ಸದಸ್ಯ:Manoj.c.ammannavar/ನನ್ನ ಪ್ರಯೋಗಪುಟ
ಹುನಗುಂದದ ಸಂಗಮೇಶ್ವರ ದೇವಾಲಯ ಮತ್ತು ಬಸವೇಶ್ವರ ಮಂಟಪ ಬದಲಾಯಿಸಿ
ಆರಂಭ (ಸಂಗಮೇಶ್ವರ ದೇವಾಲಯ ಮತ್ತು ಜಾತ್ರ ಮಹೊತ್ಸವ) ಬದಲಾಯಿಸಿ
ಬಹಳ ಇತಿಹಾಸ ಹೊಂದಿರುವ ನಮ್ಮ ಹುನಗುಂದ ತಾಲೂಕಿನ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಗಳು ಬದಲಾವಣೆ ಕಾಲಕ್ಕೆ ಸಿಕ್ಕಿ ಹಲವಾರು ಬದಲಾವಣೆಗಳು ಕಂಡಿದ್ದರೂ, ಜಾತ್ರೆ ಉತ್ಸವಗಳು ಜನಜಾಗೃತಿಗಳಿಗೆನು ಇಂದು ಕುಂದಿಲ್ಲ. ಈ ಎಲ್ಲ ಉತ್ಸವಗಳು ನಮ್ಮ ಕಲಾ ಪ್ರಕಾರ. ಇವು ನಮ್ಮ ಸಂಸ್ಕೃತಿಗಳನ್ನು ಸೌರಕ್ಷಿಸುವುದಲ್ಲದೆ ಮುಂದಿನ ಜನಾಂಗಕ್ಕೆ ಇತಿಹಾಸವನ್ನು ತಿಳಿಸುತ್ತ ಭವಿಷ್ಯತ್ತನ್ನು ನೀಡುತ್ತವೆ. ನಮ್ಮ ಹುನಗುಂದದ ಸಂಗಮೇಶ್ವರ ಜಾತ್ರೆ, ಹಾಗು ಸಂಗಮೇಶ್ವರ ದೇವಾಲಯ ಬಗ್ಗೆ ತಿಳಿಯೊಣ.
ವೀರಶೈವ ಸಮಾಜದವರಿಂದ 1920 ರಲ್ಲಿ ಶ್ರೀ ಸಂಗಮೇಶ್ವರ ದೇವಾಲಯ ನಿರ್ಮಾಣವಾಯಿತು. ಈ ದೇವಾಲಯವೂ ಮೊದಮೊದಲು ಮಹಾಂತೆಶ ಮಠದ ಆಡಳಿತದಲ್ಲಿತ್ತು, ನಂತರ ಇದರ ಟ್ರಸ್ಟ್ ಮಾಡಿದ್ದಾರೆ. ಈ ದೇವಾಲಯವು ಹುನಗುಂದದ ಸಂಗಮೇಶ್ವರ ಒಣೆಯಲ್ಲಿದೆ. ಸಂಗಮೇಶ್ವರ ದೇವಾಲಯವು ಹುನಗುಂದಲ್ಲಿ ಎರಡು ಜಾಗದಲ್ಲಿದೆ. ಒಂದು ಊರಿನೊಳಗೆ, ಅಲ್ಲಿ ತೇರು ಇದೆ. ಇನ್ನೊಂದು ಬೆಟ್ಟದ ಮೇಲೆ. ಜಾತ್ರ ಮಹೋತ್ಸವದ ದಿನ ಊರಿನಿಂದ ಬೆಟ್ಟದ ದೇವಾಲಯಕ್ಕೆ ಹೋಗುತ್ತದೆ.
