಮ ಸತ್ಯಕ್ಕಿಂತ ಭಿನ್ನವಾಗಿಲ್ಲ ಹಾಗೂ ವಾಸುದೇವ ಮತ್ತು ಯಾವುದೇ ಇತರ ಪರಮಶ್ರೇಷ್ಠ ಸ್ವರೂಪಗಳಿಗಿಂತ ಇದು ಭಿನ್ನವಾಗಿಲ್ಲ ಎಂದು ವಿವರಿಸಲಾಗಿದೆ.[೩೪]

ಆದರೆ , ಇನ್ನೂ ಹೆಚ್ಚು ನಿರ್ದಿಷ್ಟವಾಗಿ ವಲ್ಲಭಾಚಾರ್ಯ ಹಾಗೂ ಚೈತನ್ಯ ರಿಗಿಂತ ದಕ್ಷಿಣ ಭಾರತದಲ್ಲಿ ಮೊದಲು ಇದ್ದ ವೈಷ್ಣವಸಂಪ್ರದಾಯವು ಕೃಷ್ಣನನ್ನು ಕೆಲವು ಸಮಯಗಳಲ್ಲಿ ವಿಷ್ಣುವಿನ ಇತರ ಅವತಾರ ಗಳಲ್ಲಿ ಒಂದು ಎಂದು ಪರಿಗಣಿಸುತ್ತದೆ ಅಥವಾ ಮಧ್ವ ಸಂಪ್ರದಾಯದಲ್ಲಿ , ಈತನನ್ನು ವಿಷ್ಣುವಿನ ಪರಿಪೂರ್ಣ ಅವತಾರ ಎನ್ನಲಾಗಿದೆ. ಆದರೆ ಉಪನಿಷತ್ತುಗಳಲ್ಲಿ ಹಾಗೂ ಭಾಗವತ ಪುರಾಣಗಳಲ್ಲಿ ಗೌಡಿಯಾ ಮೂಲದ ವಿವರಣೆಗಳಿರುವುದರಿಂದ ಅವತಾರ ದ ವಾಖ್ಯೆಯನ್ನು ಚೈತನ್ಯದ ಸನಾತನ ಗೋಸ್ವಾಮಿ ಯಲ್ಲಿ ವಿಭಿನ್ನವಾಗಿ ಮಂಡಿಸಲಾಗಿದೆ.

ಕೃಷ್ಣ ಸಿದ್ಧಾಂತ ಬದಲಾಯಿಸಿ

ಕೃಷ್ಣ ಸಿದ್ಧಾಂತ ಎಂಬ ಪದವನ್ನು ಕೃಷ್ಣನ ಆರಾಧನೆಗಳನ್ನು ಬಣ್ಣಿಸಲು ಬಳಸುವ ಪದವಾಗಿದೆ, ಆದರೆ ವೈಷ್ಣವ ಸಿದ್ಧಾಂತವು ವಿಷ್ಣುವಿನ ಆರಾಧನೆಗಳ ಕಡೆಗೆ ಕೇಂದ್ರೀಕೃತವಾಗಿದ್ದು ಇದರಲ್ಲಿ ಕೃಷ್ಣ ನು ಒಂದು ಅವತಾರ ಮಾತ್ರವೇ ಆಗಿದ್ದು ಯಾವುದೇ ರೀತಿಯ ಉತ್ಕೃಷ್ಟಕ್ಕೆ ಆಸ್ಪದ ಕೊಡುವುದಿಲ್ಲ.[೩೫]

"ಅತ್ಯುನ್ನತ ಕೃಷ್ಣ ಸಿದ್ಧಾಂತ"ವು ವೈಷ್ಣವ ಸಿದ್ಧಾಂತದ ಎರಡನೆಯ ಮತ್ತು ಪ್ರಧಾನ ಹಂತವಾಗಿದ್ದು , ವಸುದೇವ ಕೃಷ್ಣ ಹಾಗೂ ಗೋಪಾಲರ ಆರಾಧನೆಗಳ ಪರಿಧಿಯಲ್ಲೇ ಸುತ್ತುವರೆಯುತ್ತದೆ.[೩೬] ಇಂದು ಈ ನಂಬಿಕೆಯು ಅತ್ಯಂತ ಮಹತ್ವದ್ದಾಗಿದ್ದು ಭಾರತ ದೇಶದವಲ್ಲದೇ ಹೊರ ರಾಷ್ಟ್ರಗಳೂ ಇದನ್ನು ಅನುಸರಿಸುತ್ತಿವೆ.[೩೭] ಕೃಷ್ಣನ ಪರಮ ಶ್ರೇಷ್ಠತ್ವವು ಕೃಷ್ಣ ಸಿದ್ಧಾಂತದ ಪ್ರಮುಖ ಪರಿಕಲ್ಪನೆಯಾಗಿದೆ. ರಾಧಾ ಕೃಷ್ಣನ ನ್ನು ಆರಾಧಿಸುವ ಸಂಪ್ರದಾಯಗಳಲ್ಲಿ ಗೌಡಿಯಾ ಪ್ರಮುಖವಾಗಿದ್ದು ಈ ಪರಿಕಲ್ಪನೆಯನ್ನು ಬೆಳೆಸಿದ್ದರಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.

 
ಕೃಷ್ಣನ ಇತರ ಸ್ವರೂಪಗಳಾದ ವಿಷ್ಣುವಿನ ಪರಿಪೂರ್ಣ ಅವತಾರಗಳಿಗೂ ಹಾಗೂ ಸ್ವಯಂ ಭಗವಾನ್ ಗೂ ಇರುವ ಸಂಬಂಧಗಳು ಸ್ವಯಂರೂಪದ ಪ್ರತ್ಯಕ್ಷ ನಿರೂಪಣೆಯಾಗಿದೆ.

ಗೌಡಿಯಾ ವೈಷ್ಣವ ದೃಷ್ಟಿ ಕೋನ ಬದಲಾಯಿಸಿ

ಅವತಾರಗಳ ಸಿದ್ದಾಂತ ಬದಲಾಯಿಸಿ

ಚೈತನ್ಯ ಅಥವಾ ಗೌಡಿಯಾ ಸಂಪ್ರದಾಯಗಳ ಮೂಲ ದೈವ ಶಾಸ್ತ್ರ ಸಿದ್ಧಾಂತವನ್ನು ಭಾಗವತ ಪುರಾಣ ಮತ್ತು ಚೈತನ್ಯ ಚರಿತಾಮೃತಗಳಲ್ಲಿ ವಿವರಿಸಲಾಗಿದೆ.[೩೮]ಸ್ವಯಂರೂಪ ದಲ್ಲಿನ ಸ್ವಯಂ ಎಂಬುದು ಕೇವಲ ಏಕತ್ವವನ್ನು ಮಾತ್ರವೇ ಸೂಚಿಸುವಂತದ್ದಲ್ಲ , ಬದಲಾಗಿ ಹಿಂದಿನ ಎಲ್ಲಾ ವೈಷ್ಣವ ಸಂಪ್ರದಾಯಗಳನ್ನೂ ಸೂಚಿಸುತ್ತದೆ. ಗೌಡಿಯ ವೈಷ್ಣವರ ನಂಬಿಕೆಗಳ ಪ್ರಕಾರ , ತದ್ ಏಕಾತ್ಮರೂಪ[೩೯] ( ಅಂದರೆ ಏಕತ್ವ ವನ್ನು ಮಾತ್ರ ಸೂಚಿಸುವುದಾಗಿದ್ದು ಬೇರೆ ಅಲ್ಲ ಎಂದರ್ಥ) ಎರಡನೇ ವರ್ಗಕೆ ಸೇರುತ್ತದೆ.[೪೦] "ಸ್ವಯಂ" ಅಂದರೆ ಬೇರೆಯವರನ್ನು ಅವಲಂಬಿಸದಿರುವುದು ಅಥವಾ ತನ್ನನ್ನು ಅವಲಂಬಿಸಿರುವುದು ಎಂದರ್ಥ.

[೨೦] ಕಾಶಿಯಲ್ಲಿ ಚೈತನ್ಯ ಮಹಾಪ್ರಭು ರವರು ಸನಾತನ ಗೋಸ್ವಾಮಿಯವರಿಗೆ ಉಪದೇಶ ಮಾಡುವ ಸಮಯದಲ್ಲಿ ವೇದಾಂತಿ ಯ ವಚನವನ್ನು ಹೀಗೆ ವಿವರಿಸುತ್ತಾರೆ:" ಬ್ರಾಹ್ಮಣ ಎಂಬ ಪದವು ಸ್ವಯಂ ಭಗವಾಂನ ನನ್ನು ಸೂಚಿಸುವುದಾಗಿದ್ದು (ಗುಪ್ತಾ 2007, ಪು 36).[೧]

ಚಿತ್ರ:UdupiTulasiKrsna.jpg
ಉಡುಪಿಯಲ್ಲಿ ತುಳಸಿ ಕೃಷ್ಣನ ದೈವತ್ವ. ಮಧ್ವಾಚಾರ್ಯನ ಅನುಯಾಯಿಗಳು ಪೂಜಿಸಲ್ಪಟ್ಟ ಪ್ರಮುಖ ದೇವತೆ ಕೃಷ್ಣ.

ರೂಪಾ ಗೋಸ್ವಾಮಿ ಅವರು svayaṁ-rūpa ಹೀಗೆ ವಿವರಿಸಿದ್ದಾರೆ Laghu-bhāgavatāmṛta :[೪೧] "ಇತರ ಯಾವುದೇ ಸ್ವರೂಪಗಳನ್ನು ಅವಲಂಬಿಸದೇ ದೈವತ್ವದ ಪರಮಶ್ರೇಷ್ಥ ವ್ಯಕ್ತಿತ್ವದ ಸ್ವರೂಪವನ್ನು ಮೂಲ ಸ್ವರೂಪಎಂದು ಕರೆಯುವರು."[೩೯][೪೨]

ತದ್ ಏಕಾತ್ಮ-ರೂಪ ಸ್ವರೂಪಗಳನ್ನೂ ವಿವರಿಸಲಾಗಿದೆLaghu-bhāgavatāmṛta [೪೨][೪೩]

"ತದ್ -ಏಕಾತ್ಮರೂಪವು ಏಕಕಾಲದಲ್ಲಿ ಎಲ್ಲಾ ಸ್ವರೂಪಗಳ ಒಂದೇ ರೂಪವಾಗಿದ್ದು ಯಾವುದೇ ಬೇಧವನ್ನು ಹೊಂದಿಲ್ಲ.[೩೯] ಆದರೆ ಅದೇ ಸಮಯದಲ್ಲಿ ಅವರ ದೈಹಿಕ ಗುಣಲಕ್ಷಣಗಳು ಮತ್ತು ನಿರ್ದಿಷ್ಟ ಚಟುವಟಿಕೆಗಳು ಭಿನ್ನವಾಗಿದ್ದಂತೆ ತೋರುತ್ತವೆ."

ಸೃಷ್ಟಿಯ ಕುರಿತು ನಮಗೆ ತಿಳಿದಿರುವ ಎರಡು ಅತ್ಯುತ್ತಮ ವೈದಿಕ ವಿವರಣೆಗಳೆಂದರೆ ಪುರುಷಸೂಕ್ತ ಹಾಗೂ ನಸಾದಿಯ ಸೂಕ್ತ. ಇವುಗಳಲ್ಲಿ ಒಂದು ಶ್ಲೋಕವು ಎಲ್ಲವನ್ನೂ ಸೃಷ್ಟಿಸುವ ವಿಶ್ವಕರ್ಮನ ಕುರಿತು ಹೇಳುತ್ತದೆ. ವೈಷ್ಣವರ ನಂಬಿಕೆಯ ಪ್ರಕಾರ ಋಗ್ವೇದ (10.82) ದ ವಿಶ್ವಕರ್ಮ ಸೂಕ್ತ ವು ಪರೋಕ್ಷವಾಗಿ ಭಗವಂತನ ಪರಮಶ್ರೇಷ್ಠತೆಯನ್ನು ಸೂಚಿಸುತ್ತದೆ: ವಾಸ್ತವವಾಗಿ ದ್ರವಗಳು ಮೊಟ್ಟಮೊದಲಿನ ಭ್ರೂಣದಲ್ಲಿ ಎಲ್ಲಾ ದೇವತೆಗಳನ್ನೂ ಒಗ್ಗೂಡಿಸಿತು,ಇವು ಒಂದಾಗಿ ಇನ್ನೂ ಜನಿಸದೇ ಇರುವ (ಅಜ) ವನ ನಾಭಿಯಲ್ಲಿ ಸೇರಿಕೊಂಡವು, ಇದರಲ್ಲಿ ಎಲ್ಲಾ ಜೀವರಾಶಿಗಳೂ ಅಡಕವಾದವು.[೪೪] ಗೌಡಿಯರ ಪ್ರಕಾರ ತದ್-ಏಕಾತ್ಮರೂಪ ದ ವರ್ಗಕ್ಕೆ ಸೇರುತ್ತದೆ.[೩೯]

ಗೌಡಿಯ ವೈಷ್ಣವದ ಅರ್ಥವಿವರಣೆಯ ಪ್ರಕಾರ ಹಾಗೂ ಭಗವದ್ಗೀತೆ (7.7)ರಲ್ಲಿ ಹೇಳಿರುವಂತೆmattaḥ parataraṁ nānyat : "ನನಗಿಂತಲೂ ಪರಮಶ್ರೇಷ್ಠವಾದ ಸತ್ಯ ಇನ್ನೊಂದಿಲ್ಲ". ಇಲ್ಲಿ ಕೃಷ್ಣನೇ "ಭಗವಂತ" ನಾಗಿದ್ದು ಉಳಿದ ಎಲ್ಲಾ ದೇವತೆಗಳು ಆತನ ಅಪೂರ್ಣ ಪ್ರಕಟಣೆಗಳಾಗಿವೆ. ಈ ಕಲ್ಪನೆಭಾಗವತ ಪುರಾಣದಲ್ಲಿ ಬಿಂಬಿತವಾಗುತ್ತದೆ. ಬ್ರಹ್ಮ ವೈವತ್ರ ಪುರಾಣ ವು ಕೃಷ್ಣನೇ ಅಂತಿಮ ಮೂಲವಾಗಿದ್ದು ಬ್ರಹ್ಮ, ವಿಷ್ಣು, ಶಿವ ಮತ್ತು ಪ್ರಕೃತಿ ಎಲ್ಲದಕ್ಕೂ ಈತನೇ ಮೂಲ ಕಾರಣವಾಗಿದ್ದಾನೆ. ಆತನೇ ಸ್ವಯಂ ಭಗವಂತ ನಾದ್ದರಿಂದ ಇತರ ಅವತಾರಗಳು ಆತನ ಅಪೂರ್ಣ ಪ್ರಕಣೆಗಳಾಗಿವೆ. ಶ್ರೀಧರ ಸ್ವಾಮಿ ಯವರ (ಶಂಕರರ ಕಾಲದ ವ್ಯಾಖ್ಯಾನಕಾರರು) ವ್ಯಾಖ್ಯಾನಗಳು ಕೃಷ್ಣನ ಅದ್ವೀತಿಯತ್ವವನ್ನು ಸಾರುತ್ತವೆ. ಅವರ ಅಭಿಪ್ರಾಯದಂತೆ ಕೃಷ್ಣನಲ್ಲಿ ಎಲ್ಲಾ ಶಕ್ತಿಗಳೂ ಅಡಕವಾಗಿದ್ದು ಆತನೇ ಪರಿಪೂರ್ಣನಾದ ಭಗವಂತನಾಗಿದ್ದಾನೆ.[೪೫]ಅಥರ್ವವೇದ ಸಂಹಿತ ದಲ್ಲಿ ಕೃಷ್ಣನು ಕೇಶಿ ಎಂಬ ರಾಕ್ಷಸನನ್ನು ಕೊಂದಿದ್ದರಿಂದ ಆತನನ್ನು ಕೇಶವ ಎಂದು ವಿವರಿಸಲಾಗಿದೆ. ಸಂಧ್ಯಾರಾಧನೆಗೆ ಸಂಬಂಧಿಸಿದ ಬ್ರಾಹ್ಮಣಾಚ್ಚಾಂಸಿನ್ ಅರ್ಚಕರಾದ ಕೌಷ್ಟಿಕಿ ಬ್ರಾಹ್ಮಣ (30.9) ರು ಕೃಷ್ಣನ ಅಂಗೀರಸವನ್ನು ಪ್ರಸ್ತಾಪಿಸಿದ್ದಾರೆ. ಐತಾರೇಯ ಆರ್ಯಾಂಕರು ಹಾರಿತ ಗೋತ್ರದ ಇಬ್ಬರು ಕೃಷ್ಣರ ಕುರಿತು ಹೇಳುತ್ತಾರೆ..[೪೫] ಆದರೆ ದಕ್ಷಿಣ ಭಾರತದ ವೈಷ್ಣವ ಸಿದ್ಧಾಂತವು ಕೃಷ್ಣನ ಬಗ್ಗೆ ಕಡಿಮೆ ಒತ್ತು ಕೊಡುತ್ತದೆ ಮತ್ತು ಇತರ ಸಂಪ್ರದಾಯಗಳಿಗೆ ಹೋಲಿಸಿದಾಗ ರಾಧೆ ಯನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತದೆ.[೪೫]

