ಹಿಂದೂಧರ್ಮದಲ್ಲಿ, ಕೂರ್ಮಾವತಾರವು ಮತ್ಸ್ಯಾವತಾರದ ನಂತರ ಬರುವ ಮತ್ತು ವರಾಹಾವತಾರದ ಮೊದಲು ಬರುವ ವಿಷ್ಣುವಿನ ಎರಡನೇ ಅವತಾರ. ಮತ್ಸ್ಯಾವತಾರದಂತೆ ಈ ಅವತಾರವೂ ಸತ್ಯಯುಗದಲ್ಲಿ ಸಂಭವಿಸಿತ್ತು. ಕೂರ್ಮಾವತಾರಕ್ಕೆ ಸಮರ್ಪಿತ ದೇವಾಲಯಗಳು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿನ ಕೂರ್ಮಾಯಿ ಮತ್ತು ಶ್ರೀಕೂರ್ಮಂ ನೆಲೆಗೊಂಡಿವೆ.

ಕೂರ್ಮ (ಆಮೆ)
ಕೂರ್ಮದ ರೂಪದಲ್ಲಿ ವಿಷ್ನುವಿನ ಅವತಾರ
ದೇವನಾಗರಿकुर्म
ಸಂಲಗ್ನತೆವಿಷ್ಣುವಿನ ಅವತಾರ
ಆಯುಧಚಕ್ರ
ಸಂಗಾತಿಲಕ್ಷ್ಮಿ

ಶ್ರೀಕೂರ್ಮಂ ಬದಲಾಯಿಸಿ

 
ಭಾರತದ ಪಶ್ಚಿಮ ಬಂಗಾಳದ ಸಿಯರ್ಸೋಲ್ ರಾಜ್ಬರಿಯ ಹಿತ್ತಾಳೆ ರಥದಲ್ಲಿ ಕುರ್ಮಾ ಅವತಾರ್

ಶ್ರೀಕೂರ್ಮಂ ಆಂಧ್ರ ಪ್ರದೇಶದ ಶ್ರೀಕಾಕುಳಂ (శ్రీకాకుళం)ಜಿಲ್ಲೆಯಲ್ಲಿದೆ. ಶ್ರೀಕಾಕುಳಂ ಪಟ್ಟಣದಿಂದ ೧೬ ಕಿಲೋಮೀಟರುಗಳ ದೂರದಲ್ಲಿದೆ. ರೈಲು ಮಾರ್ಗವಿಲ್ಲ. ಅದರೆ ಬಸ್ಸು ಸೌಕರ್ಯವಿದೆ. ಹಳೆ ಬಸ್ ಸ್ಟಾಂಡಿನಿಂದ ಪ್ರತಿ ೧೫ ನಿಮಿಷಗಳಿಗೆ ಶ್ರೀಕಾಕುಳಂ ಪಟ್ಟಣದಿಂದ ಆಂಧ್ರಪ್ರದೇಶ ರವಾಣೆ ಸಾರಿಗೆ ಸಂಸ್ಥೆ ಬಸ್ಸುಗಳು ತಿರುಗಾಡುತ್ತವೆ. ಉದಯಕಾಲ ೬:೦ಗಂಟೆಯಿಂದ ರಾತ್ರಿ ೮:೦ಗಂಟೆ ವರೇಗೆ ಬಸ್ಸುಗಳಿವೆ. ಈ ಗುಡಿಯಲ್ಲಿದ ವಿಗ್ರಹ ಸ್ವಯಂಭೂವಾಗಿದೆ. ಈ ತರಹ ದೇವಾಲಯ ಭಾರತ ದೇಶದಲ್ಲಿ ಇದೊಂದೆ. ಮಂದಿರ ಅದ್ಬುತವಾದ ಶಿಲ್ಪಕಲಾಶೋಭಿತವಾಗಿದೆ. ಈ ಮಂದಿರದಲ್ಲಿ ಸ್ವಾಮಿ ಪಶ್ಚಿಮಮುಖವಾಗಿ ಇದ್ದಾನೆ. ಈ ದೇವಾಲಯದಲ್ಲಿ ಎರಡು ಧ್ವಜ ಸ್ಥಂಬಗಳಿವೆ. ಮಂದಿರ ಪ್ರಾಂಗಣದಲ್ಲಿ ೧೧ಶತಾಬ್ದಿಯ ಶಾಸನಗಳು ಕಂಡು ಬರುತ್ತವೆ. ದೇವಾಲಯ ಪ್ರಾಂಗಣದಲ್ಲಿ ೧೭ವ ಶತಾಬ್ದಿಯಲ್ಲಿ ಚಿರ್ತಿಸಿದ ಚಿತ್ರಕಲ್ಲುಗಳಿವೆ.

ಗ್ಯಾಲರೀ ಬದಲಾಯಿಸಿ

ಬಾಹ್ಯ ಸಂಪರ್ಕಗಳು ಬದಲಾಯಿಸಿ