ಜಾತ್ರ ಮಹೋತ್ಸವ ಬದಲಾಯಿಸಿ
ಪ್ರತಿ ವರ್ಷವೂ ಶ್ರೀ ಸಂಗಮೇಶ್ವರ ಜಾತ್ರ ಮಹೋತ್ಸವವು ಶ್ರಾವಣ ಮಾಸದ ಕೊನೆಯ ಸೋಮವಾರ ಸಾಯಂಕಾಲ ಐದು ಘಂಟೆಗೆ ಒಳ್ಳೆಯ ವಿಜೃಂಭಣೆಯಿಂದ ನಡೆಯುವುದು. ಪೂಜ್ಯ ಡಾ. ಮಹಾಂತಪ್ಪಗಳವರು ಚಿತ್ತರ್ಗಿ ಸಂಸ್ತಾನ ಮಠ ಅವರ ಅಪ್ಪಣೆಯ ಮೇರೆಗೆ ಜಾತ್ರ ಮಹೋತ್ಸವವು ಜರಗುವುದು. ಜಾತ್ರೆಗಿಂತ ಐದು ದಿನ ಮೊದಲು ಬಸವ ಪಠ ಯೋಜಿಸಲಾಗುವುದು. ಮಧ್ಯಾನ ಮೂರು ಘಂಟೆಗೆ ಶ್ರೀ ವಿಜಯ ಮಹಾಂತೆಶ ಮಠದಿಂದ ದೇವರ ಮೆರೆವನಿಗೆಯು ಬೃಹತ್ ಮೆರೆವೆನಗಿಯೊಂದಿಗೆ ಸಂಗಮೇಶ್ವರನ ಪಾದಘತ್ತೆಗೆ ಬರುವುದು. ಒಟ್ಟು ಐದು ದಿನ ಜಾತ್ರಾ ಕಾರ್ಯಕ್ರಮಗಳು ಇರುವವು. ರಥಕ್ಕೆ ಒಟ್ಟು ಒಂಬತ್ತು ಕಲಶಗಳು ಒಂದೊಂದು ಒಣೆಯಿಂದ ಕಲಶ ಬರುವುದು. ಒಂದು ಒಣೆಯವರಿಗೆ ಹಜ ಮತ್ತು ಇನ್ನೊಂದು ಒಣೆಯವರಿಗೆ ಬಸವ ಪಠ ಎರಿಸುವ ಕೆಲಸ. ಹೀಗೆ ಹುನಗುಂದದಲ್ಲಿ 11 ಒಣೆಗಳಿಗೆ ಸಮನಾದ ಜಾತ್ರೆ ಕೆಲಸ ಹಂಚಿಕೆ ಮಾಡಲಾಗಿದೆ. ಜಾತ್ರೆಮಹೊತ್ಸವ ದಿನದಂದು ಸಾಮೂಹಿಕ ವಿವಾಹ ಹಾಗು ಐನಾಛಾರ ಜರಗುವುವು. ವಿಶೇಷ ಏನೆಂದರೆ ವಿವಾಹದಲ್ಲಿ ಜಾತಿ ನಿರ್ಬಂಧವಿಲ್ಲ, ಮರುಮದುವೆಗೆ ಅವಕಾಶವೂ ಇಲ್ಲ. ಶ್ರಾವಣ ಮಾಸದ ಕೊನೆಯ ಸೋಮವಾರದ ಹಿಂದಿನ ರಾತ್ರಿ ಶ್ರೀ ಸಂಗಮೇಶ್ವರ ತೆರಿನ ಕಲಶವು ಸುಮಾರು ಎಂಟೂವರೆ ಗಂಟೆಗೆ ಶ್ರೀ ನೀಲಗಂಗ ದೇವಸ್ಥಾನದಲ್ಲಿ ಪೂಜೆ ನೆರೆವೆರಿಸಿಕೊಂಡು ರಾತ್ರಿ ಸುಮಾರು ಒಂಬತ್ತು ಗಂಟೆಗೆ ಲಿಂಗದ ಕಟ್ಟಿಗೆ ಬರುವುದು. ಅಲ್ಲೇ ಬೇರೆ ಬೇರೆ ಒಣೆಯ ಒಂಬತ್ತು ಕಲಶಗಳು ಸೇರುವವು. ರಾತ್ರಿ ಭಜನಪದಗಳು ಇರುವವು, ಮರುದಿನ ಮೆರವಣಿಗೆ ಮೂಲಕ ಶ್ರೀ ಸಂಗಮೇಶ್ವರ ದೇವಾಲಯಕ್ಕೆ ಬರುವವೂ. ಸಾಯಂಕಾಲ ತೇರನ್ನು ಎಳೆಯುವುದು. ಸರ್ವಧರ್ಮೀಯರು ಇದರಲ್ಲಿ ಭಾಗವಹಿಸುವರು. ರಾತ್ರಿ ಸಂಗೀತರ ಸಮಜರೀ ಕಾರ್ಯಕ್ರಮ, ನಾಟಕ ನಡೆಯುವವು. ಮರುದಿನ ಮಂಗಳವಾರ ಹೊಂಡದ ಕೆರೆಯಲ್ಲಿ ಜಂಗೀ ಕುಸ್ತೀ ಏರ್ಪಡಿಸಲಾಗಿರುತ್ತದೆ, ಇನ್ನೂ ಅನೇಕ ಕಾರ್ಯಕ್ರಮಗಳ ಜೊತೆಗೆ ಈ ಜಾತ್ರ ಮಾಹೊತ್ಸವ ನಡೆಯುತ್ತದೆ.