ಗೌಡಿಯ ಸಂಪ್ರದಾಯದ ಪ್ರಕಾರ ಭಕ್ತಿ-ಯೋಗ ವು ಭಗವದ್ಗೀತೆ[೪೬] ಯಲ್ಲಿ ಹೇಳಿರುವಂತೆ ಒಂದು ರಹಸ್ಯಾತ್ಮಕ ಸಂಗತಿಯಾಗಿದೆ-" ಭಗವದ್ಗೀತೆಯಲ್ಲಿರುವ ಅತ್ಯುನ್ನತ ರಹಸ್ಯ ಉಪದೇಶಗಳನ್ನು ಮತ್ತೊಮ್ಮೆ ನನ್ನಿಂದ ತಿಳಿದುಕೊಳ್ಳಿರಿ."[೪೬] ಹಾಗೆಯೇ ಇದನ್ನುಇಸ್ಕಾನ್ ನ ಭಾಗವತ ಪುರಾಣ[೪೭] ವೈಷ್ಣವರಲ್ಲಿ ವಿವರಿಸಲಾಗಿದ್ದು ಕೆಲವೊಮ್ಮೆ ಇವರ ಅಭಿಪ್ರಾಯಗಳು ಕೃಷ್ಣನು ತನ್ನ ಬಗ್ಗೆ ಹೇಳಿಕೊಳ್ಳುವ ಅಹಂ ಮತ್ತು ನನ್ನನ್ನು ಅಂದರೆ ಸಂಸ್ಕೃತ ದಲ್ಲಿ ನಾನು ಮತ್ತು ನನ್ನನ್ನು' ಎಂಬುದರ ಬಗ್ಗೆ ಒತ್ತು ಕೊಡುತ್ತವೆ. ಆದರೆ ಕೆಲವು ವಿಮರ್ಶಕರು ಇದಕ್ಕೆ ದ್ವಿತೀಯಕ ಅರ್ಥವನ್ನು ಕಲ್ಪಿಸುತ್ತಾ, ,[೪೮] ನಾನು ಮತ್ತು ನನ್ನನ್ನು ಎಂಬ ನೇರ ಅರ್ಥವನ್ನು ಹೊರತುಪಡಿಸಿದರೆ ಎಲ್ಲಾ ಪ್ರಮುಖ ಸಂಸ್ಕೃತ ಶಬ್ದ ಕೋಶಗಳೂ ಕೃಷ್ಣನನ್ನು ಮಾತ್ರವೇ ಸೂಚಿಸುತ್ತವೆ.[೪೯]

 
ಕೃಷ್ಣ ಹಾಗೂ ಬಲರಾಮರು ಅವರ ತಂದೆ ತಾಯಿಯರನ್ನು ಭೇಟಿ ಮಾಡಿದ್ದು - ವಾಸುದೇವ ಹಾಗೂ ದೇವಕಿ. ಕೃಷ್ಣನ ಇನ್ನೊಂದು ಹೆಸರು ವಾಸುದೇವ ಅಥವಾ ವಾಸುದೇವನ ಮಗ, ಹಾಗೂ ದೇವಕೀನಂದನ, ದೇವಕಿ ಮಗ. ರಾಜಾ ರವಿ ವರ್ಮನ ವರ್ಣ ಚಿತ್ರ

ಲಕ್ಷ್ಮಿ ಬದಲಾಯಿಸಿ

ಆದರೆ ಗೌಡಿಯಾ ವೈಷ್ಣವರು ಕೃಷ್ಣನೇ ಸ್ವಯಂ ಭಗವಂತ ನೆಂದು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ.

[೫೦] ಇತರ ಸಂಪ್ರದಾಯಗಳಲ್ಲಿ ಪರಮ ಶ್ರೇಷ್ಠವಾದ ವಿಷ್ಣುವಿನಂತಹ ಇತರ ಸ್ವರೂಪಗಳನ್ನು ಒಳಗೊಂಡ ಅನೇಕ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಜೀವ ಗೋಸ್ವಾಮಿಯವರು ಬರೆದಿರುವ ಭಗವತ್ ಸಂದರ್ಭ Archived 2011-02-16 ವೇಬ್ಯಾಕ್ ಮೆಷಿನ್ ನಲ್ಲಿ. ಹಾಗೂ ತತ್ವ ಸಂದರ್ಭ Archived 2011-02-16 ವೇಬ್ಯಾಕ್ ಮೆಷಿನ್ ನಲ್ಲಿ. ಗಳಲ್ಲಿ ಉಲ್ಲೇಖಿಸಿರುವಂತೆ,[೧] " ಕೃಷ್ಣ ಮತ್ತು ವಿಷ್ಣುವೇ ಪರಮಶ್ರೇಷ್ಠವಾದಲ್ಲಿ ವೈಷ್ಣವರು ತಮ್ಮಲ್ಲೇ ವಾದಗಳನ್ನು ಮಾಡಿಕೊಳ್ಳುವುದು ಸರಿಯಲ್ಲ". ಇದು ಭಗವಂತನೊಂದಿಗೆ ಒಬ್ಬನಿಗಿರುವ ಸಂಬಂಧ ಎಂದು ಅವರು ಅಭಿಪ್ರಾಯ ಪಡುತ್ತಾರೆ. ರಸ ದೇವಶಾಸ್ತ್ರದ ಪ್ರಕಾರ ಕೆಲವರು ವಿಷ್ಣುವಿನೊಂದಿಗೆ ಸಂಬಂಧವನ್ನು ಇಟ್ಟುಕೊಂಡರೆ,ಇನ್ನು ಕೆಲವರು ಕೃಷ್ಣನೊಂದಿಗೆ ಕೆಲವರು ರಾಮನೊಂದಿಗೆ ಇತ್ಯಾದಿ ರೀತಿಯಲ್ಲಿರುತ್ತದೆ. ಚೈತನ್ಯ ಚರಿತಾಮೃತ ದಲ್ಲಿ [೫೧] ಚೈತನ್ಯಪ್ರಭುರವರು ವೆಂಕಟ ಭಟ್ಟ ರವರೊಂದಿಗೆ ಶ್ರೀ ಸಂಪ್ರದಾಯದ ಕುರಿತು ವ್ಯಂಗ್ಯವಾಗಿ ಚರ್ಚಿಸುತ್ತಾರೆ.[೫೨] ಆದರೆ ಪುಷ್ಟಿ ಮಾರ್ಗ ಸಂಪ್ರದಾಯವು ರಾಧೆಯ ಆರಾಧನೆಯಲ್ಲಿ ಗೌಡಿಯ ವೈಷ್ಣವ ಸಿದ್ಧಾಂತವನ್ನು ಮರುಕಳಿಸುವಂತೆ ಮಾಡುತ್ತದೆ.

[೫೩] 1509-10ರಲ್ಲಿ ಚೈತನ್ಯರವರು ದಕ್ಷಿಣ ಭಾರತದ ಪ್ರವಾಸವನ್ನು ಕೈಗೊಂಡ ಸಮಯದಲ್ಲಿ ,ಶ್ರೀರಂಗಂ ನ ಅರ್ಚಕರಾದ ಗೋಪಾಲ ಭಟ್ಟರ ತಂದೆಯವರಾದ ವೆಂಕಟ ಭಟ್ಟರ ಮನೆಯಲ್ಲಿ ತಂಗುತ್ತಾರೆ. ವೆಂಕಟ ಮತ್ತು ಆತನ ಸಹೋದರಾದ ಗೊಪಾಲನ ಚಿಕ್ಕಂಪ್ಪಂದಿರಾದ ತ್ರಿಮ್ಮಲ ಮತ್ತು ಪ್ರಭೋಧಾನಂದ ಸರಸ್ವತಿ ಯವರು ತಮ್ಮ ಶ್ರೀ ವೈಷ್ಣ ವದ ನಂಬಿಕೆಯಾದ ಲಕ್ಷ್ಮಿ-ನಾರಾಯಣ ಸಿದ್ಧಾಂತವನ್ನು ತೊರೆದು ರಾಧಾಕೃಷ್ಣ ರ ಪರ್ಮಶ್ರೇಷ್ಠತೆಯೇ ಸ್ವಯಂ ಭಗವಾನ್ ಎಂಬ ನಂಬಿಕೆಯನ್ನು ಸ್ವೀಕರಿಸಿದರು.[೫೩] ಈ ಚರ್ಚೆಯ ಸಂಭಾಷಣೆಯು 16c ನಲ್ಲಿ ದಾಖಲಿಸಲ್ಪಟ್ಟಿದೆ. ಕೃಷ್ಣ ದಾಸ ಕವಿರಾಜನ ಚೈತನ್ಯ ಚರಿತಾಮೃತ ಜೀವನ ಚರಿತ್ರೆ .[೫೨]

ಚೈತನ್ಯ ಚರಿತಾಮೃತದ ಮಧ್ಯ ಲೀಲದಲ್ಲಿರುವ ಒಂದು ಮಂಡನೆಯಂತೆ,[೫೪]ಭಾಗವತ ಪುರಾಣ ದ ಒಂದು ಹತ್ತನೆಯ ಪರಿಚ್ಛೇಧದ ಒಂದು ಉಲ್ಲೇಖದ ಪ್ರಕಾರ ಲಕ್ಷಿ ಯನ್ನು ಏಕೆಶ್ರೀ(ಈ ಕಾರಣದಿಂದ ಶ್ರೀ ಸಂಪ್ರದಾಯ ಎಂಬ ಹೆಸರು ಬಂದಿತು) ಎಂದು ಕರೆಯಲಾಯಿತು ಎಂಬುದರ ಬಗ್ಗೆ ವಿವರಿಸುತ್ತಾ, ಆಕೆಯ ಮಹತ್ವಾಕಾಂಕ್ಷೆಯ ಹೊರತಾಗಿಯೂ ಬೃಂದಾವನ .{ಲೋಕವನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂಬುದನ್ನು ವಿವರಿಸುತ್ತದೆ.{5/}

ಒಬ್ಬ ಶ್ರೀ ಸಂಪ್ರದಾಯ ಸನ್ಯಾಸಿ ಯಾಗಿದ್ದ ಪ್ರಬೋಧಾನಂದ ಸರಸ್ವತಿ ಯವರು ಲಕ್ಷ್ಮಿ-ನಾರಾಯಣನಿಗೆ ಬದಲಾಗಿ ರಾಧಾ-ಕೃಷ್ಣ ನೇ ಪರಮಶ್ರೇಷ್ಥನಾಗಿದ್ದು ಸ್ವಯಂ ಭಗವಂತನಾಗಿದ್ದಾನೆ ಎಂದು ನಂಬಿ ಆ ಆಚಾರಕ್ಕೆ ತಮ್ಮನ್ನು ಬದಲಾಯಿಸಿಕೊಂಡರು. ಇಷ್ಟೇ ಅಲ್ಲದೆ ಚೈತ್ಯನ್ಯರ ರಾಧೆಯ ಉಪಾಸನೆಯ ಪರಶ್ರೇಷ್ಠತೆಯನ್ನು ಇವರು ಪ್ರಶಂಸಿಸಿದಂತೆ ಕಾಣುತ್ತದೆ.[೫೫]

ಸೃಷ್ಟಿ ಶಾಸ್ತ್ರದ ಅಭಿಪ್ರಾಯ ಬದಲಾಯಿಸಿ

ಸ್ವರ್ಗ ದ ಬಗ್ಗೆ ದಕ್ಷಿಣ ಭಾರತದ ವೈಷ್ಣವ ಸಮುದಾಯಕ್ಕೆ ಇರುವ ಅಭಿಪ್ರಾಯ,ಅಥವಾ ಮಾರ್ಮಿಕವಾದ ಸೃಷ್ಟಿಯ ನಿರ್ಮಾಣವು ನಾರಾಯಣ ನ ಗ್ರಾಂಥಿಕ ವಿವರಗಳನ್ನು ಆಧಾರಗೊಂಡಿದೆ ಅಥವಾ ವಿಷ್ಣುವೇ ಸೃಷ್ಟಿಗೆ ಕಾರಣ ಕರ್ತನಾಗಿದ್ದರಿಂದ ಇದನ್ನು ವಿರಾಜದವರೆಗೂ ವಿಸ್ತರಿಸಲಾಗಿದೆ ಹಾಗೂMaha-Viṣṇu ಸೃಷ್ಟಿ ಕಾರ್ಯದ ವಾಸ್ತವ ಆರಂಭವಾದ ಪ್ರಧಾನ , ಕಡೆಗೆ ಸ್ವಲ್ಪ ಒತ್ತನ್ನು ಕೊಡಲಾಗಿದೆ ಈ ಅಭಿಪ್ರಾಯವು ಕೃಷ್ಣ-ಕೇಂದ್ರಿತ ವೈಷ್ಣವ ಸಿದ್ದಾಂತವನ್ನು ವಿರೋಧಿಸುವುದಿಲ್ಲ ಮತ್ತು ಸೃಷ್ಟಿಯ ಮೂಲವಾದ ಪಂಚತಂತ್ರದ ಪ್ರಕಾರ ಸ್ವಯಂ ಭಗವಂತ ನಾದ ವಾಸುದೇವ ಕೃಷ್ಣನು ವಾಸುದೇವನ ಮಗ) ಎಂಬ ಅಭಿಪ್ರಾಯದ ಬಗ್ಗೆಯೂ ಯಾವುದೇ ವಿರೋಧವನ್ನು ವ್ಯಕ್ತ ಪಡಿಸುವುದಿಲ್ಲ.

ಪಂಚತಂತ್ರದ ಮೂಲಗಳನ್ನು ಎಲ್ಲಾ ವಿಷ್ಣುವಿನ ಸಂಪ್ರದಾಯಗಳೂ ಒಪ್ಪಿಕೊಳ್ಳುತ್ತವೆ ಮತ್ತುರಾಮಾನುಜರಿಗಿಂತ ಮುಂಚೆ ಇದ್ದ ಯಮುನಾಚಾರ್ಯ ರು ತಮ್ಮ ಆಗಮ ಪ್ರಮಾನ್ಯ ದಲ್ಲಿ ಸಂಕ್ಷಿಪ್ತವಾಗಿ ವಿವರಿಸುತ್ತಾ , ರಕ್ಷಣಾತ್ಮವಾದ ತಾಂತ್ರಿಕ ವೈಷ್ಣವ ಪಂಚತಂತ್ರವು , ವೇದಗಳ ಭಾಗವಾಗಿ ಎಲ್ಲಾ ಗ್ರಂಥಗಳನ್ನೂ ಸಂರಕ್ಷಿಸುತ್ತವೆ: ಪಂಚತಂತ್ರವು ವೈದಿಕ ಶ್ಲೋಕಗಳಂತೆ ಅಧಿಕಾರಯುತವಾಗಿದ್ದು ಭೂಮಿಯ ಮೇಲಿನ ಎಲ್ಲಾ ದೋಷಗಳನ್ನೂ ಪರಿಹರಿಸುವ ಜ್ಞಾನದ ಮೂಲವಾಗಿದೆ. ಅಮಲಾನಂದರೂ ಸಹ ಪಂಚತಂತ್ರವನ್ನು ಸಮರ್ಥಿಸುತ್ತಾರೆ,ಆದರೆ ನಾಲ್ಕು ವೇದಗಳ ಪ್ರಕಾರ ನಿರ್ಲಿಂಗರು ಸ್ವಯಂ-ಅಧಿಕೃತ ಆಧಾರವನ್ನು ಹೊಂದಿಲ್ಲ, ಆದರೆ ವೇದಗಳುವಾಸುದೇವನ ಸರ್ವಾಂತರ್ಯಾಮದ ಬಗ್ಗೆ ಸಾಕ್ಷಿ ಕೊಡುತ್ತವೆ. ಈ ಹಂತವು ಭಗವತ್ ಪುರಾಣ ಆಧಾರಿತ ದೈವ ಶಾಸ್ತ್ರದ ಮೂಲವೂ ಆಗಿದೆ.[೫೬]

ಗೌಡಿಯ ವೈಷ್ಣವರ ಪ್ರಕಾರ ಸನಾತನ ಗೋಸ್ವಾಮಿಯವರ ಬೃಹತ್ ಭಾಗವತ ಮಿತ್ರ ವು ಈ ತತ್ವವನ್ನು ಉದಾಹರಣೆಯೊಂದಿಗೆ ವಿವರಿಸುತ್ತದೆ, ಇದು ವೈಷ್ಣವ ಪಂಚತ್ರಂತದಲ್ಲಿದ್ದಂತೆ ಅವತಾರ ಅಥವಾ ಸೃಷ್ಟಿ ಶಾಸ್ತ್ರದಲ್ಲಿದ್ದಂತೆ ಇಲ್ಲದೆ ,ಆದಿ-ರಸ ಸೃಷ್ಟಿ ಶಾಸ್ತ್ರದ ಪದಗಳಲ್ಲಿ ವಿವರಿಸಲ್ಪಟ್ಟಿದೆ.[೫೭] ನಾಲ್ಕು ಧಾಮಗಳ ಸೃಷ್ಟಿ ತತ್ವ( ಕಡೆಯ ಎರಡಕ್ಕೆ ಪ್ರತ್ಯೇಕ ಸ್ಥಾನಗಳಿವೆ: ತದ್ ಏಕಾತ್ಮ ಸ್ವರೂಪನಾದ ವಿಷ್ಣು ಅಥವಾ ನಾರಾಯಣನ ವಾಸಸ್ಥಾನವಾದ ವೈಕುಂಠ , ಮತ್ತು ಸ್ವಯಂ ಭಗವಂತ ನ ವಾಸ ಸ್ಥಾನವಾದ ಗೋಲೋಕ ವು ರೇಖಾ ನಕ್ಷೆಯ ಮೂಲವಾಗಿದೆ ,ಆದರೆ ಇದು ಈ ಇಕ್ಕಟ್ಟಿಗೆ ಉತ್ತರವನ್ನು ಕೊಡುತ್ತದೆ.[೫೮]ಬೃಹತ್ ಭಾಗವತಮಿತ್ರ ನ ಸೃಷ್ಟಿ ಶಾಸ್ತ್ರದ ಪ್ರಕಾರ ಕೃಷ್ಣನೇ ಸೃಷ್ಟಿಯ ಮೂಲವಾಗಿದ್ದಾನೆ ಮತ್ತು ಎಲ್ಲಾ ರಸಗಳಲ್ಲೂ ಅಥವಾ ಮಾಧುರ್ಯಗಳಲ್ಲೂ ಆತನೇ ಇದ್ದು ಪರಿಪೂರ್ಣನಾಗಿದ್ದಾನೆ , ವಾಸ್ತವವಾಗಿ ಯಾವುದರಲ್ಲೂ ತನ್ನನ್ನು ತೊಡಗಿಸಿಕೊಳ್ಳದೇ , ಆತನು ತನ್ನ ಮೂಲ ಸ್ವರೂಪದಲ್ಲಿದ್ದು ,ತನ್ನ ಚಿಹ್ನೆಗಳನ್ನು ಹೊತ್ತುViṣṇu, ತನ್ನದೇ ಆದ ಕೊಳಲನ್ನು ಹೊಂದಿರುವ ಆತನು ತನ್ನ ಭಕ್ತರ ಪರಮಾನಂದದ ಮೂಲವಾಗಿದ್ದಾನೆ.[೫೯]

ವೇದಗಳ ಮೂಲ ಪುರುಷ ಬದಲಾಯಿಸಿ

ಅವರಿಗೆ ತಿಳಿದಿರುವ ಪ್ರಾಚೀನ ಆಧಾರಗಳಲ್ಲಿ ನಾರಾಯಣ ಸ್ವರೂಪವನ್ನು ಯಜ್ಞದ ಪರಿಕಲ್ಪನೆಯ ಜೊತೆಗೆ ಸಂಬಂಧಿಸಲಾಗಿದೆ. ಪುರುಷಸೂಕ್ತದಂತಹ ವೈದಿಕ ಮೂಲಗಳಲ್ಲಿ ನಾರಾಯಣನಿಗೆ ಋಗ್ವೇದದ ಅತ್ಯುನ್ನತ ಜಗದ ಬಲಿಯಾದ ಸ್ವಯಂ-ಯಜ್ಞ( ಬಲಿ) ಎಂಬ ಹೆಸರನ್ನು ನೀಡಲಾಗಿದೆ.[೬೦] ನಾರಾಯಣ ಎಂಬ ಹೆಸರು ಋಗ್ವೇದದಲ್ಲಿ ಮಾತ್ರವೇ ಉಲ್ಲೇಖಿತವಾಗಿರದೆ , ಈ ಶ್ಲೋಕವನ್ನು ರಚಿಸಿದ ವ್ಯಕ್ತಿ ಆತನನ್ನು ಒಬ್ಬ ಮುನಿ ಅಥವಾ ತಪಸ್ವಿ ಎಂದು ಹೇಳಿದ್ದಾನೆ. ಪುರುಷ ಸೂಕ್ತ ಶ್ಲೋಕವನ್ನು ರಚಿಸಿದ ಮುನಿಯು ತಾನು ಪುರುಷನ ಸ್ತೋತ್ರ ಗೀತೆಯನ್ನು ಹಾಡುತ್ತಾ ಅದರಲ್ಲೇ ತಲ್ಲೀನನಾದ ಸಾಧ್ಯತೆಗಳೂ ಇವೆ. ಈತನೇ ನಂತರದಲ್ಲಿ ಆರಾಧನೆಯ ವಸ್ತುವಾಗಿರಬಹುದು ಎಂದು ಭಾವಿಸಲಾಗಿದೆ. ನಾರಾಯಣ ಎಂಬ ದಿವ್ಯ ಮುನಿಯ ಹೆಸರು ಆತನ ಪ್ರತಿರೂಪವಾದ ನರ ಎಂಬ ಹೆಸರಿನೊಂದಿಗೆ ಅನೇಕ ಪುರಾಣಿಕ ಗ್ರಂಥಗಳಲ್ಲಿ ಕಾಣಿಸಿಕೊಳ್ಳುತ್ತದೆ.[೬೧] ಋಗ್ವೇದ ದಲ್ಲಿ ವಿಷ್ಣುವಿನೊಂದಿಗೆ ಪುರುಷ ಎಂಬ ಪರಿಕಲ್ಪನೆಯೂ ಸಹ ಇದ್ದು, ಇದಕ್ಕನುಸಾರವಾಗಿ ವೈಷ್ಣವ ಸಿದ್ಧಾಂತದ ಅನೇಕ ಸಂಪ್ರದಾಯಗಳು ಇದನ್ನು ವಿವರಿಸಿವೆ. ಭಗವದ್ಗೀತೆಯಲ್ಲಿ ಈತನನ್ನು " ತ್ಯಾಗ ಸ್ವರೂಪಿಯಾದ ಭಗವಂತ, ಯಜ್ಞ ಪುರುಷ"[೧೯][೬೨][೬೩][೬೪] ಎಂದು ವಿವರಿಸಲಾಗಿದೆ. ಆದ್ದರಿಂದ ಕೆಲವರು ಋಗ್ವೇದ ದ ಈ ವಚನವನ್ನು ವೈಷ್ಣವ ಸಂಪ್ರದಾಯದ ಬುನಾದಿ ಎಂದು ನಂಬುತ್ತಾರೆ. ಗೋಪಾಲ ತಪಾನಿ ಉಪನಿಷತ್ ನಲ್ಲಿ ಋಗ್ವೇದದ ವಚನ(1.22.20) ವನ್ನು ಗೌಡಿಯ ವೈಷ್ಣವರ ನಂಬಿಕೆಯ ಪ್ರಕಾರ ವೈದಿಕ ಕೀರ್ತನೆಯ ಮೂಲ ಎಂದು ವಿವರಿಸಲಾಗಿದೆ:[೬೫] ಇದು ಗೌಡಿಯ ವೈಷ್ಣವ ರ ಒಂದು ನಿರ್ದಿಷ್ಟ ಅಭಿಪ್ರಾಯವನ್ನು ಬಿಂಬಿಸುತ್ತದೆ ಮತ್ತು ವಲ್ಲಭ ಸಂಪ್ರದಾಯವು ವಿಷ್ಣುವಿನ ಆರಾಧನೆಯ ಅಂತಿಮ ಸ್ಥಿತಿಯು ಗೋಪ-ರೂಪ ನ ಆರಾಧನೆ ಅಥವಾಕೃಷ್ಣನ ನಿರ್ದಿಷ್ಟ ಆರಾಧನೆಯನ್ನು ನಂಬುತ್ತದೆ.[೧೮][೬೬]

ಕೃಷ್ಣ ಉಪನಿಷತ್ತು ಗೋಪಾಲ ತಪಾನಿಯ ಈ ಅಂತ್ಯವನ್ನು ಬೆಂಬಲಿಸುತ್ತದೆ ,[೬೭] ಮತ್ತು ಗೋಪ-ರೂಪ ನಾದ ಸಾಕ್ಷಾತ್ ಹರಿಯ " ಅದ್ವಿತೀಯ ದೈವಿಕ ಪರಮಾನಂದವು ಭಗವಂತನಾದ ಕೃಷ್ಣನ ಪರಮಶ್ರೇಷ್ಠ ಪ್ರೀತಿಯಲ್ಲಿ ಅಡಕವಾಗಿದೆ",[೬೮] ಎಂಬುದನ್ನು ವಿವರಿಸುತ್ತದೆ. 1,294,765 [೬೯]

ಪರಮಶ್ರೇಷ್ಠನಾದ ದೇವಮಾನವನು ತನ್ನ ನಿಜ ಸ್ವರೂಪವನ್ನು ಒಬ್ಬ ದನಕಾಯುವ ಹುಡುಗನ ರೂಪದಲ್ಲಿ ವ್ಯಕ್ತಪಡಿಸಿದನು.

ಆತನ ಮಾಯಾ ಶಕ್ತಿಯಿಂದ ದಿಗ್ಭ್ರಮೆಗೊಂಡ ಜಗತ್ತು ಆತನ ನಿಜ ಸ್ವರೂಪವನ್ನು ಕಂಡುಕೊಳ್ಳಲಿಲ್ಲ.

"ಎಲ್ಲಾ ದೇವತೆಗಳು ಎಂದಾದರೂ ಭಗವಂತನ ಮಾಯಾಶಕ್ತಿಯನ್ನು ಪರಾಭವಗೊಳಿಸುವುದು ಅಸಾಧ್ಯ".

ಭಗವಂತನ ಯೋಗ ಮಾಯ ಶಕ್ತಿಯಿಂದ ಬ್ರಹ್ಮನು ಒಂದು ಕೋಲು ಆಗುತ್ತಾನೆ ಮತ್ತು ಶಿವನು ಒಂದು ಕೊಳಲಿನ ರೂಪವನ್ನು ಪಡೆಯುತ್ತಾನೆ. ಭಗವಂತನ ಮಾಯಾ ಶಕ್ತಿಯ ಇಡೀ ವಿಶ್ವದಲ್ಲಿ ಹೇಗೆ ವ್ಯಕ್ತವಾಗುತ್ತದೆ?

"ಜ್ಞಾನವೇ ದೇವತೆಗಳ ಶಕ್ತಿಯಾಗಿದೆ.

ಒಂದೇ ಕ್ಷಣದಲ್ಲಿ ಭಗವಂತನ ಮಾಯಾ ಶಕ್ತಿಯು ಎಲ್ಲಾ ಜ್ಞಾನವನ್ನೂ ಕಸಿದುಕೊಳ್ಳುತ್ತದೆ. ಭಗವಂತನಾದ ಸೇಶಾಂಗನು ತನ್ನ ಮೂಲ ಸ್ವರೂಪವಾದ ಭಗವಂತನಾದ ಬಲರಾಮನಾಗಿ ಕಾಣಿಸಿಕೊಂಡನು. ಪರಮ ಸ್ವರೂಪಿಯಾದ ದೇವಮಾನವನು ತನ್ನ ನಿಜಸ್ವರೂಪವಾದ ಭಗವಂತನಾದ ಕೃಷ್ಣನ ರೂಪದಲ್ಲಿ ಪ್ರತ್ಯಕ್ಷನಾದನು."[೧೮][೭೦]

ಇತರ ಸ್ವರೂಪಗಳಲ್ಲಿ ಕೃಷ್ಣನನಲ್ಲಿ ಇರುವ ಗುಣಲಕ್ಷಣಗಳನ್ನು ಕಾಣಲು ಸಾಧ್ಯವಿಲ್ಲವೆಂದು ಗೌಡಿಯ ವೈಷ್ಣವರು ನಂಬುತ್ತಾರೆ. ಮತ್ತು ಅವರು ಮಾಧುರ್ಯವನ್ನು ಆತನ ಬೃಂದಾವನ ಲೀಲೆಯೊಂದಿಗೆ ಹೋಲಿಸುತ್ತಾರೆ. ಕೃಷ್ಣ ಆತನೇ ನಾರಾಯಣ.[೭೧] ಕೆಲವುಮ್ಮೆ ನಾರಾಯಣನನ್ನು ಪರಮೋಚ್ಛನಾಗಿ ಗುರುತಿಸಲಾಗುತ್ತದೆ.ಆದರೆ ಆತನ ಸೌಂದರ್ಯ ಹಾಗೂ ಮಾಧುರ್ಯ ವನ್ನು ಕೃಷ್ಣ ನ ಸ್ವರೂಪವು ಹಿಮ್ಮೆಟ್ಟುತ್ತದೆ, ಅಂದರೆ ಆತನೇ ಸ್ವಯಂಭಗವಂತ ನಾಗಿ ಗೋಚರನಾಗುತ್ತಾನೆ.[೭೨] ಫ್ರೀಡ್ಹೆಲ್ಮ್ ಹಾರ್ಡಿ ಹೇಳುವಂತೆ, ಭಗವಾನ್ ಎಂಬ ಪರಿಕಲ್ಪನೆಯು ,ಏಕರೂಪ, ನಿತ್ಯನಾದ ಪ್ರೀತಿ ಸ್ವರೂಪ ದೇವರಾಗಿದ್ದು... ಮೂರ್ತ ಗುಣಲಕ್ಷಣಗಳಿಂದ ಈ ಖಾಲಿ ಜಾಗವನ್ನು ತುಂಬುವುದು ಅಗತ್ಯವಾಗಿದೆ ಮತ್ತು ಕೃಷ್ಣನಲ್ಲಿ ಮಾತ್ರವೇ ಈ ಗುಣಲಕ್ಷಣಗಳು ಉನ್ನತ ಸ್ಥಿತಿಯನ್ನು ತಲುಪಲು ಸಾಧ್ಯ.[೭೩]

ಭಾಗವತ ಪುರಾಣದ ಪರಿಭಾಷಾ-ಸೂತ್ರ ಬದಲಾಯಿಸಿ

ಚಿತ್ರ:JivaGoswami.jpg
ರಾಧಾ-ಕುಂಡದಲ್ಲಿ ಜೀವಾ ಗೋಸ್ವಾಮಿಯವರ ಭಜನ ಕುಟೀರ.ಜೀವ ಗೋಸ್ವಾಮಿಯವರ ಸಂದರ್ಭಗಳಲ್ಲಿ ಗೌಡಿಯಾ ವೈಷ್ಣವ ಸಂಪ್ರದಾಯದ ಬೆಳೆಯುವಿಕೆ ಹಾಗೂ ವೇದಿಕ್ ಮೂಲಗಳ ಸಾರಾಂಶಗಳಿವೆ, [217] ಭಾಗವತ ಪುರಾಣದ ಪರಿಭಾಶಾ-ಸೂತ್ರವನ್ನಾಧರಿಸಿದೆ [೭೪]

ಗೌಡಿಯ ವೈಷ್ಣವ ,ವಲ್ಲಭ ಸಂಪ್ರದಾಯ ನಿಂಬಾರ್ಕ ಸಂಪ್ರದಾಯ ಮತ್ತು ಪ್ರಾಚೀನ ಭಗವದ್ಗೀತೆ ಯ ಶಾಲೆಗಳು , ಭಾಗವತ ಪುರಾಣದಲ್ಲಿ ಕೃಷ್ಣನು ತನ್ನ ಸಂಪೂರ್ಣ ಸ್ವರೂಪದಲ್ಲಿ ವಿವರಿಸಲ್ಪಟ್ಟಿದ್ದಾನೆ ಎಂದು ನಂಬಿದ್ದವು. ಗ್ರಂಥದದ ಕಡೇಯ ಭಾಗದಲ್ಲಿ ಅವತಾರಗಳ ಪಟ್ಟಿಯ ಅಂತ್ಯದಲ್ಲಿ [೭೫]

All of the above-mentioned incarnations are either plenary portions or portions of the plenary portions of the Lord, but Sri Krishna is the original Personality of Godhead (Svayam Bhagavan).[೭೬]

ಭಾಗವತ ಪುರಾಣದ ಎಲ್ಲಾ ವಿಮರ್ಶಕರೂ ಈ ವಚನಕ್ಕೆ ಒತ್ತು ಕೊಡುವುದಿಲ್ಲ, ಆದರೆ ಬಹಳಷ್ಟು ಕೃಷ್ಣ ಕೇಂದ್ರೀಯ ಹಾಗೂ ಸಮಕಾಲಿನ ವಿಮರ್ಶೆಗಳು ಈ ವಚನವು ಒಂದು ಮಹತ್ವವಾದ ಹೇಳಿಕೆ ಎಂದು ವಿವರಿಸುತ್ತವೆ.[೭೭] ಜೀವ ಗೋಸ್ವಾಮಿ ಯವರು ಇದನ್ನು ಪರಿಭಾಷಾ-ಸೂತ್ರ ಎಂದು ಕರೆದಿದ್ದಾರೆ, ಹಾಗೂ ಈ ಹೇಳಿಕೆಯ ಮೇಲೆಯೇ ಇಡೀ ಗ್ರಂಥ ಅಥವಾ ದೈವ ಜ್ಞಾನ ಶಾಸ್ತ್ರವು ನಿಂತಿದೆ ಎಂದು ಅಭಿಪ್ರಾಯ ಪಡುತ್ತಾರೆ.[೭೮]

ಭಾಗವತ ಪುರಾಣ 10.83.5-43 ದ ಮತ್ತೊಂದು ಭಾಗದಲ್ಲಿ ಕೃಷ್ಣನ ಪತ್ನಿಯರು ದ್ರೌಪದಿಗೆ ಭಗವಂತನು ತಾನೇ ಸ್ವಯಂ ಭಗವಾನ್ ಹೇಗೆ ಆಗಲು ಸಾಧ್ಯ ಎಂದು ವಿವರಿಸುತ್ತಾರೆ, (ಭಾಗವತ ಪುರಾಣ 10.83.7) ವು ಅವರು ಆತನನ್ನು ಹೇಗೆ ವಿವಾಹವಾದರು ಎಂಬುದನ್ನು ವಿವರಿಸುತ್ತದೆ. ಅವರು ಈ ಉಪಕಥೆಗಳ ಮೂಲಕ, ಕೃಷ್ಣನ ಭಕ್ತರೆಂದು ಕರೆಯಲ್ಪಡುವ ಆತನ ಅನೇಕ ಪತ್ನಿಯರ ಕುರಿತು ಹೇಳುತ್ತಾರೆ.[೭೯]