ಬಸವ ಮಂಟಪ, ಹುನಗುಂದ ಬದಲಾಯಿಸಿ
ಹುನಗುಂದದ ವಿಜಯ ಮಹಾಂತೆಶ ಶಾಲೆಯ ಮುಂದೆ ಇರುವ ಬಸವ ಮಂಟಪ ಈ ಪಟ್ಟಣದ ಎರಡನೆಯ ವಾರ್ಡಿಗೆ ಸೇರುತ್ತದೆ. ಬಸವ ಮಂಟಪಕ್ಕೆ ವಿಜಯ ಮಹಾಂತೆಶ ಮಠ ಎಂದೂ ಕರೆಯುತ್ತಾರೆ. ಬಸವ ಮಂಟಪದಲ್ಲಿ ಹುಣ್ಣಿಮೆಯ ರಾತ್ರಿ ಭಜನೆ ಹಾಗು ಇತರೆ ಕಾರ್ಯಾಕ್ರಮಗಳು ನಡೆಯುತ್ತದೆ. ಅಲ್ಲದೆ ಈ ಮಂಟಪದಲ್ಲಿ ಹುನಗುಂದ ಪಟ್ಟಣದ ಮತ್ತು ಸುತ್ತಮುತ್ತಲಿನ ಊರಿನ ಜನರು ವಿವಾಹ ಕಾರ್ಯಕ್ರಮಗಳು, ಹಾಗು ಹಲವಾರು ಕಾರ್ಯಕ್ರಮವನ್ನು ನಡೆಸುತ್ತಾರೆ. ನಾನು ಈ ಮಂಟಪದಲ್ಲಿ ನಡೆದ 444ನೇ ಶಿವಾನುಭವ ಕಾರ್ಯಕ್ರಮ ಸಂದರ್ಭದಲ್ಲಿದೆ. ವಿಜಯ ಮಹಾಂತೆಶ್ವರ ಶಾಲೆಯಲ್ಲಿ ನಾನು ಓದುತ್ತಿರುವಾಗ ಹಲವಾರು ಬಾರಿ ನಾನು ಅಲ್ಲಿಗೆ ಹೋಗುತ್ತಿದೆ. ಅಲ್ಲದೆ ಈ ಮಂಟಪವು ನಮ್ಮ ಅಜ್ಜನ ಮನೆಯ ಹತ್ತಿರವೇ ಇರುವುದರಿಂದ ಈ ಮಂಟಪವು ಪರಿಚಿತವಾಗಿದೆ. ಈ ಮಂಟಪದಲ್ಲಿ ತೆರೆದ ಜಾಗ ಇರುವುದರಿಂದ ಹಲವಾರು ನಿರಾಶ್ರಿತರು ಮಲಗಲು ವ್ಯವಸ್ಥಿತವಾಗಿದೆ. ಭಕ್ತರಿಗೆ ನೆರೆಲನ್ನು ಕೊಡುತ್ತಾ ಈ ಮಂಟಪವನ್ನು ತುಂಬ ಶುಚಿಯಾಗಿ ನೋಡಿಕೊಳ್ಳಲಾಗಿದೆ. ನನ್ನ ತಂದೆ ತಾಯಿಯ ವಿವಾಹವು ಈ ಮಂಟಪದಲ್ಲಿ ನಡೆದಿದ್ದು ಎಂದು ನನ್ನ ಪೋಷಕರು ಹೇಳಿದ ನೆನಪಿದೆ. ತಲತಲಾಂತರದಿಂದ ನಡೆದು ಬರುತ್ತಿರುವ ಕಾರ್ಯಕ್ರಮಗಳು ಇಂದಿಗೂ ನಡೆಯುತ್ತಿದೆ.
ಗಮನಾರ್ಹ ಸ್ಥಳಗಳು ಬದಲಾಯಿಸಿ
ಹುನಗುಂದ ತಾಲೂಕು ಹಲವಾರು ಗಮನಾರ್ಹ ಸ್ಥಳಗಳಿಗೆ ಹತ್ತಿರವಾಗುತ್ತದೆ. ಅವುಗಳಲ್ಲಿ ಕೆಲುವು ಬಾದಾಮಿ ಗುಹೆಗಳು, ಐಹೊಳೆ, ಪಟ್ಟದಕಲ್ಲು, ಮಹಕುಟಾ, ಕೂಡಲ ಸಂಗಮ ಕ್ಷೇತ್ರ, ಅಲಮಟ್ಟಿ ಡ್ಯಾಮ್ ಹಾಗು ಮುಂತಾದ.