ಅನೇಕ ಕೃಷ್ಣ -ಕೇಂದ್ರಿತ ಸಂಪ್ರದಾಯಗಳು ಸ್ವಯಂ ಭಗವಂತ ನನ್ನು ಒಬ್ಬ ಪತಿಯು ತನ್ನ ಪತ್ನಿಯನ್ನು ಹೇಗೆ ಪ್ರೇಮ ಭಕ್ತಿ ಯ ಗೃಹಕ್ಕೆ ಕೊಂಡೊಯ್ಯುತ್ತಾನೋ ಹಾಗೆಯೇ ಆತನ ಭಕ್ತರು ವಹಾಮಿ ಅಹಂ ಎಂಬ ನಿಷ್ಕಪಟವಾದ ಭಕ್ತಿಯನ್ನು ವಯಕ್ತಿಕವಾಗಿ ತೋರಿಸುತ್ತಾರೆ.[೮೦] ಬದರಾಯಣ ವ್ಯಾಸರು ತಮ್ಮ ಬ್ರಹ್ಮ ಸೂತ್ರದಲ್ಲಿ ಹೇಳುವಂತೆ ,ವಿವೇಶಂ ಕಾ ದರ್ಶಯಾತಿ , ನಿರಪೇಕ್ಷಿತ ವಾದ ಈ ಲೋಕವು ಅಂತ್ಯಗೊಳ್ಳುವುದರ ಬಗ್ಗೆ ಅಥವಾ ಭಕ್ತರ ನಿರ್ಭಯದ ಬಗ್ಗೆ ಗ್ರಂಥಗಳು ಹೇಳುವುದನ್ನು ಸೂಚಿಸುತ್ತದೆ.[೮೧]

ಪಾರ-ವಾಸುದೇವರ ಮೂಲ ಬದಲಾಯಿಸಿ

ಬಲದೇವ ವಿದ್ಯಾಭೂಷಣ ರು ತಮ್ಮ ಪ್ರವಚನದಲ್ಲಿ ಗೋಪಾಲ ತಪಾನಿ ಉಪನಿಷತ್ ನ್ನು ಕುರಿತು ಹೀಗೆ ಹೇಳಿತ್ತಾರೆ: ಸಕಲ ಚರಾಚರ ವಸ್ತುಗಳಿಗೂ ಮೂಲ ಕಾರಣನಾದ ಭಗವಂತನಾದ ಕೃಷ್ಣನನ್ನು ಪ್ರಕಟಿಸಿದ ಗೋಪಾಲ ತಪಾನಿ ಉಪನಿಷತ್ ಗೆ ನನ್ನ ನಮನಗಳು .[೮೨]

ಭಾಗವತ ಪುರಾಣದ ವಚನ 1.3.28 ರಲ್ಲಿರುವ ಕೃಷ್ಣ ಸ್ವಯಂ ಈಶ್ವರಂ , ಎಂಬ ಪದವನ್ನು ಜೀವ ಗೋಸ್ಬಾಮಿ ಯವರು ಮೂಲ ಸೂತ್ರ ಎಂದು ಕರೆದಿದ್ದಾರೆ.ಇದು ಭಾಗವತ್ ಪುರಾಣ ಕ್ಕೆ ಮಾತ್ರ ಸಂಬಂಧಿಸಿದ್ದಲ್ಲದೇ ವೇದಾಂತ ಹಾಗೂ ಎಲ್ಲಾ ವೇದಗಳಿಗೂ ಅನ್ವಯಿಸುತ್ತದೆ.[೨೦][೮೩]

ಉಪನಿಷತ್ತುಗಳ ಪ್ರಕಾರ ಸೃಷ್ಟಿಯ ಕಾರಣಕರ್ತನಾದ ಬ್ರಹ್ಮದೇವನು ಚತುಷ್ಕುಮಾರರೆಂಬ ಮುನಿಗಳನ್ನು ಸಂಧಿಸಿದಾಗ ಆತನಿಗೆ ಅವರು ಒಂದು ಕ್ಲಿಷ್ಟಕರವಾದ ಪ್ರಶ್ನೆಯೊಂದನ್ನು ಕೇಳುತ್ತಾರೆ-ಪರಮ ಶ್ರೇಷ್ಥನಾದ ದೇವರು ಯಾರು? ಯಾರು ಸಾವಿಗೆ ಹೆದರುತ್ತಾರೆ?- ಯಾರನ್ನು ಅರಿತುಕೊಳ್ಳುವುದರಿಂದ ಎಲ್ಲವೂ ಗೋಚರವಾಗುತ್ತದೆ?- ಆ ಮನುಜನು ಯಾರು , ಈ ವಿಶ್ವದ ನಿರ್ಮಾಣಕ್ಕೆ ಕಾರಣ ಕರ್ತನು ಯಾರು?[೮೪][೮೫]

ಈ ವಿಶ್ವದಲ್ಲಿ ಮತ್ತೆ ಮತ್ತೆ ಪ್ರಕಟವಾಗದSva-bimbaṁ   ಆತನ ಮೂಲ ಸ್ವರೂಪ ಅಥವಾ ಮಧುರವಾದ ಸ್ವರೂಪವಾದ ಲೋಕ-ಲೋಕನಂ .[೮೬]

ಗೌಡಿಯ ವೈಷ್ಣವ ದ ಮೂಲಗಳ ಪ್ರಕಾರ ಇದು ಬ್ರಹ್ಮನ ಒಂದು ಸಾರ್ವತ್ರಿಕ ದಿನದಂದು ಉಂಟಾಗುತ್ತದೆ, ಹಾಗೂ ಪ್ರತಿ ಎಪ್ಪತ್ತು ದಿವ್ಯ-ಯುಗ ಗಳ ಕಾಲದಲ್ಲಿ , ಮಾನ್ವಂತರಗಳ ಹದಿನಾಲ್ಕನೆ ದಿನದಂದು ನಡೆಯುತ್ತದೆ ಎಂದು ನಂಬಲಾಗಿದೆ.[೮೭] ಕೆಲವು ಧರ್ಮಗಳು ದೇವರನ್ನು ನೋಡಲು ಸಾಧ್ಯ ಎಂಬುದನ್ನೂ ಒಪ್ಪುವುದಿಲ್ಲ. ನಾಲ್ಕು ಕುಮಾರರಿಗೆ ಉತ್ತರವನ್ನು ನೀಡಲು ಬ್ರಹ್ಮನು ಬೀಜ ಮಂತ್ರದ ರಹಸ್ಯವನ್ನು ಉದಾಹರಿಸಬೇಕಾಗುತ್ತದೆ.[೮೮]

ಮತ್ತು ಇದು,ಪರಮಶ್ರೇಷ್ಠನಾದ ದೇವರು ಯಾರು ಮತ್ತು ಆತನು ಹೇಗೆ ಈ ಪ್ರಪಂಚವನ್ನು ಸೃಷ್ಟಿ ಮಾಡಿದನು ಎಂಬುದಕ್ಕೆ ಉತ್ತರ ನೀಡಿತು ಎಂದು ನಂಬಲಾಗಿದೆ.[೮೪]

ಬ್ರಹ್ಮನು ಮುನಿಗಳಿಗೆ:" ಕೃಷ್ಣನೇ ದೈವತ್ವದ ಪರಮ ಶ್ರೇಷ್ಠ ವ್ಯಕ್ತಿಯಾಗಿದ್ದಾನೆ" ಎಂದು ಉತ್ತರಿಸಿದನು. ಗೋವಿಂದನಿಗೆ ಸಾವು ಕೂಡಾ ಹೆದರುತ್ತದೆ. ಗೋಪಿಜನವಲ್ಲಭನನ್ನು ಅರಿತುಕೊಳ್ಳುವುದರಿಂದ ಎಲ್ಲವೂ ಗೋಚರವಾಗುತ್ತದೆ. "ಸ್ವಾಹಾ ಎಂಬ ಪದವನ್ನು ಉಚ್ಛರಿಸಿದ ಮಾತ್ರದಿಂದಲೇ ದೇವಮನುಜನು ಈ ಪ್ರಪಂಚವನ್ನು ಸೃಷ್ಟಿ ಮಾಡಿದನು.[೮೯] ಭಗವದ್ಗೀತೆಯ ಸಂಪೂರ್ಣ ಸವಿಸ್ತಾರ ದೃಷ್ಟಿಕೋನದಲ್ಲಿ ನೋಡುವುದಾದರೆ," ಕೃಷ್ಣನು ಅನೇಕರಲ್ಲಿ ಒಬ್ಬನಾಗಿರದೆ ಸ್ವಯಂ ಆತನೇ ಭಗವಂತನಾಗಿದ್ದಾನೆ".[೯೦]

ಸನತ್ -ಕುಮಾರ ಸಂಹಿತ ವು ಕಾಮ ಗಾಯತ್ರಿಯು ಗೋಲೋಕದ ಮೂಲ ಅಡಿಪಾಯವಾಗಿದೆ ಎಂಬುದನ್ನು ಖಾತ್ರಿಪಡಿಸುತ್ತದೆ, ಇದು ಕೃಷ್ಣನ ವಾಸಸ್ಥಾನವಾಗಿದ್ದು, ನಿಜವಾದ ವಾಸುದೇವ ಇದೇ ಎಂದು ನಂಬಲಾಗಿದೆ[೯೧]:

ಗೋಪಾಲ ಮಂತ್ರ ವು ಭಗವಂತನಾದ ಕೃಷ್ಣನ ವಾಸಸ್ಥಾನದ ಪ್ರತಿರೂಪವಾದ ಕಮಲದ ಹೂವಿ ನ ಸುರುಳಿಯಲ್ಲಿ ಬರೆಯಲ್ಪಟ್ಟಿದೆ."[೯೨][೯೩]

[೯೪][೯೫]

ಇತಿಹಾಸಕ್ಕೆ ಸಂಬಂಧಿಸಿದಂತೆ ದಾಖಲೆಗಳು ಬದಲಾಯಿಸಿ

ಚಿತ್ರ:Heliodoruspillar.gif
ಹೆಲಿಡೋರಸ್ ಕಂಬದ ಮೊದಲ ಕೆತ್ತನೆ ಅಕ್ಷರಗಳು ಇದನ್ನು 110 ಬಿಸಿ‌ಇಯಲ್ಲಿ ಹೆಲಿಯೊಡೊರಸ್ ಅವರಿಂದ ಬರೆಯಲ್ಪಟ್ಟಿದ್ದು, ಅವರ ಗರುಡ-ವಸುದೇವನ ಪ್ರತೀಕ, ದೇವತೆಗಳ ದೇವನನ್ನು ಭಕ್ತ ಹೆಲಿಯೊಡೊರಸ್ ಚಿತ್ರೀಕರಿಸಿದ್ದಾನೆ.

ಭಾರತದ ಮಧ್ಯಕಾಲಿಕ ಚರಿತ್ರೆಯಲ್ಲಿ ಕೆಲವು ಕಡೆಗಳಲ್ಲಿ ಕೃಷ್ಣ-ಕೇಂದ್ರಿತಸ್ವಯಂ ಭಗವಾನ್ ಆರಾಧನೆಯನ್ನು ನಡೆಸಲಾಗುತ್ತಿತ್ತು, ಆದರೆ ಇದಕೆ ವಿರುದ್ಧವಾದ ಕೆಲವು ಪುರಾವೆಗಳೂ ದೊರೆತಿವೆ. ಆ ಕಾಲಗಳಲ್ಲಿ ಕೃಷ್ಣನ ಮೂರ್ತಿಗಳನ್ನು ಅನೇಕ ಸ್ಥಳಗಳಲ್ಲಿ ಪೂಜೆ ಮಾಡಲಾಗುತ್ತಿತ್ತು. ಕರ್ಟಿಯಸ್ ರವರ ಹೇಳಿಕೆಯನ್ನು ಉಲ್ಲೇಖಿಸುತ್ತಾ, ಡಾ.ಡಿ.ಸಿ. ಸರ್ಕಾರ್ ರವರು ಹರಾಕಲ್ ಮೂರ್ತಿಯನ್ನು( ಸರ್ಕಾರ್ ಪ್ರಕಾರ ವಾಸುದೇವ- ಕೃಷ್ಣ ) ಪೌರವನ ಸೈನಿಕರು ತಮ್ಮ ಮುಂದೆ ಕೊಂಡೊಯ್ಯುತ್ತಿದ್ದರು, ಇದು ಅಲೆಗ್ಸಾಂಡರ್ ನ ನೇತೃತ್ವದ ಗ್ರೀಕರ ವಿರುದ್ಧವಾಗಿತ್ತು (ಭಾರತದ ಸಾಂಸ್ಕೃತಿಕ ಪರಂಪರೆ , vol. 4. ಪು. 115) ಮಥುರಾ ವಸ್ತು ಸಂಗ್ರಹಾಲಯದಲ್ಲಿ ಮೊದಲನೇ ಶತಮಾನ ಕಾಲದಲ್ಲಿ ವಸುದೇವನು ಬಾಲಕನಾದ ಕೃಷ್ಣನನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಯಮುನಾ ನದಿಯ ಪ್ರವಾಹವನ್ನು ದಾಟುವ ಒಂದು ಸ್ವಾರಸ್ಯಕರವಾದ ಚಿತ್ರಣವನ್ನು ಇರಿಸಲಾಗಿದೆ.ಮೋರಾ ಶಿಲಾ ಶಾಸನದಲ್ಲಿ ಕಲ್ಲಿನ ಮೇಲೆ ಸುಂದರವಾಗಿ ಕೆತ್ತಲಾದ ಭಾಗವತ ವರ್ಷಿಣಿ ಪಂಚವೀರರು, ಸಂಕರ್ಶಣ, ವಾಸುದೇವ,ಪ್ರದ್ಯುಮ್ನ, ಸಾಂಬಾ ಮತ್ತು ಅನಿರುದ್ದನ ಮೂರ್ತಿಗಳು ಇದನ್ನೇ ವಿವರಿಸುತ್ತವೆ.[೯೬] ಗುಪ್ತರ ಕಾಲ ದ ಸಂಶೋಧನೆಗಳು ವಾಸುದೇವ ನನ್ನು ಆರಾಧಿಸುತ್ತಿದ್ದ ಭಾಗವತರು ಎಂಬ ವಿಶೇಷ ಜನಾಂಗದವರ ಕುರಿತು ಸ್ಪಷ್ಟವಾಗಿ ಹೇಳುತ್ತದೆ.[೯೭]

ಸ್ವಯಂ ಭಗವಾನ್ , ಆದ ಕೃಷ್ಣನ ಆರಾಧನೆಯ ಪ್ರಾಚೀನತೆಯನ್ನು ಪರಾಮರ್ಶಿಸುವಾಗ, ಪ್ರಾಚೀನ ಜೈನ ಗ್ರಂಥಗಳು ಬಲದೇವಹಾಗೂ ವಾಸುದೇವ ಎಂಬ ಎರಡು ವರ್ಗಗಳ ಬಗ್ಗೆ ಒತ್ತು ಕೊಡುತ್ತದೆ, ಇದು ಬುದ್ಧ ಸಂಪ್ರದಾಯದಲ್ಲಿ ಅಥವಾ ಪ್ರಾಚೀನ ಜೈನ ಸಂಪ್ರದಾಯದಲ್ಲಿ ಕಂಡು ಬರುವುದಿಲ್ಲವೆಂದು ಸ್ಪಷ್ಟವಾಗಿ ತೋರುತ್ತದೆ. ಆದ್ದರಿಂದ ಜೈನ ಸಂಪ್ರದಾಯದಲ್ಲಿ ಜಾರಿಗೆ ಬಂದ ಈ ನೂತನ ವರ್ಗಗಳು, ಆಗಿನ ಕಾಲದ ಜನಪ್ರಿಯ ವೈಷ್ಣವ ಸಂಪ್ರದಾಯಗಳಾದ ಬಲರಾಮ ಹಾಗೂ ಮಥುರೆಯ ಕೃಷ್ಣ ನ ಕುರಿತ ದಂತ ಕಥೆಗಳನ್ನು ವಿವರಿಸಲು ಕಷ್ಟ ಸಾಧ್ಯ ಎನಿಸಿದವು .[೯೮]

ಮಥುರಾ ಪ್ರದೇಶದ ಪ್ರಾಚೀನ ವಸ್ತು ಶಾಸ್ತ್ರದ ಸಂಶೋಧನೆಗಳು ಮೌರ್ಯರ ಹಾಗೂ ಸುಂಗ ಕಾಲದಲ್ಲಿ ಉತ್ತುಂಗಕ್ಕೆ ಏರಿದ್ದ ಈ ಎರಡು ವ್ಯಕ್ತಿಗಳ ಜನಪ್ರಿಯತೆಯನ್ನು ಬೆಂಬಲಿಸುತ್ತವೆ. ಈ ಕಾಲದಲ್ಲಿ ಮಥುರಾ ಮತ್ತು ಪಶ್ಚಿಮ ಭಾರತದ ಪ್ರದೇಶಗಳಲ್ಲಿ ಭಗವದ್ಗೀತೆಯ ಈ ಧರ್ಮವು ವ್ಯಾಪಕವಾಗಿ ಹಬ್ಬಿಕೊಂಡಿತ್ತು. ಈ ಸಮಯದಲ್ಲೇ ಜೈನರು ಅತಿಹೆಚ್ಚಿನ ಸಂಖ್ಯೆಯಲ್ಲಿ ಮಗಧ ದೇಶದಿಂದ ಮಥುರಾ ಕ್ಕೆ ವಲಸೆ ಬಂದರು. ಯಾವುದೇ ಬ್ರಾಹ್ಮಣ ಗ್ರಂಥಗಳನ್ನು ಆಧಾರವಾಗಿ ಇಟ್ಟುಕೊಳ್ಳದೇ , ಜೈನ ಪುರಾಣಗಳು ಬಲದೇವನನ್ನು ಹಲಾಭ್ರಿತ ಎಂದು ವಿವರಿಸಿವೆ. ಪುರಾಣಗಳಲ್ಲಿ ಕಂಡು ಬರುವ ಕೃಷ್ಣನ ವಿವರಣೆಯ ನಂತರವೇ ಎಲ್ಲಾ ವಸುದೇವಗಳನ್ನೂ ರೂಪಾಂತರಗೊಳಿಸಲಾಗಿದೆ. ಇವರನ್ನು ನೀಲ ಮೇಘ ಶ್ಯಾಮ ಎಂದು ಕರೆಯಲಾಗಿದ್ದು,ಅನೆಕ ವೇಳೆ ಕೃಷ್ಣನನ್ನು ಸಾಮಾನ್ಯವಾಗಿ ಕೇಶವ, ಮಾಧವ, ಗೋವಿಂದ ಹಾಗೂ ನಾರಾಯಣ ( ವಾಸುದೇವನಿಗೆ ಸಮನಾಗಿ ಬಳಸುವ ಹೆಸರು) ಎಂಬ ಹೆಸರುಗಳ ಮೂಲಕ ಕರೆಯಲಾಗುತ್ತದೆ. ಇದಕ್ಕೆ ವಿರುದ್ಧ ವಾಗಿ ( ಪ್ರತಿ ಅಥವಾ ವರ್ಗಗಳು) ಪುರಾಣಗಳಲ್ಲಿ ಅಸುರರು ಎಂಬ ಹೆಸರುಗಳನ್ನು ಸೇರಿಸಲಾಗಿದೆ.[೯೮]

ಕೆಲವು ಪಂಡಿತರ ಅಭಿಪ್ರಾಯದ ಪ್ರಕಾರ ಮಹಾಭ್ಯಾಸದ ಒಂದು ಟಿಪ್ಪಣಿಯಲ್ಲಿ ವಿವರಿಸಿರುವಂತೆ ಪತಾಂಜಲಿಯ ಕೃಷ್ಣನನ್ನು ವಾಸುದೇವನೊಂದಿಗೆ ಹೋಲಿಸಲಾಗಿದೆ- (ಜಗನ ಕಂಸಂ ಕಿಲಾ ವಾಸುದೇವಹಃ ).[೯೯] ಇದು ಪಣನಿಯ ಕಾಲದ ಆರನೇಯ ಶತಮಾನದಿಂದ ಐದನೆಯ ಶತಮಾನದ BCE ಯವರೆಗಿನ ಪ್ರಾಚೀನ ಹಂತವಾಗಿದ್ದು , ಆತನ ಅಷ್ಟಾಧ್ಯಾಯಿ ಯಲ್ಲಿ ವಾಸುದೇವನ ಒಬ್ಬ ಭಕ್ತನಾದ ವಸುದೇವಕ ಎಂಬ ಪದವನ್ನು ವಿವಸಿರುತ್ತಾನೆ ಮತ್ತು ಭಾರತದ ಇತಿಹಾಸದಲ್ಲಿ ವಾಸುದೇವ ಕೃಷ್ಣನ ಆರಾಧನೆಯು ಭಾಗವತ ಧರ್ಮದೊಂದಿಗೆ ಬೆರೆತು ವೈಷ್ಣವ ಸಿದ್ಧಾಂತದ ಒಂದು ಮೂಲ ಎಂದು ನಂಬಲಾಗಿದೆ.."[೧೦೦][೧೦೧]

ಭಾರತದ ಗುಪ್ತ ಕಾಲ ದಲ್ಲಷ್ಟೇ ಅಲ್ಲದೆ ಗ್ರೀಕರ ಐತಿಹಾಸಿಕ ದಾಖಲೆಗಳೂ ಕೃಷ್ಣ-ವಸುದೇವರ ಭಕ್ತಿ ಸಂಪ್ರದಾಯವನ್ನು ಒತ್ತಿ ಹೇಳುತ್ತವೆ,[೧೦೨] ಪಣನಿಯೂ ಸಹ ಕೃಷ್ಣ-ವಸುದೇವರ ಭಕ್ತಿಯ ಪ್ರಾಚೀನತೆಯನ್ನು ಅಥವಾ.(vāsudeva arjunābhyāṁ ಅರ್ಜುನನ )ಬಗ್ಗೆ ವಿವರಣೆ ನೀಡಿರುವುದನ್ನು ಗಮನಿಸುವುದು ಬಹು ಮುಖ್ಯವಾಗಿದೆ,[೧೦೩] ಆದರೆ ಬಹಳ ಕಾಲದ ನಂತರ ( ಕ್ರಿಸ್ತ ಪೂರ್ವ2ನೇಶತಮಾನ) ಪತಾಂಜಲಿ ತನ್ನ ವ್ಯಾಖ್ಯೆಯಲ್ಲಿ ವಸುದೇವನನ್ನು ದೇವರುಗಳ ದೇವರ ಅನುಯಾಯಿ ಭಕ್ತ ಎಂದು ಬಣ್ಣಿಸಿದ್ದಾನೆ."[೯೯][೧೦೪]

ಇತರೆ ಉಪಯೋಗಗಳು ಬದಲಾಯಿಸಿ

ಭಾಗವತಪುರಾಣ ದಲ್ಲಿ ಈ ಪದವನ್ನು ಧನವಂತರಿ,[೧೦೫]ವಾಮನ,[೧೦೬]ವಿಷ್ಣು ,[೧೦೭] ವೈಕುಂಠ ದೇವ ಮುಂತಾದ ಹೆಸರುಗಳನ್ನೊಳಗೊಂಡ ಇತರ ದೇವರುಗಳಿಗೂ ಬಳಸಲಾಗಿದೆ.[೧೦೮] ಈ ಪದವನ್ನು ಗ್ರಂಥದಲ್ಲಿ ಇತರ ದೇವರುಗಳಿಗೆ ಬಳಸಲಾಗಿದ್ದರೂ , ಈ ಉಲ್ಲೇಖಗಳು ಕೃಷ್ಣ ಆಧಾರಿತಕೃಷ್ಣ -ಕೇಂದ್ರಿತ ದೈವ ಶಾಸ್ತ್ರವನ್ನು ಹೊರತುಪಡಿಸಿಲ್ಲ.

ಬ್ರಹ್ಮ ವೈವತ್ರ ಪುರಾಣ ಹಾಗೂ ಗಾರ್ಗ ಸಂಹಿತ ದಲ್ಲಿ ಕೃಷ್ಣನನ್ನು ಕೆಲವೊಮ್ಮೆ ಭಕ್ತಿ ಗೋವಿಂದ ಠಾಕೂರ್ ರು ತಮ್ಮ ಅಂನಾಯ ಸೂತ್ರ ದಲ್ಲಿ ಗೌಡಿಯ ಸಂಪ್ರದಾಯದಲ್ಲಿ ವಿವರಿಸದಂತೆ ಉಲ್ಲೇಖಿಸಲಾಗಿದೆ- ಕೃಷ್ಣಾಸು ತು ಪರಿಪೂರ್ಣಾತ್ಮ ಸರ್ವತಾ ಸುಖ - ರೂಪಕಾಃ ಅಂದರೆ "ದೇವರ ಪರಮೋಚ್ಛ ಮೂಲ ಸ್ವರೂಪ" ಎಂದು ಭಾಷಾಂತರಿಸಲಾಗಿದೆ.[೧೦೯]

ಇವನ್ನೂ ನೋಡಿ ಬದಲಾಯಿಸಿ

  • ಆಸಿಂತ್ಯ ಭೇದ ಅಭೇದ
  • ಭಾಗವತ
  • ಗೋಪಾಲ ತಪಾನಿ ಉಪನಿಶದ್
  • ಹರೇ ಕೃಷ್ಣ
  • ಕೃಷ್ಣಾ
  • ಕೃಷ್ಣ ಸಿದ್ಧಾಂತ
  • ಪರ ಬ್ರಹ್ಮನ್
  • ನಾರಾಯಣ
  • ರಾಧಾ
  • ವಾಸುದೇವ
  • ವೇದಾಂತ
  • ವಿಷ್ಣು

ಟಿಪ್ಪಣಿಗಳು ಬದಲಾಯಿಸಿ

  1. ೧.೦ ೧.೧ ೧.೨ ೧.೩ ೧.೪ ೧.೫ ೧.೬ Gupta, Ravi M. (2007). Caitanya Vaisnava Vedanta of Jiva Gosvami. Routledge. ISBN 0415405483. {{cite book}}: Cite has empty unknown parameter: |coauthors= (help)
  2. ೨.೦ ೨.೧ ಭಗವಾನ್ ಸ್ವಾಮಿನಾರಾಯಣ ಎರಡು ಶತಮಾನಗಳ ನೆನಪಿನ ಸಂಪುಟ, 1781-1981. ಪು. 154: ...ಶ್ರೀ ವಲ್ಲಭಾಚಾರ್ಯ [ಹಾಗೂ] ಶ್ರೀ ಸ್ವಾಮಿನಾರಾಯಣ... ಆದ್ದರಿಂದ ಅವೆರಡೂ ಪರಮೋಚ್ಛ ಅವತಾರ ಸ್ವರೂಪನೂ ಹಾಗೂ ಎಲ್ಲಾ ಅವರಾತಗಳ ಮೂಲನೂ ಆಗಿರುವ ಕೃಷ್ಣನ ಪರಮೋಚ್ಛ ಸತ್ಯವನ್ನೇ ತಿಳಿಸುತ್ತವೆ. ಆರ್. ಕಲಾಧರ್ ಭಟ್ ಅವನ್ನು ಇದರಲ್ಲಿ ನಮೂದಿಸಲಾಗಿದೆ. " ಈ ಇಂದ್ರಿಯಾತೀತವಾದ ಭಕ್ತಿಯ ಮೂಲವು ಕೃಷ್ಣನೇ ಆಗಿದ್ದಾನೆ. ನ್ಯೂ ಡೈಮೆನ್ಷನ್ಸ್ ಇನ್ ವೇದಾಂತ ಫಿಲಾಸಫಿ - ಪುಟ 154, ಸಹಜಾನಂದ, ವೇದಾಂತ. 1981
  3. Delmonico, N. (2004). "The History Of Indic Monotheism And Modern Chaitanya Vaishnavism". The Hare Krishna Movement: the Postcharismatic Fate of a Religious Transplant. Columbia University Press. ISBN 9780231122566. Retrieved 2008-04-12. {{cite journal}}: Invalid |ref=harv (help)
  4. Elkman, S.M. (1986). Jiva Gosvamin's Tattvasandarbha: A Study on the Philosophical and Sectarian Development of the Gaudiya Vaishnava Movement. Motilal Banarsidass Pub. {{cite book}}: Unknown parameter |coauthors= ignored (|author= suggested) (help)
  5. ೫.೦ ೫.೧ Dimock Jr, E.C. (1989). The Place of the Hidden Moon: Erotic Mysticism in the Vaisnava-Sahajiya Cult of Bengal. University Of Chicago Press. {{cite book}}: Unknown parameter |coauthors= ignored (|author= suggested) (help) ಪುಟ 132
  6. ೬.೦ ೬.೧ ೬.೨ Mepathur Narayana Bhattatiri (2003). Narayaneeyam-Bhagavata, Condensed Edition. Sri Ramakrishna Math. ISBN 81-7120-419-8.ಪುಟಗಳು.234-239
  7. Mahony, W.K. (1987). "Perspectives on Krishna's Various Personalities". History of Religions. 26 (3): 333–335. doi:10.1086/463085. Retrieved 2008-04-12. {{cite journal}}: Invalid |ref=harv (help)
  8. ಎಸೆನ್ಷಿಯಲ್ ಹಿಂದೂಯಿಸಂ ಎಸ್. ರೋಸನ್, 2006, ಗ್ರೀನ್ ವುಡ್ ಪಬ್ಲಿಶಿಂಗ್ ಗ್ರೂಪ್ ಪು.124 ಐಎಸ್‌ಬಿಎನ್ 0275990060
  9. Matchett 2000, p. 4
  10. "ಶಬ್ದ-ಅರ್ಥಗಳ ಸಾಂಸ್ಕೃತಿಕ ನೆಲೆಗಳು;ಜೆ. ಶ್ರೀನಿವಾಸಮೂರ್ತಿ;23 May, 2017". Archived from the original on 2017-05-25. Retrieved 2017-05-25.
  11. Knapp, S. (2005). The Heart of Hinduism: The Eastern Path to Freedom, Empowerment and Illumination -. iUniverse. " ಕೃಷ್ಣನು ಆದಿಯೂ ಅಂತ್ಯವೂ ಇಲ್ಲದ ದೇವನಾಗಿದ್ದು, ದೈವ ಸ್ವರೂಪದ ಮೂಲವಾಗಿದ್ದಾನೆ, ಆದ್ದರಿಂದ ಆತನು ತನ್ನ ಶಕ್ತಿಯಿಂದ ಅಪರಿಮಿತ ಸ್ವರೂಪಗಳಿಗೆ ಬದಲಾಗುವ ಚೈತನ್ಯವನ್ನು ಹೊಂದಿದ್ದಾನೆ."ಪುಟ 161
  12. Dr. Kim Knott, (1993). "Contemporary Theological Trends In The Hare Krishna Movement: A Theology of Religions". Archived from the original on 2013-01-03. Retrieved 2008-04-12. {{cite journal}}: Cite journal requires |journal= (help); Invalid |ref=harv (help)CS1 maint: extra punctuation (link)..."ಭಕ್ತಿ ಮಾರ್ಗದಿಂದ ಭಗವಂತನಾದ ಕೃಷ್ಣನಿಗೆ ಶರಣಾಗುವುದೇ, ಪರಮ ಶ್ರೇಷ್ಠನಾದ ದೇವನಿಗೆ ಸಲ್ಲಿಸುವ ಪರಿಶುದ್ಧವಾದ ಭಕ್ತಿಪೂರ್ವಕ ಆರಾಧನೆಗೆ ದಾರಿಯಾಗಿದೆ".
  13. K. Klostermaier (1997). The Charles Strong Trust Lectures, 1972-1984. Crotty, Robert B. Brill Academic Pub. p. 206. ISBN 90-04-07863-0. For his worshippers he is not an avatara in the usual sense, but Svayam Bhagavan, the Lord himself. ಪು.109 ಕ್ಲಾಸ್ ಕ್ಲೊಸ್ಟೆರ್ಮೇಯರ್ ಅವರು ಸರಳವಾಗಿ "ದಿ ಲಾರ್ಡ್ ಹಿಮ್ಸೆಲ್ಪ್" ಎಂದು ಭಾಷಾಂತರಿಸಿದ್ದಾರೆ.
  14. ೧೪.೦ ೧೪.೧ Bipin Chandra Pal (1964, 132 pages). Shree Krishna: Letters Written to a Christian Friend. Yugayatri/New India Printing & Publishing Co. First edition published in 1938 under the title of 'Europe asks: who is Shree Krishna'. {{cite book}}: Check date values in: |year= (help); line feed character in |publisher= at position 29 (help)ಪು. 31: ಈ ಶ್ರೇಣಿಯ ಉನ್ನತ ಪಂಕ್ತಿಯಲ್ಲಿ ಶ್ರೀಕೃಷ್ಣ ಎನ್ನುವುದು ನಿಲ್ಲುತ್ತದೆ. ಆದ್ದರಿಂದ ಆತನ ಅನುಯಾಯಿಯಗಳು ಆತನನ್ನು ಪುರಾಣ ಅವತಾರ ಅಥವಾ ಭಗವಂತನ ಪರಿಪೂರ್ಣ ಅವತಾರ ಎಂದು ಕರೆದಿದ್ದಾರೆ.
  15. "Sapthagiri". www.tirumala.org. Archived from the original on 2008-11-21. Retrieved 2008-05-03. ವ್ಯಾಸ' ಮಹರ್ಷಿಯ ತಂದೆಯಾದ ಪರಾಶರ ಮಹರ್ಷಿಯು ವಿಷ್ಣು ಪುರಾಣದಲ್ಲಿ ಶ್ರೀ ಕೃಷ್ಣನ ಅವತಾರವು ಪರಿಪೂರ್ಣ ಅವತಾರ ಎಂಬ ಅತಿ ದೊಡ್ಡ ಅಂಶವನ್ನು ವಿವರಿಸಿದ್ದಾರೆ. ಮತ್ತು ಭಗವಂತನಾದ ಕೃಷ್ಣನ ಸ್ವಯಂ ಉಪದೇಶ ದ ಪ್ರಕಾರ, " ಯಾವನು ತನ್ನ ಜನ್ಮ ರಹಸ್ಯವನ್ನು ಅರಿತಿರುವನೋ, ಹಾಗೂ ಕರ್ಮವು ಸಂಸಾರ ದಲ್ಲಿ ಉಳಿಯುವುದಿಲ್ಲವೋ (ಪುನರ್ಜನ್ಮ ನೈತಿ- ಮಾಮ್ ಏತಿ ) ಹಾಗೂ ಈ ನಶ್ವರ ಲೋಕವನ್ನು ತ್ಯಜಿಸಿದ ನಂತರ ಮೋಕ್ಷವನ್ನು ಪಡೆಯುತ್ತಾನೆ". (ಬಿಜಿ 4.9). ಪರಾಶರ ಮಹರ್ಷಿಯು ಅಂಶ 5ದನ್ನು ಒಂದು ಫಲಶೃತಿಯಾಗಿ ಅಂತ್ಯಗೊಳಿಸುತ್ತಾರೆ (ವಿಷ್ಣುಪುರಾಣ .5.38.94)
  16. Valpey 2006, p. 154
  17. Matchett, Freda (2000). Krsna, Lord or Avatara? the relationship between Krsna and Visnu: in the context of the Avatara myth as presented by the Harivamsa, the Visnupurana and the Bhagavatapurana. Surrey: Routledge. p. 254. ISBN 0-7007-1281-X. ಪು. 182-183
  18. ೧೮.೦ ೧೮.೧ ೧೮.೨ B. V. Tripurari (2004). Gopala-tapani Upanisad. Audarya Press. ISBN 1-932771-12-3.
  19. ೧೯.೦ ೧೯.೧ ಗೌಡಿಯ ಪಂಡಿತರಾದ ಭಕ್ತಿವಿನೋದ ಠಾಕೂರರು ತಮ್ಮ ದಾಸ ಮೂಲ ತತ್ವ ಅಧ್ಯಾಯ3: 'Śrī Kṛṣṇa—ಪರಮ ಸತ್ಯ, ದೈವಿಕತ್ವಗಳ ವೈದಿಕ ಸಾಕ್ಷಿಗಳು Śrī Kṛṣṇa ಭಾಗದಲ್ಲಿ ಈ ರೀತಿ ಹೇಳುತ್ತಾರೆ: Ṛg-Veda (Ṛg. 1.22.23)ರಲ್ಲಿ:
    tad viṣṇoḥ paramaṁ padaṁ sadā paśyanti sūrayaḥ
    divīva cakṣur ātataṁ viṣṇor yat paramaṁ padam
    "ದೈವಿಕ ವ್ಯಕ್ತಿತ್ವ" ವೇ ಪರಮ ಸತ್ಯವಾಗಿದ್ದು ಆತನ ಪಾದ ಚರಣ ಕಮಲಗಳ ದರ್ಶನವನ್ನು ಪಡೆಯಲು ದೇವತೆಗಳು ಸದಾ ತವಕಪಡುತ್ತಿದ್ದಾರೆ. ಆತನ ಚರಣ ಕಮಲಗಳು ಆತ್ಮೀಕ ಕಣ್ಣುಗಳು ಉಳ್ಳವರಿಗೆ ಮಾತ್ರ ಗೋಚರವಾಗುತ್ತವೆ, ಏಕೆಂದರೆ ಅವರು ಆತನಂತೆಯೇ Śrī Kṛṣṇa ಸಂಪೂರ್ಣವಾಗಿ ಅಲೌಕಿಕರಾಗಿದ್ದು ,ಪರಮ ಶ್ರೇಷ್ಠರಾಗಿದ್ದಾರೆ. ಪುನಃ, Ṛg-Veda (1.22.164 ಸೂಕ್ತ 31)ದಲ್ಲಿ ನಾವು ಆ ಪಂಕ್ತಿಯನ್ನು ಕಂಡುಹಿಡಿದೆವು:
    apaśyaṁ gopām anipadyamāna mā ca parā ca pathibhiś carantam
    sa sadhrīcīḥ sa viṣucīr vasāna avarīrvati bhuvaneṣv antaḥ
    " ತನ್ನ ಪದವಿಯಿಂದ ಕೆಳಗಿಳಿಯದೇ ಇದ್ದ ಒಬ್ಬ ದನಕಾಯುವ ಹುಡುಗನನ್ನು ನಾನು ನೋಡಿದೆನು". ಕೆಲವು ಸಮಯದಲ್ಲಿ ಹತ್ತಿರವಿದ್ದಂತೆಯೂ,ಕೆಲವು ವೇಳೆ ದೂರವಿದ್ದಂತೆಯೂ ಭಾಸವಾಗುತ್ತಾ, ಈ ರೀತಿಯಲ್ಲಿ ಅನೇಕ ವಿಧಗಳ ಮೂಲಕ ಸಂಚರಿಸುವನು. ಕೆಲವು ವೇಳೆ ಅನೇಕ ನಿಲುವಂಗಿಗಳನ್ನು ಧರಿಸಿ, ಇನ್ನು ಕೆಲವು ವೇಳೆ ವಿಭಿನ್ನ ವಸ್ತ್ರಗಳೊಂದಿಗೆ ನಿರಂತರವಾಗಿ ಈ ವಿಶ್ವದಲ್ಲಿ ಪ್ರತ್ಯಕ್ಷವಾಗುತ್ತಾ ಹಾಗೂ ಮಾಯವಾಗುತ್ತಾ ಇರುವನು". ಮುಂದಿನ ವಚನವು ಗತಕಾಲದ ಅಲೌಕಿಕತ್ವದ Śrī Kṛṣṇa'ನಿತ್ಯತ್ವದ ಕುರಿತು ಹೇಳುತ್ತದೆṚg Veda (1.54.6):
    tā vāṁ vāstuny uśmasi gamadhyai yatra gavo bhūri sṛṅga ayāsaḥ
    atrāha tad urugāyasya viṣṇoḥ parama-padam avabhāti bhuri
    ನಾನು ತಮ್ಮ ಉದ್ದನೆಯ ಕೊಂಬುಗಳಿಂದ ಅಲಂಕೃತವಾದ ಬಯಕೆಗಳನ್ನು ಈಡೇರಿಸುವ ಕಾಮಧೇನು ಇರುವ ನಿನ್ನ ನಿತ್ಯ ನಿವಾಸ (ಶ್ರೀ ರಾಧಿಕಾ ಮತ್ತು Śrī Kṛṣṇa) ದಲ್ಲಿರಲು ಬಯಸುತ್ತೇನೆ. ತನ್ನ ಭಕ್ತರ ಬಯಕೆಗಳನ್ನು ಪೂರೈಸುವ , ಆತನ ನಿತ್ಯ ನಿವಾಸವುŚrī Kṛṣṇa, ಈಗಾಗಲೇ ಎಲ್ಲಾ ವೈಭವದಿಂದ ಕಂಗೊಳಿಸುತ್ತಿದೆ".
  20. ೨೦.೦ ೨೦.೧ ೨೦.೨ Gupta, Ravi M. (2004). Caitanya Vaisnava Vedanta: Acintyabhedabheda in Jiva Gosvami's Catursutri tika. University Of Oxford. {{cite book}}: Cite has empty unknown parameter: |coauthors= (help) ಉಲ್ಲೇಖ ದೋಷ: Invalid <ref> tag; name "Gupta2004" defined multiple times with different content
  21. ಸುನಿಲ್ ಕುಮಾರ್ ಭಟ್ಟಾಚಾರ್ಯ ಕೃಷ್ಣಾ-ಕಲ್ಟ್ ಇನ್ ಇಂಡಿಯನ್ ಆರ್ಟ್ . 1996 ಎಮ್.ಡಿ. ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ ಐಎಸ್‌ಬಿಎನ್ 8175330015 ಪು.126: ಡಿ.ಆರ್. ಭಡಾರ್ಕರ್‌ರವರ ಪ್ರಕಾರ , ಕೃಷ್ಣ ಎಂಬ ಪದವು ಋಗ್ವೇದದಲ್ಲಿ ಕೃಷ್ಣನನ್ನು ಸೂಚಿಸುವ "ಕೃಷ್ಣ-ದ್ರಪಸಃ" ವನ್ನು ಪ್ರತಿನಿಧಿಸುತ್ತದೆ.
  22. ೨೨.೦ ೨೨.೧ S. Devadas Pillai, ed. (1997). Indian Sociology Through Ghurye: A Dictionary. Columbia, Mo: South Asia Books. p. 403. ISBN 81-7154-807-5.
  23. ಪಂಜಾಬ್ ಯೂನಿವರ್ಸಿಟಿ ಜರ್ನಲ್ ಆಫ್ ಮಿಡೀವಲ್ ಇಂಡಿಯನ್ ಲಿಟರೇಚರ್. ಪುಟ 56 ಪಂಜಾಬ್ ಯೂನಿವರ್ಸಿಟಿ ಶೇಕ್ ಬಾಬಾ ಫರೀದ್, ಡಿಪಾರ್ಟ್ಮೆಂಟ್ ಆಫ್ ಮಿಡೀವಲ್ ಇಂಡಿಯನ್ ಲಿಟರೇಚರ್
  24. Sri Swami Chidananda (1964, 132 pages). The Divine Name and Its Practice: Souvenir on the Occasion of the Double. Divine Life Society & Publishing Co. Preface Sri Swami Krishnananda {{cite book}}: Check date values in: |year= (help); External link in |publisher= (help); line feed character in |publisher= at position 120 (help)ಪು. ೨೪
  25. Flood 2006, p. 150
  26. "Monotheism (Stanford Encyclopedia of Philosophy) Nov 1, 2005". www.seop.leeds.ac.uk. Archived from the original on 2008-05-14. Retrieved 2008-07-26.
  27. ರಾಮಾನುಜ (1962) ಪು. 88
  28. ರಾಮಾನುಜ (1962) ಪು. 424
  29. Tapasyananda, S. (1982). Śrīmadbhāgavatam-Srimad Bhagavata, the Holy Book of God. Sri Ramakrishna Math, Madras.ಪುಟ xxvi[unreliable source?]
  30. ನೋಡಿ, ಗಂಗೂಲಿಯವರ ಮಹಾಭಾರತದ ಇಂಗ್ಲೀಷ್ ಭಾಷಾಂತರ, ಅಧ್ಯಾಯ 148, http://www.sacred-texts.com/hin/m13/m13b113.htm
  31. ಸಂಸ್ಕೃತ ಪಠ್ಯ ಹಾಗೂ ಭಾಷಾಂತರಕ್ಕಾಗಿ, ನೋಡಿ: ತಪಸ್ಸ್ಯಾನಂದ, ವಿಷ್ಣು ಸಹಸ್ರನಾಮ, ರಾಮಕೃಷ್ಣ ಮಿಷನ್ ಪುಟಗಳು. 3-4.[unreliable source?]
  32. "ಶ್ರೀವೈಷ್ಣವಂ". Archived from the original on 2008-02-20. Retrieved 2011-01-31.
  33. "Lord Narayan manifested himself as Lord Swaminarayan". Archived from the original on 2008-04-20. Retrieved 2011-01-31.
  34. Flood, G.D. (2006). The Tantric Body: The Secret Tradition of Hindu Religion. IB Tauris. ISBN 1845110129. ಪು.102-105 - ವಸುದೇವ ಕೃಷ್ಣ (ಕೃಷ್ಣನು ವಸುದೇವನ ಮಗ)ನು ಎಲ್ಲದಕ್ಕೂ ಮೂಲನಾಗಿದ್ದಾನೆ ಅಥವಾ ಆತನೇ ಅಂತಿಮ ಸತ್ಯವಾಗಿದ್ದು ವಸುದೇವ ಹಾಗೂ ಇತರ ಸ್ವರೂಪಗಳಲ್ಲೂ ಒಂದೇ ಆಗಿದ್ದಾನೆ. ಆತನು ಇತರ ಅವತಾರಗಳಾದ ಪುರುಷ, ಅಚ್ಯುತ ಹಾಗೂ ಸತ್ಯರ ನೂರು ಪಟ್ಟು ಅಗ್ನಿಯ ತೇಜಸ್ಸು ಉಳ್ಳವನಾಗಿದ್ದಾನೆ.
  35. [24] ^ ಫ್ಲಡ್‌, ಪು. 94.
  36. ವೈಷ್ಣವ Archived 2012-02-12 ವೇಬ್ಯಾಕ್ ಮೆಷಿನ್ ನಲ್ಲಿ. ಯೂನಿವರ್ಸಿಟಿ ಆಫ್ ಕುಂಬ್ರಿಯಾದ ವೆಬ್‌ಸೈಟ್ ಅನ್ನು 5-21-2008ರಂದು ಪುನಃ ನವೀಕರಿಸಲಾಗಿದೆ
  37. Graham M. Schweig (2005). Dance of Divine Love: The Rڄasa Lڄilڄa of Krishna from the Bhڄagavata Purڄa. na, India's classic sacred love story. Princeton, N.J: Princeton University Press. pp. Front Matter. ISBN 0-691-11446-3.
  38. Valpey, Kenneth Russell (2006). Attending Kṛṣṇa's image: Caitanya Vaiṣṇava mūrti-sevā as devotional truth. New York: Routledge. ISBN 0-415-38394-3.ಅಧ್ಯಾಯ 1
  39. ೩೯.೦ ೩೯.೧ ೩೯.೨ ೩೯.೩ Beck 2005, p. 39, page 39 'According to Ortodox Gaudiya.. Krishnas svarupa, or true form manifests in three ways. His svayam-rupa or transcendent form is self-existent, not dependent on anything. His tadekatma rupa is identical in essence to his true form, though it differs in appearance (and would include such forms of Krishna as Narayana and Vasudeva). His avesa form has Krishna appearing though in varying degrees of possession'
  40. Swami Prabhupada, A.C. Bhaktivedanta. "Sri Caitanya Caritamrta Madhya-lila Chapter 20 Verse 165". Bhaktivedanta Book Trust. Archived from the original on 2008-09-17. Retrieved 2008-05-07.
  41. ರೂಪಾ ಗೋಸ್ವಾಮಿ, Laghu-bhāgavatāmṛta (Pūrva-khaṇḍa, ಪಂಕ್ತಿ 12) ಕುಸಕ್ರತ ದಾಸ, 1990, ಕೃಷ್ಣ ಇನ್ಸ್ಟಿಟ್ಯೂಟ್, ಐಎಸ್‌ಬಿಎನ್ 156130008X
    ananyāpekṣi yad rūpaṁ svayaṁ-rūpaḥ sa ucyate Archived 2008-09-17 ವೇಬ್ಯಾಕ್ ಮೆಷಿನ್ ನಲ್ಲಿ..
  42. ೪೨.೦ ೪೨.೧ ಶ್ರೀಲ ರೂಪಾ ಗೋಸ್ವಾಮಿಯವರ ಶ್ರೀ ಲಾಗು -ಭಾಗವತಾಮೃತ , ಕ್ರುಸಕ್ರತದಾಸನಿಂದ ಭಾಷಾಂತರಿಸಲ್ಪಟ್ಟಿದೆ, 1990, ಕೃಷ್ಣ ಇನ್ಸ್‌ಟಿಟ್ಯೂಟ್, ಐಎಸ್‌ಬಿಎನ್ 156130008X
  43. ರೂಪಾ ಗೋಸ್ವಾಮಿ, Laghu-bhāgavatāmṛta (Pūrva-khaṇḍa, ಪಂಕ್ತಿ 14)
    yad rūpaṁ tad-abhedena svarūpeṇa virājate
    ākṛtyādibhir anyādṛk sa tad-ekātma-rūpakaḥ
    ಆದರೆ ಏಕ ಕಾಲದಲ್ಲಿ " ತದ್-ಏಕಾತ್ಮರೂಪ svayaṁ-rūpa ಸ್ವರೂಪನಾಗಿ ಕಾಣಿಸಿಕೊಳ್ಳುತ್ತಾನೆ. ಅದೇ ಸಂದರ್ಭದಲ್ಲಿ ,ಅವರ ದೈಹಿಕ ಲಕ್ಷಣಗಳು ಹಾಗೂ ನಿರ್ದಿಷ್ಟ ಚಟುವಟಿಕೆಗಳು ಭಿನ್ನವಾಗಿ ಕಾಣುತ್ತವೆ"Swami Prabhupada, A.C. Bhaktivedanta. "Sri Caitanya Caritamrta Madhya-lila Chapter 20 Verse 165". Bhaktivedanta Book Trust. Archived from the original on 2008-09-17. Retrieved 2008-05-07.
  44. ದಾಖಲೆ.10.082.06 ರಾಲ್ಫ್ ಟಿ.ಎಚ್. ಗ್ರಿಫಿತ್, [1896] ಇದನ್ನೇ " ಎಲ್ಲಾ ದೇವಾನುದೇವತೆಗಳೂ ಒಂದಾಗಿದ್ದ ಈ ಅನಾದಿ ಜೀವಾಂಕುರವನ್ನು ಜಲರಾಶಿಗಳು ಪಡೆದವು" ಎಂದು ಭಾಷಾಂತರಿಸಲಾಗಿದೆ. ಇದು ಸೃಷ್ಟಿಯ ಎಲ್ಲವನ್ನೂ ತನ್ನಲ್ಲಡಗಿಸಿಕೊಂಡಿದ್ದ ಇನ್ನೂ ಜನಿಸದೇ ಇದ್ದ ನಾಭಿಯಲ್ಲಿ ವಿಶ್ರಾಂತಿ ಪಡೆಯುತ್ತಿತ್ತು".
  45. ೪೫.೦ ೪೫.೧ ೪೫.೨ Gosvami, J. (1986). Srikrsnasandarbha and its critical study. Jadavpur University. {{cite book}}: External link in |publisher= (help); Unknown parameter |coauthors= ignored (|author= suggested) (help) ಪು xvii-xviii
  46. ೪೬.೦ ೪೬.೧ ಬಿಜಿ 18.64 "ಸರ್ವ-ಗುಹ್ಯ-ತಮಾಂ—ದಿ ಮೋಸ್ಟ್ ಕಾನ್ಫಿಡೆನ್ಷಿಯಲ್ ಆಫ್ ಆಲ್" ಪರ್ಪೋರ್ಟ್  : Kṛṣṇa"
  47. ["ಎಸ್‌ಬಿ 2.9.35: yathā mahānti bhūtāni bhūteṣūccāvaceṣv anu praviṣṭāny apraviṣṭāni tathā teṣu na teṣv aham". Archived from the original on 2011-07-16. Retrieved 2011-01-31. ಎಸ್‌ಬಿ 2.9.35: yathā mahānti bhūtāni bhūteṣūccāvaceṣv anu praviṣṭāny apraviṣṭāni tathā teṣu na teṣv aham]
  48. Hiltebeitel, A. (1984). "The Two Krishnas on One Chariot: Upanisadic Imagery and Epic Mythology". History of Religions. 24 (1): 1–26. doi:10.1086/462971. Retrieved 2008-04-19. {{cite journal}}: Invalid |ref=harv (help)
  49. Sivananda, S. (1958). God Exists. Yoga-Vedanta Forest University.ಉಲ್ಲೇಖ: “ಅಹಂ”ನ ಅರ್ಥ “ನಾನು” ಎಂದರೆ ಸಂಸ್ಕೃತ. “ಇದಂ” ಅರ್ಥ “ಇದು.”
  50. "VEDA - Vedas and Vedic Knowledge Online - Vedic Encyclopedia, Bhakti-yoga in vedas, Library". www.veda.harekrsna.cz. Archived from the original on 2008-05-09. Retrieved 2008-05-04.
  51. "ಚೈತನ್ಯ ಚರಿತಾಮೃತ 2.9.108". Archived from the original on 2008-06-27. Retrieved 2011-01-31.
  52. ೫೨.೦ ೫೨.೧ Jan, Marez. "VEDA - Vedas and Vedic Knowledge Online - Vedic Encyclopedia, Bhakti-yoga in vedas, Library". www.veda.harekrsna.cz. Archived from the original on 2008-05-09. Retrieved 2008-05-04.
  53. ೫೩.೦ ೫೩.೧ Brzezinski, J.K. (1992). "Prabodhananda, Hita Harivamsa and the" Radharasasudhanidhi". Bulletin of the School of Oriental and African Studies, University of London. 55 (3): 472–497. Retrieved 2008-05-04. {{cite journal}}: Invalid |ref=harv (help)"ರಾಧಾಳನ್ನು ಅತ್ಯುನ್ನತ ಲಕ್ಷ್ಮಿ ಎಂದು ಗುರುತಿಸಲಾಗುತ್ತದೆ.."
  54. ಮಧ್ಯ 9.113-114 Archived 2011-05-25 ವೇಬ್ಯಾಕ್ ಮೆಷಿನ್ ನಲ್ಲಿ.:Lakṣmī Archived 2008-05-16 ವೇಬ್ಯಾಕ್ ಮೆಷಿನ್ ನಲ್ಲಿ. ಎಲ್ಲಾ ಲೌಕಿಕ ಸುಖಸಂತೋಷಗಳನ್ನು ತೊರೆದು Vaikuṇṭha Archived 2008-05-04 ವೇಬ್ಯಾಕ್ ಮೆಷಿನ್ ನಲ್ಲಿ. ಧೀರ್ಘ ಕಾಲ ನಿಯಂತ್ರಿತ ತತ್ವಗಳನ್ನು ಅನುಸರಿಸುವುದರಿಂದ ಹಾಗೂ ಇಟ್ಟ ಹರಕೆಗಳನ್ನು ತೀರಿಸುವುದರಿಂದ ಮತ್ತು ಅಪರಿಮಿತ ಕಠೋರವಾದ ಆಚರಣೆಗಳಿಂದ ಮಾತ್ರವೇ ಇದನ್ನು ಹೊಂದಿಕೊಳ್ಳಲು ಸಾಧ್ಯKṛṣṇa.
  55. Brzezinski, J.K. (1992). "Prabodhananda Sarasvati: From Benares to Braj". Bulletin of the School of Oriental and African Studies, University of London. 55 (1): 52–75. doi:10.1017/S0041977X00002640. Retrieved 2008-05-04. {{cite journal}}: Invalid |ref=harv (help)
  56. "ವೇದಗಳು ಸ್ವಯಂ- ಅಧಿಕೃತತೆಯನ್ನು ಹೊಂದದ್ದರೂ, ವಸುದೇವನ ಸರ್ವಾಂತರ್ಯಾಮದ ಕುರಿತು ಸಾಕ್ಷಿಯನ್ನು ಕೊಡುವುದರಿಂದ ಅವುಗಳ ಸತ್ಯತೆಯನ್ನು ಇನ್ನೂ ಖಾತ್ರಿಪಡಿಸಲಾಗಲಿಲ್ಲ"53-54 ೬
  57. K Dasa, (2006). "The Life and Teachings of Krishna dasa Baba" (PDF). Archived from the original (PDF) on 2009-03-04. Retrieved 2008-04-13. {{cite journal}}: Cite journal requires |journal= (help); Invalid |ref=harv (help)CS1 maint: extra punctuation (link)
  58. Anand Karalapakkam, Bhakti List : Archives Wed Apr 19 2000. "krushNAstu bhagavAn swayam". www.ramanuja.org. Retrieved 2008-04-29.{{cite web}}: CS1 maint: numeric names: authors list (link)
  59. Dāsa, Gopīparāṇadhana; Sanātana Gosvāmī (2002). Śrī Brhad Bhāgavatāmrta of Śrīla Sanātana Gosvāmī: translated from the original Sanskrit, with a summary of the author's Dig-darśinī commentary. Los Angeles: Bhaktivedanta Book Trust. p. 920. ISBN 0-89213-345-7. {{cite book}}: |access-date= requires |url= (help)CS1 maint: multiple names: authors list (link)
  60. Rig Veda 10.90
  61. Matchett, Freda (2000). Krsna, Lord or Avatara? the relationship between Krsna and Visnu: in the context of the Avatara myth as presented by the Harivamsa, the Visnupurana and the Bhagavatapurana. Surrey: Routledge. p. 254. ISBN 0-7007-1281-X. ಪು. 5
  62. ಭಾಗವತ ಪುರಾಣ 3.13.23
  63. Matchett 2000, p. 194ಭಗವಾನ್ ಯಜ್ಞ್ನಪುರುಷೊ
  64. Matchett, Freda (2000). Krsna, Lord or Avatara? the relationship between Krsna and Visnu: in the context of the Avatara myth as presented by the Harivamsa, the Visnupurana and the Bhagavatapurana. Surrey: Routledge. p. 254. ISBN 0-7007-1281-X. ಪು.74-75
  65. ಎತದ್ ವಿಷ್ಣೋಃ ಪರಮಂ ಪದಂ ಯೇ ನಿತ್ಯೋದ್ಯೂಕ್ತಃ ಸಮ್ಯಾಯಿಯಂತೆ ನ ಕರ್ಮಂ
    ತೇಜಂ ಅಸೌ ಗೋಪ-ರೂಪಃ ಪ್ರಯತ್ನತ ಪ್ರಕಾಶಯಾದ್ ಆತ್ಮ-ಪದಂ ತದೈವ - " ಅವರು ಸದಾ Viṣṇu' ಭಗವಂತನ ತದ್ರೂಪ ಸ್ವರೂಪವಾದ,ಆತನ ಮೂಲ ರೂಪವಾದ ತನ್ನ ಚರಣ ಕಮಲಗಳನ್ನು ಪ್ರಕಟಿಸುವ ಒಬ್ಬ ದನಕಾಯುವ ಬಾಲಕನನ್ನು ಯಾವಾಗಲೂ ಭಕ್ತಿ ಪೂರ್ವವಕವಾಗಿ ಆರಾಧಿಸುತ್ತಾರೆ."B. V. Tripurari (2004). Gopala-tapani Upanisad. Audarya Press. ISBN 1-932771-12-3.
  66. ಕೃಷ್ಣ, ದಿ ಲಾರ್ಡ್ ಆಫ್ ಲವ್. ಬಾಬಾ ಪ್ರೆಮಾನಂದ ಭಾರತಿ, 1904
  67. Wood, Ernest (2008). Great Systems of Yoga (Forgotten Books). Forgotten Books. ISBN 1-60506-644-3."ಒಂದು ಸಾರಿ ಋಷಿ ಮುನಿಗಳು ಬ್ರಹ್ಮನ ಬಳಿಗೆ ಬಂದು, ಯಾರು ಪರಮ ಶ್ರೇಷ್ಠ ದೇವರಾಗಿದ್ದಾನೆ ?...ಎಂದು ಪ್ರಶ್ನಿಸಿದರು ಶ್ರೀ ಕೃಷ್ಣನೇ ಪರಮ ಶ್ರೇಷ್ಠನಾದ ದೇವರಾಗಿದ್ದಾನೆ ಎಂದು ಉತ್ತರ ಕೊಟ್ಟನು. ಸಾವು ಗೋವಿಂದನಿಗೆ ಹೆದರುತ್ತದೆ.
  68. Stephen Knapp (2005). The Heart of Hinduism: The Eastern Path to Freedom, Empowerment and Illumination. [United States]: iUniverse, Inc. ISBN 0-595-35075-5. ಪು.16: "ಪರಮೋಚ್ಛವಾದ ದೈವಿಕ ಮಹದಾನಂದವು ಭಗವಂತನಾದ ಕೃಷ್ಣನ ಅದ್ವಿತೀಯವಾದ ಪ್ರೀತಿಯಲ್ಲಿಯೇ ಅಡಕವಾಗಿದೆ ಎಂದು ಕೃಷ್ಣ ಉಪನಿಷತ್ತು ನೇರವಾಗಿ ಹೇಳುತ್ತದೆ".
  69. gopa-rūpo hariḥ sakṣan maya-vigraha-dharaṇaḥ
    durbodhaṁ kuhakaṁ tasya mayayā mohitaṁ jagat
    durjayā sa suraiḥ sarvair dhṛṣṭi-rūpo bhaved dvijaḥ
    rudro yena kṛto vaṁsas tasya māyā jagat katham
    balaṁ janaṁ suraṇaṁ vai teṣāṁ janaṁ hṛtaṁ kṣaṇat
    śeṣa-nago bhaved ramaḥ kṛṣṇo brahmaiva sasvatam
    Vyasadeva, Baladevavidyabhusana (1992). Sri Krsna Upanisad and Other Vaisnava Upanisads. [United States]: Krsna Institute. ISBN 1561300780. {{cite book}}: External link in |publisher= (help)
  70. Vyasadeva, Baladevavidyabhusana (1992). Sri Krsna Upanisad and Other Vaisnava Upanisads. [United States]: Krsna Institute. ISBN 1561300780. {{cite book}}: External link in |publisher= (help)
  71. ಸೈಕ್ಲೋಪೀಡಿಯಾ ಆಫ್ ಇಂಡಿಯಾ ಅಂಡ್ ಆಫ್ ಈಸ್ಟ್ರನ್ ಅಂಡ್ ಸದರನ್ ಏಷಿಯಾ , ಎಡ್ವರ್ಡ್ ಬಾಲ್ಫೋರ್. 1871ರಲ್ಲಿ ಪ್ರಕಟಿಸಲಾಗಿದೆ, ಸ್ಕಾಟಿಶ್ ಅಂಡ್ ಆಡೆಲ್ಫಿ ಪ್ರೆಸಸ್. ಪು.604: ಕೃಷ್ಣ ಇಂಡೀಡ್, ಹಿಮ್ಸೆಲ್ಫ್ ಈಸ್ ನಾರಾಯಣ;
  72. ಒಂದು ಚಿಕ್ಕ ಧಾರ್ಮಿಕ ಪಂಗಡವಾದ , ಹರೇ ಕೃಷ್ಣ ಚಳುವಳಿಯ , ಎಡ್ವಿನ್ ಬ್ರಿಯಾಂಟ್, ಮರಿಯಾ ಎಸ್ಟ್ರಾಂಡ್ , 2004, 448 ಪುಟಗಳು, ಪುಟ151: ನಾರಾಯಣನನ್ನು ಗೌರವಪೂರ್ವಕವಾಗಿ ಪೂಜಿಸಲಾಗಿದೆ. ಆದರೆ ಆತನ ಸೌಂದರ್ಯ ಹಾಗೂ ಮಾಧುರ್ಯವು ಆತನ ಪ್ರಭಾವವನ್ನೂ ಮೀರಿದಾಗ, ಆತನನ್ನೇ ಕೃಷ್ಣ ಎನ್ನಲಾಗುವುದು..]
  73. Matchett 2000, p. 2
  74. [218]
  75. ಇದನ್ನು ಕಾಣಬಹುದು. Matchett 2000, p. 153ಭಾಗ್. ಪುರಾಣ 1.3.28
    ete cāṁśa-kalāḥ puṁsaḥ kṛṣṇas tu bhagavān svayam  :indrāri-vyākulaṁ lokaṁ mṛḍayanti yuge yuge
  76. 1.3.28[ಶಾಶ್ವತವಾಗಿ ಮಡಿದ ಕೊಂಡಿ] Swami Prabhupada, A.C. Bhaktivedanta. "Srimad Bhagavatam Canto 1 Chapter 3 Verse 28". Bhaktivedanta Book Trust. Retrieved 2008-05-07.[ಶಾಶ್ವತವಾಗಿ ಮಡಿದ ಕೊಂಡಿ]
  77. "Sri Krishna". www.stephen-knapp.com. Retrieved 2008-04-30.
  78. Dhanurdhara Swami (2000). Waves of Devotion. Bhagavat Books. ISBN 0-9703581-0-5. - "Waves of Devotion". www.wavesofdevotion.com. Archived from the original on 2012-02-05. Retrieved 2008-05-04.ಹರಿ-ನಾಮಾಮೃತ-ವ್ಯಾಕರಣದಲ್ಲಿ, ಜೀವ ಗೋಸ್ವಾಮಿಯವರ ಪರಿಭಾಷಾ ಸೂತ್ರವು ಹೇಳುವಂತೆ ಆನಿಯಾಮೆ ನಿಯಮ-ಕಾರಿಣೀ ಪರಿಭಾಷಾ : ಅಂದರೆ ಪರಿಭಾಷಾ ಸೂತ್ರ ವು ಸ್ಪಷ್ಟವಾಗಿ ವಿವರಿಸದ ಒಂದು ನಿಯಮ ಅಥವಾ ಸಾರಾಂಶವನ್ನು ತಿಳಿಸುತ್ತದೆ". ಇನ್ನೊ೦ದು ವಿಧದಲ್ಲಿ ಹೇಳುವುದಾದರೆ, ಇದು ಒಂದು ಗ್ರಂಥದಲ್ಲಿನ ಅಸಂಬದ್ಧವಾಗಿ ಕಂಡು ಬರುವ ಹೇಳೆಕೆಗಳನ್ನು ಅರ್ಥ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.
  79. Matchett 2000, p. 141
  80. 9.22
  81. "VNN Editorial - 'Uttarayana', The Path Of Light And Darkness". www.vnn.org. Archived from the original on 2008-10-06. Retrieved 2008-05-03.
  82. B. V. Tripurari (2004). Gopala-tapani Upanisad. Audarya Press. ISBN 1-932771-12-3.ಶ್ರೀ ಗೋಪಾಲ ತಪಾನಿ ಭಾಶ್ಯ 1.1:
    ಗೋಪಾಲ-ತಪಾನಿಂ ನೌಮಿ ಕೃಷ್ಣಂ ಸ್ವಯಂ ಈಶ್ವರಂ
    ಕರ-ಸ್ಥಾರವ- ಸಂಕಶಂ ಸಂದರ್ಶಾಯತಿ ಸದ್-ದಿಯಃ
  83. Gosvami, J. (1995). Sri Tattva-sandarbha: The First Book of the Sri Bhagavata-Sandarbha Also Known as Sri-sandarbha. Jiva Institute for Vaisnava Studies. {{cite book}}: Unknown parameter |coauthors= ignored (|author= suggested) (help)
  84. ೮೪.೦ ೮೪.೧
    ಕೃಷ್ಣೋ ವೈ ಪರಮಂ ದೈವತಂ ಗೋವಿದಂ ಮೃತ್ಯು ಬಿಭೇತಿ
    ಗೋಪಿಜನವಲ್ಲಭ-ಜ್ಞಾನೇನ ತಜ್ ಜ್ಞಾತಂ ಭವತಿ ಸ್ವಹಯೇದಂ ಸಂಸಾರಿ
  85. "ಆಲ್ಟರ್ನೇಟೀವ್ ಟ್ರಾನ್ಸ್ಲೇಶನ್ ಆಫ್ ಗೋಪಾಲ-ತಪಾನಿ ಉಪನಿಷದ್". Archived from the original on 2011-07-19. Retrieved 2011-01-31.
  86. ಎಸ್‌ಬಿ 3.2.11
  87. "ಚೈತನ್ಯ ಚರಿತಾಮೃತ ಆದಿ 3.10". Archived from the original on 2011-03-07. Retrieved 2011-01-31.
  88. Rosen, S.J. (2006). Essential Hinduism. Praeger Publishers.
  89. ಸ್ವಾಹಾ ಎನ್ನುವ ಪದವು ಯಜ್ಞ ವೇದಿಯ ಬೆಂಕಿಗೆ ಕಾಣಿಕೆಗಳನ್ನು ಸಮರ್ಪಿಸುವಾಗ ಮಾಡುವ ಒಂದು ಮಂತ್ರವಾಗಿದೆ..5 ಇದು ನೂಲ ಪದವಾದ ಅಃ ಎಂಬುದರಿಂದ ಉಗಮಗೊಂಡಿದೆ.( ಸು ಮತ್ತು ಹು ಎಂದರೆ ವಿಧಿಯಂತೆಯೇ ನಡೆದಿದೆ ಎಂದರ್ಥ) ಈ ಶಬ್ದ ನಿಷ್ಪತ್ತಿಯನ್ನು ಮೊನಿಯರ್-ವಿಲಿಯಮ್ಸ್ ರವರು ಪ್ರಾಯೋಗಿಕವಾಗಿ ಒಪ್ಪುತ್ತಾರೆ. ಮೂಲ ಕ್ರಿಯಾಪದವಾದ ವಾಹವನ್ನು ನಿರ್ದಿಷ್ಟ ಕಾಲದಲ್ಲಿ ಮಾತ್ರ ಬಳಸಲಾಗಿದೆ. ಮೋನಿಯರ್ ವಿಲಿಯಂ ರವರು ಇದಕ್ಕೆ "ಸ್ವಸ್ತಿ"! ಎಂಬ ಅರ್ಥವನ್ನು ಕೊಡುತ್ತಾರೆ. ನಾಮಪದವಾಗಿ "ಶುಭ ಉಂಟಾಗಲಿ" ಎಂಬ ಅರ್ಥವನ್ನು ಕೊಡುತ್ತದೆ: "ಒಂದು ಕಾಣಿಕೆ ಅಥವಾ ಬಲಿಯನ್ನು ಇಲ್ಲಿ ಮೂರ್ತೀಕರಿಸಲಾಗಿದೆ". ಸ್ವಾಹುತಿ ಹಾಗೂ ಸ್ವಾಹ್ವಾನ ಇವೆರಡೂ ಋಗ್ವೇದಗಳಲ್ಲಿ ಕಂಡು ಬರುತ್ತವೆ.
  90. Matchett 2000, p. 184
  91. ಓಂ ನಮೋ ಭಗವತೇ ಸರ್ವ- ಭೂತಾತ್ಮನೇ ವಸುದೇವ ಸರ್ವಾತ್ಮ- ಸಂಯೋಗ-ಯೋಗ-ಪಿತಾತ್ಮನೇ ನಮಃ-" ಕಮಲವನ್ನು ಹೋಲುವ ಅಲೌಕಿಕ ಲೋಕದಲ್ಲಿರುವ ಸರ್ವ ವ್ಯಾಪಿಯಾದ ಪರಮೋಚ್ಛ ದೇವನಾದ ಭಗವಂತನಾದ ವಸುದೇವನಿಗೆ ನನ್ನ ಗೌರವಪೂರ್ವಕವಾದ ನಮನಗಳನ್ನು ಸಲ್ಲಿಸುತ್ತೇನೆ".
  92. ಕಾರ್ನಿಕಾಯಂ ಲಿಕೆಡ್ ವಾಹ್ನಿ-
    ಪುತಿತಂ ಮಂಡಲ-ದ್ವಯಂ
    ತಸ್ಯ ಮಧ್ಯೆ ಲಿಕೆಡ್ ಬಿಜಮ್
    ಸಾಧ್ಯಾಖ್ಯಂ ಕರ್ಮ ಸಮ್ಯುತಂ
  93. Cult, P.C.S. (1927). "An Introduction To The Post-chaitanya Sahajia Cult". Journal. {{cite journal}}: Invalid |ref=harv (help) -ಚೈತನ್ಯ ಸಹಜ ಪೂಜೆ ಹಾಗೂ ಸಾಂಪ್ರದಾಯಿಕ ಗೌಡಿಯಾ ಸಂಸ್ಕೃತಿಯ ಆಚರಣೆಯಲ್ಲಿ ಕಾಮ ಗಾಯತ್ರಿಯನ್ನು ಉಲ್ಲೇಖಿಸುತ್ತದೆ.
  94. Mukherjee, P. (1979). History of the Chaitanya Faith in Orissa. Manohar. ಗೋಪಾಲ ಮಂತ್ರದ ಬಳಕೆ ಹಾಗೂ ಅದರ ಪ್ರಾಮುಖ್ಯತೆಯನ್ನು ಉಲ್ಲೆಖಿಸುತ್ತದೆ
  95. Rosen, S.J. (2004). "Who Is Shri Chaitanya Mahaprabhu?". The Hare Krishna Movement: the Postcharismatic Fate of a Religious Transplant. Columbia University Press. ISBN 9780231122566. Retrieved 2008-04-19. {{cite journal}}: Invalid |ref=harv (help)"ಹತ್ತು ಅಕ್ಷರಗಳ ಗೋಪಾಲ ಮಂತ್ರವನ್ನು ಆತನಿಗೆ ನೀಡಲಾಯಿತು, ಇದು ಒಂದು ಗುಪ್ತ ಮಂತ್ರ"
  96. ಅಧ್ಯಾಯ: ಕೃಷ್ಣ ಅಂಡ್ ಹಿಸ್ ಕಲ್ಟ್ . ಎಮ್.ಎಲ್. ವರಲ್‌ಪಾಂಡೆ ಅವರ ಕೃಷ್ಣಾ ಥಿಯೇಟರ್ ಇನ್ ಇಂಡಿಯಾ , ಪು.6; 2002. ಐಎಸ್‌ಬಿಎನ್ 0688168949
  97. ಬನೇರ್ಜಿಯಾ, 1966, ಪುಟ 20
  98. ೯೮.೦ ೯೮.೧ Doniger, Wendy (1993). Purāṇa perennis: reciprocity and transformation in Hindu and Jaina texts. Albany, N.Y: State University of New York Press. p. 331. ISBN 0-7914-1381-0.ಪು.210-212
  99. ೯೯.೦ ೯೯.೧ ಎ ಕಾರ್ಪಸ್ ಆಫ್ ಇಂಡಿಯನ್ ಸ್ಟಡೀಸ್: ಪ್ರೊಫೆಸರ್ ಗೌರಿನಾಥ್ ಶಾಸ್ತ್ರಿಯವರ ಗೌರವಾರ್ಥ ಪ್ರಬಂಧಗಳು, ಪುಟ 150, 1980 - 416 ಪುಟಗಳು.
  100. 386 ಪುಟಗಳಲ್ಲಿ 76 ಪುಟ  : ವಾಸುದೇವ ಕೃಷ್ಣನನ್ನು ಆರಾಧಿಸುವಲ್ಲಿ ಭಾಗವತ ಧರ್ಮ ... ವಾಸುದೇವ ಕೃಷ್ಣ ಹಾಗೂ ಅವರು ಭಾರತದ ವೈಷ್ಣವ ಧರ್ಮದ ಪೂರ್ವಜರಾಗಿದ್ದಾರೆ.Ehrenfels, U.R. (1953). "The University Of Gauhati". Dr. B. Kakati Commemoration Volume. {{cite journal}}: Invalid |ref=harv (help)
  101. ಪುಟ 98: ಮಹಾಭಾರತದಲ್ಲಿ, ವಾಸುದೇವ ಕೃಷ್ಣನನ್ನು ಅತ್ಯುತ್ತಮ ಭಗವಂತನೆಂದು ಗುರುತಿಸಲಾಗಿದೆ.Mishra, Y.K. (1977). Socio-economic and Political History of Eastern India. Distributed by DK Publishers' Distributors.
  102. Vaidisa, B. (1987). "The Impact Of Vaisnavism—excavated Remains From Vidisha (mp)". Vaisnavism in Indian Arts and Culture: Collected Papers of the University Grants Commission National Seminar on" Impact of Vaisnavism on the Indian Arts". {{cite journal}}: Invalid |ref=harv (help); Unknown parameter |coauthors= ignored (|author= suggested) (help)CS1 maint: extra punctuation (link)
  103. bhaktiḥ | 4.3.96 acittāt adeśakālāt ṭhak | 4.3.97 mahārājāt ṭhañ | 4.3.98 vāsudeva arjunābhyāṁ vun | ಪಾಣಿನಿ 4.3.95
  104. Singh, R.R. (2007). Bhakti And Philosophy. Lexington Books. ISBN 0739114247. ಪು. 10: ", ಎರಡನೆಯ ಶತಮಾನದ ಬಿ.ಸಿ.ಯ ವಿವರಣೆಗಾರ ಪತಂಜಲಿಯು [ಪಾಣಿನಿಯ] ವಾಸುದೇವಕ ಪದವನ್ನಿ ಹೀಗೆ ವಿವರಿಸುತ್ತಾನೆ "ವಾಸುದೇವನ ಅನುಯಾಯಿಯು ದೇವರುಗಳ ದೇವ."
  105. ಭಗ್ಪು. 2.7.21: dhanvantariś ca bhagavān svayam eva kīrtir nāmnā nṛṇāṁ puru-rujāṁ ruja āśu hanti yajñe ca bhāgam amṛtāyur-avāvarundha āyuṣya-vedam anuśāsty avatīrya loke. ಭಗವಂತನು ತನ್ನ ಧನವಂತರಿಯ ಅವತಾರದಲ್ಲಿ ಕೇವಲ ತನ್ನ ನಾಮ ಸ್ಮರಣೆಯಿಂದಲೇ ದೀರ್ಘಕಾಲದಿಂದ ವ್ಯಾಧಿಯಿಂದ ಬಳಲುತ್ತಿರುವವರನ್ನು ಗುಣಪಡಿಸಲು ಶಕ್ತನಾಗಿದ್ದಾನೆ. ಆತನಿಂದಲೇ ಎಲ್ಲಾ ದೇವತೆಗಳೂ ಅಮರತ್ವವನ್ನು ಪಡೆಯಲು ಸಾಧ್ಯವಾಗಿದೆ. ಈ ರೀತಿಯಲ್ಲಿ ಪರಮಶ್ರೇಷ್ಠನಾದ ಭಗವಂತನ ಮಹಿಮೆ ಸದಾ ಇರುತ್ತದೆ. ಆತನು ಯಜ್ಞದ ಪಾಲನ್ನೂ ಬಯಸುವವನಾಗಿದ್ದು, ಆತನಿಂದಲೇ ವೈದ್ಯಕೀಯ ವಿಜ್ಞಾನ ಆರಂಭಗೊಂಡಿದೆ ಅಥವಾ ವಿಶ್ವದಲ್ಲಿ ಔಷಧದ ತಿಳುವಳಿಕೆ ಪ್ರಾರಂಭವಾಗಿದೆ.
  106. ಭಾಗ. ಪು. 5.24.27: tasyānucaritam upariṣṭād vistariṣyate yasya bhagavān svayam akhila-jagad-gurur nārāyaṇo dvāri gadā-pāṇir avatiṣṭhate nija-janānukampita-hṛdayo yenāṅguṣṭhena padā daśa-kandharo yojanāyutāyutaṁ dig-vijaya uccāṭitaḥ.' ಸುಖ ದೇವ ಗೋಸ್ವಾಮಿ ಮುಂದುವರೆಸಿ: ನನ್ನ ಪ್ರೀತಿಯ ಅರಸನೇ , ಬಲಿ ಚಕ್ರವರ್ತಿಯ ಗುಣಗಳನ್ನು ಹೇಗೆ ವರ್ಣಿಸಲಿ? ಎನ್ನುತ್ತಾರೆ. ತನ್ನ ಭಕ್ತರನ್ನು ಅತೀವವಾಗಿ ಕರುಣಿಸುವ ಮೂರು ಲೋಕಗಳ ಒಡೆಯನಾದ ದೇವಾದಿದೇವನು , ಒಂದು ಕೋಲನ್ನು ಹಿಡಿದುಕೊಂಡು ಬಲಿಚಕ್ರವರ್ತಿಯ ಮನೆಯ ಬಾಗಿಲಿನ ಮುಂದೆ ಪ್ರತ್ಯಕ್ಷನಾಗುತ್ತಾನೆ. Rāvaṇaಅತ್ಯಂತ ಪ್ರಭಲವಾದ ದುಷ್ಟ ಶಕ್ತಿಯೊಂದು (ಭೂತ) ಬಲಿ ಚಕ್ರವರ್ತಿಯನ್ನು ಗೆಲ್ಲಲ್ಲು ಬಂದಾಗ, ವಾಮನದೇವನು ತನ್ನ ಪಾದದಿಂದ ಆತನನ್ನು ಎಂಬತ್ತು ಸಾವಿರ ಮೈಲುಗಳಷ್ಟು ದೂರ ತುಳಿದು ರಕ್ಷಿಸುತ್ತಾನೆ. ನಾನು ಬಲಿ ಚಕ್ರವರ್ತಿಯ ಗುಣ ಹಾಗೂ ಆತನ ನಡತೆಯ ಬಗ್ಗೆ ನಂತರ ವಿವರಿಸುತ್ತೇನೆ( ಶ್ರೀಮದ್ಬಗವದ್ಗೀತೆಯ ಎಂಟನೆಯ ಪರಿಚ್ಛೇಧ)
  107. ಭಾಗ. ಪು. 7.1.1 samaḥ priyaḥ suhṛd brahman bhūtānāṁ bhagavān svayam indrasyārthe kathaṁ daityān avadhīd viṣamo yathāಅರಸನುParīkṣit ವಿಚಾರಿಸುತ್ತಾನೆ: ನನ್ನ ಪ್ರಿಯನೇbrāhmaṇa, ಪರಮಶ್ರೇಷ್ಠನಾದ ದೇವರು ಎಲ್ಲರಿಗೂ ಒಳ್ಳಯೆದನ್ನೇ ಬಯಸುವವನಾಗಿದ್ದು, ಪ್ರತಿಯೊಬ್ಬರಿಗೂ ಹತ್ತಿರದವನಾಗಿದ್ದು ನಿಷ್ಪಕ್ಷಪಾತಿಯಾಗಿದ್ದಾನೆ. ಹಾಗಾದರೆ ,ಆತನು ನರಮಾನವನಂತೆ ಪಕ್ಷಪಾತಿಯಾಗಿ ಇಂದ್ರನನ್ನು ರಕ್ಷಿಸುವುದಕ್ಕೋಸ್ಕರ ಇಂದ್ರನ ವೈರಿಗಳನ್ನು ಕೊಂದನೊ? ಒಬ್ಬ ವ್ಯಕ್ತಿಯು ಎಲ್ಲರಿಗೂ ಸಮಾನನಾಗಿ ,ಕೆಲವರಿಗೆ ಪಕ್ಷಪಾತಿಯಾಗಿ ಮತ್ತು ಇತರರಿಗೆ ವೈರಿಯಾಗಿರಲು ಸಾಧ್ಯವೇ?
  108. ಭಾಗ. ಪು. 8.5.4 patnī vikuṇṭhā śubhrasya vaikuṇṭhaiḥ sura-sattamaiḥ tayoḥ sva-kalayā jajñe vaikuṇṭho bhagavān svayam ಶುಭ್ರ ಮತ್ತು ಆತನ ಪತ್ನಿಯನ್ನೊಡಗೂಡಿ Vikuṇṭhā, ಪರಮಶ್ರೇಷ್ಥನಾದ ಭಗವಂತನುVaikuṇṭha, ಆತನ ಇತರ ಸ್ವರೂಪಗಳಾದ ದೇವಾನು ದೇವತೆಗಳೊಂದಿಗೆ ಪ್ರತ್ಯಕ್ಷನಾಗುತ್ತಾನೆ.
  109. "ಇಂತಹ ಆತ್ಮೀಕ ವಿಮೋಚನೆಯಲ್ಲಿ ಮೋಕ್ಷ ಹೊಂದಿದ ಆತ್ಮಗಳ, ಆತ್ಮೀಕ ಸ್ವರೂಪಗಳು ಭರಿತವಾಗಿರುತ್ತವೆ. ಈ ಸ್ಥಳದಲ್ಲಿ ಭಗವಂತನಾದ ಕೃಷ್ಣನು , ತನ್ನ ಮೂಲ ಪರಮೋಚ್ಛ ದೈವ ಸ್ವರೂಪದಲ್ಲಿ ಗತಕಾಲಗಳ ಪರಮಾನಂದವನ್ನು ಅನುಭವಿಸುತ್ತಾ ಇರುತ್ತಾನೆ". ಅಮ್ನಯ ಸೂತ್ರ 3.5 ಸಂಪತ್ತಿ-ಪ್ರಕರಣ ಸೂತ್ರ 114

ಉಲ್ಲೇಖಗಳು ಬದಲಾಯಿಸಿ

  • Elkman, S.M. (1986). Jiva Gosvamin's Tattvasandarbha: A Study on the Philosophical and Sectarian Development of the Gaudiya Vaisnava Movement. Motilal Banarsidass Pub. {{cite book}}: Unknown parameter |coauthors= ignored (|author= suggested) (help)
  • Flood, G.D. (2006). The Tantric Body: The Secret Tradition of Hindu Religion. IB Tauris. ISBN 1845110129.
  • Kennedy, M.T. (1925). The Chaitanya Movement: A Study of the Vaishnavism of Bengal. H. Milford, Oxford university press.
  • Ramanuja (1962). "The Vedanta Sutras with the Commentary by Ramanuja". Delhi: Motilal Banarsidass. {{cite journal}}: Cite journal requires |journal= (help); Invalid |ref=harv (help); Unknown parameter |coauthors= ignored (|author= suggested) (help)
  • Richard Thompson, Ph. D. (December 1994). "Reflections on the Relation Between Religion and Modern Rationalism". Archived from the original on 2011-01-04. Retrieved 2008-04-12. {{cite journal}}: Cite journal requires |journal= (help); Invalid |ref=harv (help)
  • Gupta, Ravi M. (2004). Caitanya Vaisnava Vedanta: Acintyabhedabheda in Jiva Gosvami's Catursutri tika. University Of Oxford.
  • Gupta, Ravi M. (2007). Caitanya Vaisnava Vedanta of Jiva Gosvami's Catursutri tika. Routledge. ISBN 0415405483. {{cite book}}: Cite has empty unknown parameter: |coauthors= (help)
  • Ganguli, K.M. (1883 -1896). The Mahabharata of Krishna Dwaipayana Vyasa. Kessinger Publishing. {{cite book}}: Check date values in: |year= (help)

ಹೆಚ್ಚಿನ ಓದಿಗಾಗಿ ಬದಲಾಯಿಸಿ

ಬಾಹ್ಯ ಕೊಂಡಿಗಳು ಬದಲಾಯಿಸಿ